July 25, 2026
Uncategorized

ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯೊಂದಿಗೆಕೋಟಿ ಕೋಟಿ ರಾಮ ಭಕ್ತರ ಅಭಿಲಾಷೆ ಈಡೇರುತ್ತಿದೆ

ಬೆಳ್ತಂಗಡಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಂಡು ಇದೀಗ ಭಕ್ತರ ಅಭಿಲಾಷೆಯಂತೆ ಜ.22ರಂದು ರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಕೋಟಿ ಕೋಟಿ ರಾಮ ಭಕ್ತರ ಅಭಿಲಾಷೆ ಈಡೇರುತ್ತಿದೆ. ವಾದ – ವಿವಾದಗಳು ಏನೇ ಇರಲಿ ರಾಮ ಮಂದಿರ ನಿರ್ಮಾಣಗೊಂಡಿರುವುದು ಬಹುತೇಕರ ಕನಸು ನನಸಾಗಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಶುಭಾಶಯಗಳು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ಅದರಲ್ಲಿ ಒಂದು ವಿಚಾರಕ್ಕೆ ನನ್ನ ಸಹಮತ ಇಲ್ಲ. ರಾಮ ಮಾಂಸಹಾರಿಯಾಗಿದ್ದ ಎಂಬ ವಿಚಾರ. ಈ ವಿಚಾರ ಕೆಲವು ರಾಮಭಕ್ತರನ್ನು ಕೆರಳಿಸಿದೆ.

ಆದರೆ ನಾನು ತಿಳಿದುಕೊಂಡ ಪ್ರಕಾರ ರಾಮ ಶುದ್ಧ ಸಸ್ಯಾಹಾರಿಯಾಗಿದ್ದ. ರಾಮ ಎಂದರೆ ಆತ ಕೇವಲ ಮನುಷ್ಯನಲ್ಲ. ದೈವಾಂಶ ಸಂಭೂತ. ರಾಮಾಯಣವನ್ನು ಓದುವಾಗ ಆತ ಮಾಂಸಾಹಾರಿ ಎಂಬ ಉಲ್ಲೇಖ ಎಲ್ಲೂ ಬರುವುದಿಲ್ಲ. ರಾಮ ಮಾಂಸಾಹಾರಿಯಾಗಿರಲು ಸಾಧ್ಯವೇ ಇಲ್ಲ. ಹಣ್ಣು ಹಂಪಲುಗಳನ್ನು ತಿಂದು ಕಾಡಲ್ಲಿ ಜೀವನ ಕಳೆದ ಎಂಬ ಉಲ್ಲೇಖವೇ ಸಿಗುತ್ತದೆ.

ಹಾಗಾಗಿ ರಾಮ ಭಕ್ತರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಮಹೋತ್ಸವದ ಸಮಯದಲ್ಲಿಯಾದರೂ ಅಥವಾ ಮಹೋತ್ಸವದ ಸಮಯದವರೆಗಾದರೂ ಸಸ್ಯಾಹಾರಿಗಳಾಗಿ ನಿಯಮವನ್ನು ಅಳವಡಿಸಿಕೊಂಡು ರಾಮನ ಬಗ್ಗೆ ಇಲ್ಲದ ವಿಚಾರಗಳನ್ನು ಹೇಳುವವರಿಗೆ ಸೆಡ್ಡು ಹೊಡೆಯಿರಿ ಎಂದು ಮನವಿ ಮಾಡುತ್ತೇನೆ. ಹಾಗೆಯೇ ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದು ರಾಮ ಮಂದಿರದ ವೈಭವಕ್ಕೆ ಸಾಕ್ಷಿಯಾಗಿರಿ ಎಂದು ಮನವಿ ಮಾಡುತ್ತೇನೆ.

#ನಿರಂಜನ್ ಜೈನ್ ಕುದ್ಯಾಡಿ

Related posts

ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಸಮ್ಮೇಳನ ಸಂಯೋಜನ ಸಮಿತಿ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯರು ಇದರಸಂಯುಕ್ತ ಆಶ್ರಯ: . ಕೊಯ್ಯೂರಿನಲ್ಲಿ ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Suddi Udaya

ದೇಶಭಕ್ತಿ ಗೀತೆ ಸ್ಪರ್ಧೆ: ಉಜಿರೆ ಶ್ರೀ. ಧ. ಮಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಯ ಪ್ರಾರಂಭೋತ್ಸವ

Suddi Udaya

ಮೃತ ಅಕಾಂಕ್ಷ ಮೃತದೇಹ ಮನೆಗೆ ಆಗಮನ : ಶಾಸಕ ಹರೀಶ್ ಪೂಂಜ ಭೇಟಿ, ಸಾಂತ್ವನ

Suddi Udaya

ಮಿತ್ತಬಾಗಿಲು ಗ್ರಾಮದ ಕೊಪ್ಪ ಬಾಳಪ್ಪ ಕುಂಬಾರರ ಮನೆಯ ಮೇಲ್ಚಾವಣಿ ಕುಸಿತ :ದುರಸ್ತಿಯ ವೆಚ್ಚ ಭರಿಸಿದ ಕಿರಣ್ ಚಂದ್ರ ಡಿ. ಪುಷ್ಪಗಿರಿ

Suddi Udaya

ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!