September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಅಯ್ಯೋಧ್ಯೆ ಶ್ರೀ ರಾಮಲಲ್ಲಾನ ಪ್ರತಿಷ್ಟೆ ನಾಳ ದೇವಸ್ಥಾನದಲ್ಲಿ ನೇರಪ್ರಸಾರ, ಭಜನೆ, ಕರಸೇವಕರಿಗೆ ಸನ್ಮಾನ

ಬೆಳ್ತಂಗಡಿ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಹನಮಾನ್ ಚಾಲಿಸ್ ಹಾಗೂ 1008 ರಾಮ ತಾರಕ ಮಂತ್ರ ಮತ್ತು ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.ಹಾಗೂ ದೇವರಿಗೆ ವಿಶೇಷ ಪೂಜೆ ಜರುಗಿತು.

ಈ ಹಿಂದೆ ಅಯ್ಯೋಧ್ಯೆಯಲ್ಲಿ ಕರಸೇವಕರಾಗಿ ಸೇವೆಸಲ್ಲಿಸಿದ ದಯಾನಂದ ಗೌಡ ಕಲ್ಕುರ್ಣಿ,ಪ್ರಭಾಕರ ಆಚಾರ್ಯ ಗೇರುಕಟ್ಟೆ,ರವಿ ಮಣಿಯಾಣಿ ಗೇರುಕಟ್ಟೆ ಅವರನ್ನು ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿದರು. ಸುಧಾಕರ ನಾಯ್ಕ್ ಹೀರ್ಯ ಅನುಪಸ್ಥಿತಿಯಲ್ಲಿ ಸಹೋದರ ದಯರಾಜ್ ಕೆ.ಪಿ.ಯವರನ್ನು ಹಾಗೂ ಕೆತ್ತನೆಯ ಕೆಲಸ ಮಾಡಿದ ಜಯಚಂದ್ರ ಆಚಾರ್ಯರ ಅನುಪಸ್ಥಿತಿಯಲ್ಲಿ ತಾಯಿ ಶ್ರೀಮತಿ ಲಲಿತ ಶಾಮರಾಯ್ ಆಚಾರ್ಯ ನಾಳ ಅವರನ್ನು ಸನ್ಮಾನಿಸಿ ಗೌರವಿಸಿದರು.

ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ.ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾಪನ ಸಮಿತಿ ಸದಸ್ಯ ವಸಂತ ಮಜಲು,ದೇವಸ್ಥಾನದ ಪ್ರಧಾನ ಆರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಂಬಾ ಅಳ್ವ,ದಿನೇಶ್ ಗೌಡ ಕೆ.ರಾಜೇಶ್ ಶೆಟ್ಟಿ. ಅಭಿವೃದ್ಧಿ ಮಂಡಳಿ ಅಧ್ಯಕ್ಷ ಯಾದವ ಗೌಡ, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಲೋಕೇಶ್ ಆಚಾರ್ಯ, ಎನ್.ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ, ಸ್ಥಳೀಯರಾದ ವೆಂಕಟೇಶ್ವರ ಭಟ್,ಡಾ.ಅನಂತ್ ಭಟ್,ಉದ್ಯಮಿ ವೆಂಕಟರಮಣ ಪೈ, ಜಾತ್ರೋತ್ಸವ ಸಮಿತಿ ಸದಸ್ಯರಾದ ಸುರೇಶ್ ಅರ್.ಎನ್.ಅಶೋಕ್ ಆಚಾರ್ಯ,ಸತೀಶ್ ಭಂಡಾರಿ,ಜಯಚಂದ್ರ ಆಚಾರ್ಯ,ಶಶಿಧರ ಶೆಟ್ಟಿ,
ಚಂದಯ್ಯ ಶೆಟ್ಟಿ, ಪೂವಪ್ಪ ಶೆಟ್ಟಿ,ದೇವಸ್ಥಾನದ ಪ್ರಭಂದಕ ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಭಕ್ತರು ಆಗಮಿಸಿದರು. ನಾಳ ದೇವಸ್ಥಾನದ ವಿವಿಧ ಸಮಿತಿಯವರು ಪೂರ್ಣ ಸಹಕಾರ ನೀಡಿದರು.

Related posts

ಬಿಜೆಪಿಯಿಂದ 241 ಬೂತ್‌ಗಳಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರಿಂದ ಮನೆ ಮನೆ ಪ್ರಚಾರ ಅಭಿಯಾನ

Suddi Udaya

ಬಿ.ಸಿ. ರೋಡ್ ನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್: ಬೆಳ್ತಂಗಡಿಯ ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

Suddi Udaya

ಗೇರುಕಟ್ಟೆ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಾಯ

Suddi Udaya

ಪಡಂಗಡಿ ಸೊಸೈಟಿಯ ಎಸ್ ಮಾರ್ಟ್, ಭದ್ರತಾ ಕೊಠಡಿ ಉದ್ಘಾಟನೆ

Suddi Udaya

ಕೊಕ್ಕಡ ಶ್ರೀ ರಾಮ ಸೇವಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ವಲಯ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!