23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಡಿರುದ್ಯಾವರದಲ್ಲಿ ಮುಂದುವರಿದ ಒಂಟಿ ಸಲಗನ ಸಂಚಾರ


ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹಲವೆಡೆ ಮೇ 27 ರಂದು ರಾತ್ರಿ ಒಂಟಿ ಸಲಗನ ಸಂಚಾರ ಮುಂದುವರಿದಿದೆ.


ಇಲ್ಲಿನ ಮಿತ್ತಕಟ್ಟಾಜೆ ಮೋಹನ ನಾಯ್ಕ ಎಂಬವರ ಮನೆಯಂಗಳಕ್ಕೆ ಬಂದು ಬಾಳೆ ಗಿಡ ತಿಂದು ಹಾಕಿದ ಬಳಿಕ ಸಲಗ ಫಣಿಕಲ್ಲು ಕಡೆ ಮುಂದುವರೆದಿದೆ. ಅಲ್ಲಿ ರಾಘವೇಂದ್ರ ಪಟವರ್ಧನ್ ರವರ ತೋಟಕ್ಕೆ ಕಾಡಾನೆ ಬರುತ್ತಿದ್ದಂತೆ ಮನೆಯವರಿಗೆ ತಿಳಿದು ಬಂದ ಕಾರಣ ಸ್ಥಳೀಯರು ಸೇರಿ ಆನೆಯನ್ನು ಓಡಿಸಿ, ಬೆಳಗಿನವರೆಗೆ ಗಸ್ತು ತಿರುಗಿದ ಕಾರಣ ಯಾವುದೇ ಕೃಷಿಹಾನಿ ಸಂಭವಿಸಿಲ್ಲ. ಸಲಗ ಇಲ್ಲಿಗೆ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.


ಮೇ 26 ರಂದು ರಾತ್ರಿ ಕಾಡಾನೆ ಇದೇ ಗ್ರಾಮದ ಬಸವದಡ್ಡು ಪರಿಸರದ ತೋಟಗಳಲ್ಲಿ ಕೃಷಿಹಾನಿ ಉಂಟು ಮಾಡಿತ್ತು. ಬಸವದಡ್ಡು, ಮಿತ್ತಕಟ್ಟಾಜೆ, ಫಣಿಕಲ್ಲು, ಮುಂಡಾಜೆ, ದುಂಬೆಟ್ಟು ಪರಿಸರ ಹತ್ತಿರ ಹತ್ತಿರವಿದ್ದು ಕಾಡಾನೆ ಉಪಟಳ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

Related posts

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ನೋಟಿಸ್ ನೀಡಿ, ಬಂಧನ ಕೈ ಬಿಟ್ಟು ಸಂಜೆ ಹಿಂದಿರುಗಿದ ಪೊಲೀಸರು; ರಾತ್ರಿ ಹೇಳಿಕೆ ನೀಡಲು ಬೆಳ್ತಂಗಡಿ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜ

Suddi Udaya

ವಕ್ಫ್ ಕಾಯ್ದೆಗೆ ಅಸಂವಿಧಾನಿಕ ತಿದ್ದುಪಡಿ: ಕಕ್ಕಿಂಜೆಯಲ್ಲಿ ಮೂರು ಪಂಚಾಯತ್ ವ್ಯಾಪ್ತಿಯ ಮಸ್ಜಿದ್ ಗಳ ಜಂಟಿ ಪ್ರತಿಭಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವನಮಹೋತ್ಸವ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಗಿಡಮೂಲಿಕೆಗಳ ಮಹತ್ವದ ಬಗ್ಗೆ ಕಿರು ಉಪನ್ಯಾಸ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!