September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ : ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯ ಮನೆ ದುರಸ್ತಿ ಕಾರ್ಯ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು

ಕಡಿರುದ್ಯಾವರ ಗ್ರಾಮದ ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯರಾದ ಲೀಲಾವತಿರವರಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಶನ ಸಿಗುತ್ತಿದ್ದು ಇವರ ಮನೆಗೆ ಯೋಜನಾಧಿಕಾರಿ ಸುರೇಂದ್ರ ಭೇಟಿ ನೀಡಿ ನಂತರ ಅವರು ವಾಸ ಇರುವ ಮನೆಯು ಸೋರುತ್ತಿದ್ದು ಯೋಜನಾಧಿಕಾರಿಯವರು ಶೌರ್ಯ ವಿಪತ್ತು ಘಟಕದಿಂದ ಸರಿ ಮಾಡಿಸಿಕೊಡುವ ಭರವಸೆ ನೀಡಿದರು.

ಈ ವೇಳೆ ಕಡಿರುದ್ಯಾವರ ಕುಕ್ಕಾವು ಶೌರ್ಯ ವಿಪತ್ತು ಘಟಕಕ್ಕೆ ವಲಯದ ಮೇಲ್ವಿಚಾರಕರಾದ ಜನಾರ್ಧನ್ ಘಟಕಕ್ಕೆ ಮಾಹಿತಿ ತಿಳಿಸಿದರು ಹಾಗಾಗಿ ಕುಕ್ಕಾವು ಘಟಕದ ಸಂಯೋಜಕರಾದ ರಶ್ಮಿ ಘಟಕದ ಪ್ರತಿನಿಧಿ ಲೋಕೇಶ್ ರವರು ಹಾಗೂ 10 ಮಂದಿ ಸ್ವಯಂಸೇವಕರನ್ನು ಸೇರಿಸಿಕೊಂಡು ಜೂ.7 ರಂದು ಲೀಲಾವತಿಯವರಿಗೆ ಕುಕ್ಕಾವು ಘಟಕದವರು ಮನೆಯ ಮೇಲಿನ ಹಂಚುಗಳನ್ನು ಕೆಳಗಿಳಿಸಿ ಸ್ವಲ್ಪ ಬೇರೆ ಕಡೆಯಿಂದ ಹಂಚುಗಳನ್ನು ತಂದು ಮನೆ ಸೋರದಂತೆ ರಿಪೇರಿ ಮಾಡಿದರು.

ಶ್ರಮದಾನದಲ್ಲಿ ಲೋಕೇಶ್, ದಾಮೋದರ, ಜಯಾನಂದ, ಸುರೇಶ್, ಯೋಗೇಶ್ ಬಾನಟ್ಟು, ಲಕ್ಷ್ಮಣಗೌಡ, ವಿಶ್ವನಾಥ, ರಾಜೇಶ್ ಏನ್ ಆರ್, ಗೀತಾ,ಭಾರತಿ ಹಾಗೂ ಅಕ್ಕಪಕ್ಕದ ಮನೆಯವರು ಕೂಡ ನಮ್ಮ ಜೊತೆ ಕೈಜೋಡಿಸಿದ್ದಾರೆ.

Related posts

ಬೆಳ್ತಂಗಡಿ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್, ಪ್ರದೀಪ್

Suddi Udaya

ಗಣೇಶೋತ್ಸವದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ನಗದು ಬಹುಮಾನದಲ್ಲಿ ಬಳಂಜ ಶಾಲೆಯ ಶಾಲಾ ಸಭಾಂಗಣದ ಶಾರದಾ ಕಲಾಮಂದಿರಕ್ಕೆ ಎರಡು ಫೋಕಸ್ ಲೈಟುಗಳ ಕೊಡುಗೆ ನೀಡಿದ ವಿದ್ಯಾರ್ಥಿಗಳು

Suddi Udaya

ಮಾ:29: ನಿಡ್ಲೆ ಪ್ರೌಢಶಾಲಾ ಕೊಠಡಿಗಳ ಹಸ್ತಾಂತರ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಅ.26-27: ಬೆಳ್ತಂಗಡಿಯಲ್ಲಿ ಕೋಲ್ಕತ್ತ ಸಾರಿ ಮೇಳ

Suddi Udaya

ಜ.8 ರಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವ ಸಂಭ್ರಮ: ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Suddi Udaya

“ಸಿಂಧೂರ್” ಅರ್ಥಪೂರ್ಣವಾದ ಆಪರೇಷನ್: ಪೀತಾಂಬರ ಹೆರಾಜೆ

Suddi Udaya
error: Content is protected !!