23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹಿಂದೂ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗೆ ದ.ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘ ಮತ್ತು ಸಮಗ್ರ ಹಿಂದೂ ಸಮಾಜ ಖಂಡನೆ: ಡಾ| ಎಂ.ಎಂ. ದಯಾಕರ್

ಉಜಿರೆ: ಹಿಂದೂಗಳ ವಿರುದ್ಧ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಯನ್ನು ವಿರೋಧಿಸಿ ಪೂಜ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳವರು ನೀಡಿದ ಹೇಳಿಕೆಯನ್ನು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಮತ್ತು ಎಂ.ಜಿ.ಹೆಗ್ಡೆ ಅವರು ಖಂಡಿಸಿರುವುದು ಸಖೇದಾಶ್ಚರ್ಯವುಂಟುಮಾಡಿದೆ.

ರಾಹುಲ್ ಅವರ ಹಿಂದು ಧರ್ಮದ ವಿರುದ್ಧದ ಹೇಳಿಕೆ ಮತ್ತು ರಾಮ ಮಂದಿರದ ವಿರುದ್ಧದ ಹೇಳಿಕೆಗಳನ್ನು ಒಬ್ಬ ಜವಾಬ್ದಾರಿಯುತ ಹಿಂದುವಾಗಿ ಪದ್ಮರಾಜ್ ಅವರೇ ಖಂಡಿಸಬೇಕಾಗಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಜೆಯಾಗಿ, ಓರ್ವ ಹಿಂದುವಾಗಿ ಪೇಜಾವರ ಶ್ರೀಗಳವರ ಹೇಳಿಕೆಗೆ ತಮ್ಮ ಬೆಂಬಲ ಸೂಚಿಸಬೇಕಾಗಿತ್ತು. ಸನಾತನ ಹಿಂದೂ ಧರ್ಮದ ಎಲ್ಲ ಸ್ವಾಮಿಗಳು, ಧಾರ್ಮಿಕ ಮುಖಂಡರುಗಳು ಅತ್ಯುಗ್ರ ಮಾತುಗಳಿಂದ ರಾಹುಲ್ ಅವರ ನಿಲುವನ್ನು ಖಂಡಿಸುತ್ತಿರುವಾಗ ಧರ್ಮವನ್ನು ರಕ್ಷಿಸುವ, ದೇಶದ ಅಭಿವೃದ್ಧಿಗೆ, ರಕ್ಷಣೆಗೆ ಸಹಾಯಕವಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟು ಅಭಿವೃದ್ಧಿ ಮರೆತು ದೇಶ ರಕ್ಷಣೆಗೆ ಮಾರಕವಾದ ಕೆಲಸಗಳಲ್ಲಿ ತೊಡಗಿಸಿಕೊಂಡು ಧರ್ಮ ನಿರ್ಮೂಲನೆ ಮಾಡ ಬೇಕೆಂದು ಹೇಳಿಕೊಂಡು ರಾಜಕೀಯಕ್ಕಾಗಿಯೇ ರಾಜಕೀಯ ಮಾಡುವ ರಾಹುಲ್ ಅವರ ಮಾತನ್ನು ಖಂಡಿಸಿ ಪೇಜಾವರ ಶ್ರೀಗಳವರು ನೀಡಿದ ಹೇಳಿಕೆಯನ್ನು ಸಮಸ್ತ ಹಿಂದೂ ಸಮಾಜ ಬೆಂಬಲಿಸಿ, , ಪದ್ಮರಾಜ್ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತದೆ ಪೂಜ್ಯ ಪೇಜಾವರ ಶ್ರೀಗಳವರು ಹಿಂದೂ ಧಾರ್ಮಿಕ ಮುಖಂಡರಾಗಿ, ಸಮಗ್ರ ಹಿಂದೂ ಸಮಾಜವನ್ನು ಮಾರ್ಗದರ್ಶನದಿಂದ ಮುನ್ನಡೆಸುವ ಸ್ವಾಮೀಜಿಗಳ ನಿಲುವನ್ನು ಸಮಗ್ರ ಹಿಂದೂ ಸಮಾಜ ಸ್ವಾಗತಿಸುತ್ತದೆ. ಹಿಂದೂ ಧರ್ಮವನ್ನು ಅವಹೇಳನ ಮಾಡಿರುವ ರಾಹುಲ್ ಗಾಂಧಿಯವರನ್ನು ವಿರೋಧಿಸಿರುವುದು ಸರಿಯಾಗಿಯೇ ಇರುತ್ತದೆ. ಈ ನಿಟ್ಟಿನಲ್ಲಿ ಪದ್ಮರಾಜ್ ಅವರು ಪೇಜಾವರ ಶ್ರೀಗಳವರ ವಿರುದ್ಧ ಮಾತನಾಡಿರುವುದು ಖೇದಕರ. ಅವರು ಶ್ರೀಗಳವರಲ್ಲಿ ಕ್ಷಮೆಕೋರಿ, ಬೆಂಬಲ ನೀಡಬೇಕಾಗಿತ್ತು. ಅವರ ಹೇಳಿಕೆಯನ್ನು ದ ಕ.ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಸಮಗ್ರ ಹಿಂದೂ ಸಮಾಜ ಖಂಡಿಸಿ ದೇವರು ಅವರಿಗೆ ಸದ್ಬುದ್ಧಿ ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ| ಎಂ.ಎಂ.ದಯಾಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕಲ್ಮಂಜ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ರಾಜ್ಯಮಟ್ಟದ ಕ್ರೀಡಾಕೂಟ: ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಪೂಜಾರಿ ಮರೋಡಿ ರವರಿಗೆ ಚಿನ್ನ ಹಾಗೂ ಬೆಳ್ಳಿಯ ಪದಕ

Suddi Udaya

ಬೆಳ್ತಂಗಡಿ ಜೆಕಾಂ ನೂತನ‌ ಅಧ್ಯಕ್ಷರಾಗಿ ಉದ್ಯಮಿ ವಿಶಾಲ್ ಅಗಷ್ಟೀನ್ ಆಯ್ಕೆ

Suddi Udaya

ಬೆಳ್ತಂಗಡಿ: ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಲಯನ್ ಎಂ. ಜಿ. ಶೆಟ್ಟಿಯವರಿಗೆ ಪ್ರತಿಷ್ಠಿತ ಎಮ್.ಜೆ.ಎಫ್ ಗೌರವ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವ

Suddi Udaya
error: Content is protected !!