September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಸಮಸ್ಯೆ

ತೆಕ್ಕಾರು ಗ್ರಾಮದಲ್ಲಿ ರಾತ್ರಿ ವೇಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್

ತೆಕ್ಕಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಿದ್ಯುತ್ ತೆಕ್ಕಾರು ಗ್ರಾಮದ ಸರಳಿಕಟ್ಟೆ, ಬಾಜಾರು, ಕುಟ್ಟಿಕಾಳ, ಬಂಟ್ವಾಳ ತಾಲೂಕಿನ ಮಣಿನಾಲ್ಗೂರು, ನಡುಮೊಗರು, ಬೈಲಮೆರ್, ನೆಲ್ಲಿಪಲ್ಕೆ, ಗೋದಾಮ್ ಗುಡ್ಡೆ, ಪೊರ್ಕಲದವರೆಗೆ ಮಳೆ ಆರಂಭವಾದಗಿನಿಂದ ವಿದ್ಯುತ್ ಸಮಸ್ಯೆ ಪ್ರಾರಂಭವಾಗಿದೆ. ರಾತ್ರಿ ೧೦ ಗಂಟೆಗೆ ಹೋದಂತಹ ಕರೆಂಟ್ ಬರುವುದು ಬೆಳಗ್ಗೆ. ಸಂಜೆ ಏನಾದರೂ ಫ್ಯೂಸ್ ಹೋಗಿದೆ ಎಂದು ದೂರು ನೀಡಿದರೆ ಅದನ್ನು ಪವರ್‌ಮ್ಯಾನ್‌ಗಳು ಮರುದಿನ ಬಂದು ಹಾಕುತ್ತಾರೆ.
ತೆಕ್ಕಾರು ಗ್ರಾಮದಲ್ಲಿ ಇಬ್ಬರು ಖಾಯಂ ಪವರ್‌ಮ್ಯಾನ್‌ಗಳು ಇದ್ದಾರೆ. ಎಲ್ಲಿಯಾದರು ವಿದ್ಯುತ್ ಕಂಬ, ತಂತಿ ಬಿದ್ದಿದೆ ಎಂದು ದೂರು ನೀಡಿದರೆ ಇವತ್ತು ಜನ ಇಲ್ಲ ನಾಳೆ ಬರುತ್ತೇವೆ ಎಂದು ಹೇಳಿ ಹೋಗುತ್ತಾರೆ. ಜನರಿಗೆ ಇದ್ದರಿಂದ ಸಮಸ್ಯೆ ಆಗುತ್ತಿದೆ.

ಪಂಚಾಯತ್‌ನಲ್ಲೂ ಸರಿಯಾಗಿ ಕರೆಂಟ್ ಇರುವುದಿಲ್ಲ. ಗ್ರಾಮಸ್ಥರು ಏನಾದರು ಕೆಲಸಕ್ಕಾಗಿ ಬಂದರೆ, ಎಲ್ಲಾ ಕೆಲಸಗಳು ಕಂಪ್ಯೂಟರ್‌ನಲ್ಲಿ ಆಗುವುದರಿಂದ ಸರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ, ಗ್ರಾಮಸ್ಥರು ಪಂಚಾಯತ್ ಸಿಬ್ಬಂದಿಗಳು ಕೆಲಸ ಮಾಡುವುದಿಲ್ಲ ಎಂದು ಹಿಡಿ ಶಾಪ ಹಾಕಿ ಹೋಗುತ್ತಾರೆ. ಮೇ ತಿಂಗಳಿನಲ್ಲಿಯೇ ಮರದ ಗೆಲ್ಲುಗಳನ್ನು ತೆಗೆಯುವಂತಹ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಇಂಟರ್ನ್ಯಾಷನಲ್ ಓಪನ್ ಫಿಡೆ ರೇಟೆಡ್ ಪಂದ್ಯಾಟ : ಬೆಸ್ಟ್ ಅನ್‌ರೇಟೆಡ್ ವಿಭಾಗದಲ್ಲಿ ಕೊಕ್ಕಡದ ಸಮರ್ಥ್ ಭಟ್ ತೃತೀಯ

Suddi Udaya

ನಾರಾವಿ ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಿಂದ 274 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ಮೊದಲ ಸುತ್ತಿನಲ್ಲೇ ಏಮ್ಸ್ ಗೆ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ: ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

Suddi Udaya

ಉಜಿರೆ: ಅನುಗ್ರಹ ಕಾಲೇಜಿನಲ್ಲಿ ಕನ್ನಡ ಸಂವರ್ಧನೆ ಕಾರ್ಯಕ್ರಮ

Suddi Udaya
error: Content is protected !!