22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜೇನು ಕೃಷಿ ತರಬೇತಿ

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆ.21, 22 ರಂದು ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹಮ್ಮಿಕೊಂಡಿದ್ದ ಜೇನು ಕೃಷಿ ಕುರಿತು ತರಬೇತಿಯಲ್ಲಿ ಆ.22 ರಂದು ಶ್ಯಾಮ್ ಸುಂದರ ಭಟ್ ಆಲಡ್ಕ ಬೆಳ್ತಂಗಡಿ ಇವರ “ಮಧುಮಕ್ಷಿಕ” ಎಂಬ ಹೆಸರಿನ ಜೇನು ಸಾಕಾಣಿಕಾ, ಸಂಸ್ಕರಣಾ ಘಟಕಕ್ಕೆ ಭೇಟಿ ಕೈಗೊಳ್ಳಲಾಯಿತು.

ಇವರು ತುಡುವೆ ಜೇನು, ನಸರಿ ಜೇನು ಮಾರಾಟದ ಜೊತೆಗೆ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಯುವ ಜೇನು ಕೃಷಿಕರಿಗೆ ಮಾದರಿ ಆಗಿದ್ದಲ್ಲದೆ ಅನೇಕ ತರಬೇತಿಯನ್ನು ನೀಡಿದ್ದಾರೆ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ. ಇವರ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳೆಂದರೆ ಜೇನುತುಪ್ಪದಿಂದ ತಯಾರಿಸಿದ ಲೇಹ್ಯ (ಮಧು ಕಲ್ಪ) ಸಿರಪ್ (ಮಧುಸಾರ), ಶರಬತ್ (ಮಧುಪೇಯರಸ), ಜೇನು, ನೆಲ್ಲಿಕಾಯಿ ಮತ್ತು ಬೆಲ್ಲ ಹಾಕಿ ಮಾಡಿರುವ ಎರಡು ರೀತಿಯ ಚಟ್ ಪಟ್ ಕ್ಯಾಂಡಿ, ಜೇನು ಮೇಣದ ಸೌಂದರ್ಯ ವರ್ಧಕ ಕ್ರೀಮ್ ಇತ್ಯಾದಿ. ಆಸಕ್ತರು ಅವರ ಜಾಲತಾಣ https://madhumakshika.com/ ಕೇ ಭೇಟಿ ನೀಡಬಹುದು.

ಪ್ರಭಾಕರ ಮಯ್ಯ ಪ್ರಗತಿಪರ ಕೃಷಿಕರು ಸುರ್ಯ, ನಡ ಗ್ರಾಮ ಬೆಳ್ತಂಗಡಿ ತಾ. ಇವರು ಪ್ರಾತ್ಯಕ್ಷಿಕೆ ವೇಳೆ ರೈತರಿಗೆ ಮಾಹಿತಿ ನೀಡಿದರು. ಹಾಗೂ ಬೆಳಿಗ್ಗಿನ ಅವಧಿಯಲ್ಲಿ ಮಲ್ಲಿಗೆ ಕೃಷಿ ಕುರಿತು ತರಬೇತಿ ನೀಡಿದರು. ಕೃಷಿ ಅಧಿಕಾರಿ ಗಣೇಶ್ ತರಬೇತಿಯನ್ನು ಆಯೋಜಿಸಿದ್ದರು.

Related posts

ಕಳಿಯ: ಬಾಕಿಮಾರು ನಿವಾಸಿ ಶ್ರೀಮತಿ ರುಕ್ಮಿಣಿ ನಿಧನ

Suddi Udaya

ತುಂಬೆದಲೆಕ್ಕಿ ಶಿಲಾಮಯ ಭಜನ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ರವರಿಗೆ ಮಂಗಳೂರು ಹೈಕೋರ್ಟ್ ಪೀಠ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅಭಿನಂದನೆ

Suddi Udaya

ವೇಣೂರು ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಎಸ್ ಡಿ ಎಂ ಕಾಲೇಜು ಬಿ.ವೋಕ್ ವಿಭಾಗದ ವಿದ್ಯಾರ್ಥಿಗಳಿಗೆ ಹೈಪರ್ ಲೋಕಲ್ ನ್ಯೂಸ್ ಮೀಡಿಯಾದ ಮಾಹಿತಿ ಕಾರ್ಯಗಾರ

Suddi Udaya
error: Content is protected !!