September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜೇನು ಕೃಷಿ ತರಬೇತಿ

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆ.21, 22 ರಂದು ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹಮ್ಮಿಕೊಂಡಿದ್ದ ಜೇನು ಕೃಷಿ ಕುರಿತು ತರಬೇತಿಯಲ್ಲಿ ಆ.22 ರಂದು ಶ್ಯಾಮ್ ಸುಂದರ ಭಟ್ ಆಲಡ್ಕ ಬೆಳ್ತಂಗಡಿ ಇವರ “ಮಧುಮಕ್ಷಿಕ” ಎಂಬ ಹೆಸರಿನ ಜೇನು ಸಾಕಾಣಿಕಾ, ಸಂಸ್ಕರಣಾ ಘಟಕಕ್ಕೆ ಭೇಟಿ ಕೈಗೊಳ್ಳಲಾಯಿತು.

ಇವರು ತುಡುವೆ ಜೇನು, ನಸರಿ ಜೇನು ಮಾರಾಟದ ಜೊತೆಗೆ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಯುವ ಜೇನು ಕೃಷಿಕರಿಗೆ ಮಾದರಿ ಆಗಿದ್ದಲ್ಲದೆ ಅನೇಕ ತರಬೇತಿಯನ್ನು ನೀಡಿದ್ದಾರೆ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ. ಇವರ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳೆಂದರೆ ಜೇನುತುಪ್ಪದಿಂದ ತಯಾರಿಸಿದ ಲೇಹ್ಯ (ಮಧು ಕಲ್ಪ) ಸಿರಪ್ (ಮಧುಸಾರ), ಶರಬತ್ (ಮಧುಪೇಯರಸ), ಜೇನು, ನೆಲ್ಲಿಕಾಯಿ ಮತ್ತು ಬೆಲ್ಲ ಹಾಕಿ ಮಾಡಿರುವ ಎರಡು ರೀತಿಯ ಚಟ್ ಪಟ್ ಕ್ಯಾಂಡಿ, ಜೇನು ಮೇಣದ ಸೌಂದರ್ಯ ವರ್ಧಕ ಕ್ರೀಮ್ ಇತ್ಯಾದಿ. ಆಸಕ್ತರು ಅವರ ಜಾಲತಾಣ https://madhumakshika.com/ ಕೇ ಭೇಟಿ ನೀಡಬಹುದು.

ಪ್ರಭಾಕರ ಮಯ್ಯ ಪ್ರಗತಿಪರ ಕೃಷಿಕರು ಸುರ್ಯ, ನಡ ಗ್ರಾಮ ಬೆಳ್ತಂಗಡಿ ತಾ. ಇವರು ಪ್ರಾತ್ಯಕ್ಷಿಕೆ ವೇಳೆ ರೈತರಿಗೆ ಮಾಹಿತಿ ನೀಡಿದರು. ಹಾಗೂ ಬೆಳಿಗ್ಗಿನ ಅವಧಿಯಲ್ಲಿ ಮಲ್ಲಿಗೆ ಕೃಷಿ ಕುರಿತು ತರಬೇತಿ ನೀಡಿದರು. ಕೃಷಿ ಅಧಿಕಾರಿ ಗಣೇಶ್ ತರಬೇತಿಯನ್ನು ಆಯೋಜಿಸಿದ್ದರು.

Related posts

ಗೇರುಕಟ್ಟೆ: ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಆರ್ ಪಿಎಲ್ ತರಬೇತಿಯ ಕಿಟ್ ಮತ್ತು ಸರ್ಟಿಫಿಕೇಟ್ ವಿತರಣೆ

Suddi Udaya

ಶಿಶಿಲ: ಗುಂಡಿಗಾಡು ನಿವಾಸಿ ದೇಜಮ್ಮ ನಿಧನ

Suddi Udaya

ಅಳದಂಗಡಿ: ಜೋಪಡಿಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆಸರೆಯಾದ ಅಳದಂಗಡಿ ಗ್ರಾ.ಪಂ ಪ್ರೇಮರವರ ಮನೆ ದುರಸ್ಥಿ, ಮೇಲ್ಛಾವಣಿಗೆ ಶೀಟ್ ಅಳವಡಿಕೆ, ಸುದ್ದಿ ಉದಯ ಪತ್ರಿಕೆಯ ವರದಿಗೆ ಸಾರ್ವಜನಿಕರಿಂದ ಮೆಚ್ಚುಗೆ

Suddi Udaya

ಧರ್ಮಸಂರಕ್ಷಣ ಯಾತ್ರೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಪ್ಲಾನ್” : : ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಈ ಸುದ್ದಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ಅಧ್ಯಕ್ಷರುಗಳ ಸ್ಪಷ್ಟನೆ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸೆಕ್ಟ‌ರ್ ಆಗಿ ಬಸಲಿಂಗಯ್ಯ ಜಿ. ಸುಬ್ರಪುರಮಠ್ ನೇಮಕ

Suddi Udaya
error: Content is protected !!