September 6, 2026
Uncategorized

ಮಾಲಾಡಿ: ಜ್ವರದಿಂದ ಬಳಲಿ ಯುವಕ ಮೃತ್ಯು

ಮಾಲಾಡಿ: ಜ್ವರ ಹಾಗೂ ಕೆಮ್ಮುನಿಂದ ಬಳಲುತ್ತಿದ್ದ ಮಾಲಾಡಿ ಗ್ರಾಮದ ನಿವಾಸಿ ಚೇತನ್ (೨೫ವ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.೧೨ರಂದು ವರದಿಯಾಗಿದೆ.


ಚೇತನ್ ಅವರು ಸುಮಾರು ೧೦-೧೫ ದಿನಗಳಿಂದ ಜ್ವರ ಹಾಗೂ ಕೆಮ್ಮುವಿನಿಂದ ಬಳಲುತ್ತಿದ್ದು ಈ ಬಗ್ಗೆ ಸ್ಥಳಿಯ ವೈದ್ಯರಿಂದ ಔಷದೋಪಚಾರ ಮಾಡಿದರೂ ಕೂಡಾ ಜ್ವರ ಕಡಿಮೆಯಾಗದೇ ಇದ್ದುದರಿಂದ ನ.೧೨ ರಂದು ಮಧ್ಯಾಹ್ನ ಬಂಟ್ವಾಳ ಆಸ್ಪತ್ರೆಗೆ ಹೋಗಿ ಜೌಷಧಿ ತಂದಿದ್ದರು. ಸಂಜೆ ಸಹೋದರ ಮಿಥುನ್ ತನ್ನ ದೊಡ್ಡಪ್ಪನ ಮಕ್ಕಳಾದ ವಿವೇಕ್ ಹಾಗೂ ಅಶೋಕ್ ಕುಮಾರ್ ರವರೊಂದಿಗೆ ಮನೆ ಸಮೀಪವಿರುವ ಸರ್ವಿಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಲ್ಲಿಗೆ ಬಂದ ಚೇತನ್ ನಾನು ಬಂಟ್ವಾಳ ಆಸ್ಪತ್ರೆಯಿಂದ ಔಷಧಿ ತೆಗೆದುಕೊಂಡು ಬಂದಿದ್ದೇನೆ. ನನಗೆ ತುಂಬಾ ಸುಸ್ತು ಅಗುತ್ತಿದೆ ಎಂದು ಹೇಳುತ್ತಾ, ಒಮ್ಮೆಲೆ ವಾಂತಿ ಮಾಡಲು ಪ್ರಾರಂಭಿಸಿದ್ದು, ಕೂಡಲೇ ಅವರ ಸಹೋದರ ಮಿಥುನ್ ಹಾಗೂ ದೊಡ್ಡಪ್ಪನ ಮಕ್ಕಳು ಉಪಚರಿಸಿ ಚಿಕಿತ್ಸೆ ಬಗ್ಗೆ ಮಡಂತ್ಯಾರಿಗೆ ಕರೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ.: ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯರಿಗೆ. ರಾಜ್ಯ ರಾಜೋತ್ಸವ ಪ್ರಶಸ್ತಿ

Suddi Udaya

ಕುತ್ಲುರು ಸರಕಾರಿ ಉನ್ನತಿಕರಿಸೀದ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಭೇಟಿ:ವಿದ್ಯಾರ್ಥಿಗಳೊಂದಿಗೆ ಸಂವಾದ

Suddi Udaya

ಬೆಳ್ತಂಗಡಿ ವಿದಾನಸಭಾ ಕ್ಷೇತ್ರದ ಮಹಿಳಾ ಸದಸ್ಯತ್ವ ನೋಂದಾವಣಾ ಅಭಿಯಾನ ಕಾರ್ಯಕ್ರಮ

Suddi Udaya

ಹಿರಿಯ ಪುರುಷ ಮತ್ತು ಮಹಿಳಾ ಥ್ರೋಬಾಲ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಕರ್ನಾಟಕವನ್ನು ಪ್ರತಿನಿಧಿಸಲು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿ ಯುನಿತ್ ಕೆ. ಆಯ್ಕೆ

Suddi Udaya

ರಾಜ್ಯ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ಮಲವಂತಿಗೆ ಗ್ರಾ.ಪಂ ಎದುರು ಪ್ರತಿಭಟನೆ

Suddi Udaya

ಹೆಡ್ ಕಾನ್ಸ್ಟೇಬಲ್ . ವಿಜಯ ಕುಮಾರ್ ಬೆಳ್ತಂಗಡಿಯವರಿಗೆ ಮೆಸ್ಕಾಂ ಪ್ರಧಾನ ಕಚೇರಿಯಲ್ಲಿ ಸನ್ಮಾನ

Suddi Udaya
error: Content is protected !!