23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ: ಉಜಿರೆ ಎಸ್.ಡಿ.ಎಂ. ಕಾಲೇಜು ಪ್ರಥಮ

ಉಜಿರೆ: ಸುರತ್ಕಲ್ ಗೋವಿಂದ ದಾಸ ಕಾಲೇಜು ಹಾಗೂ ಸುರತ್ಕಲ್ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಆಯೋಜನೆ ಮಾಡಿರುವ “ಯಕ್ಷಯಾನ-2025” ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ಯಕ್ಷಗಾನ ಕಲಾಕೇಂದ್ರದ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಯಕ್ಷಗುರು ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶನದ ಎಸ್.ಡಿ.ಎಂ. ತಂಡ “ಸುಧನ್ವ ಮೋಕ್ಷ” ಪ್ರಸಂಗವನ್ನು ಪ್ರಸ್ತುತ ಪಡಿಸಿ ಪ್ರಥಮ ಸ್ಥಾನ ಪಡೆದು, ನಾಲ್ಕು ವೈಯಕ್ತಿಕ ಬಹುಮಾನವನ್ನು ಪಡೆದುಕೊಂಡಿದೆ.

ಪುಂಡುವೇಷ ಪ್ರಥಮ ಸುಬ್ರಮಣ್ಯ ಭಟ್ (ಸುಧನ್ವ), ರಾಜವೇಷ ದ್ವಿತೀಯ ಸೌರವ್ ಶೆಟ್ಟಿ (ಅರ್ಜುನ), ಸ್ತ್ರೀ ವೇಷ ಪ್ರಥಮ ಸಾಕ್ಷಿ (ಪ್ರಭಾವತಿ), ಹಾಸ್ಯ ಪ್ರಥಮ ಅಮೋಘ ಶಂಕರ(ದೂತ) ವೈಯಕ್ತಿಕ ಬಹುಮಾನ. ಮಿಥುನ್ ರಾಜ್ (ಹೃಷಕೇತು), ವರ್ಷಿತ್(ಹಂಸಧ್ವಜ), ಹಾರ್ದಿಕ್ (ಅನುಸಾಲ್ವ), ಪ್ರಾವಿಣ್ಯ (ಕೃಷ್ಣ). ರಂಗಸಜ್ಜಿಕೆಯಲ್ಲಿ ಕು. ಮೋನಿಷಾ ಹಾಗೂ ಕು. ಮನಸ್ವಿ ಸಹಕರಿಸಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು, ಚೆಂಡೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ, ಮದ್ದಳೆಯಲ್ಲಿ ಆದಿತ್ಯ ಹೊಳ್ಳ ಭಾಗವಹಿಸಿದರು.

Related posts

ಗೇರುಕಟ್ಟೆ: ಬಾಲಕ ಶವ ಪತ್ತೆ ಪ್ರಕರಣ: ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ: ಸಮಗ್ರ ತನಿಖೆಗೆ ಆಗ್ರಹ

Suddi Udaya

ಎಸ್‌ಡಿಪಿಐ ಸಂಸ್ಥಾಪನಾ ದಿನ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಬೆಳಾಲು: ಪೆರಿಯಡ್ಕ ಶಾಲಾ ರಜತ ಮಹೋತ್ಸವ: ಪ್ರವೇಶ ದ್ವಾರ ಲೋಕಾರ್ಪಣೆ- ಸಭಾ ಕಾರ್ಯಕ್ರಮ

Suddi Udaya
error: Content is protected !!