22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ವರದಿ

ಪಿಲಿಗೂಡು: ಯಾಂತ್ರಡ್ಕದಲ್ಲಿ ಕಳ್ಳತನ: ನಗ‌- ನಗದು ದೋಚಿ ಪರಾರಿಯಾದ ಖದೀಮ

ಪಿಲಿಗೂಡು: ಪಿಲಿಗೂಡು ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ ಉಸ್ಮಾನ್ ಎಂಬವರ ಮನೆಯೊಳಗೆ ಕಳ್ಳರು ಪ್ರವೇಶಿಸಿ ನಗ ಹಾಗೂ ನಗದು ಎಗರಿಸಿದ ಘಟನೆ ಎ.10 ರಂದು ನಡೆದಿದೆ.

ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಉಸ್ಮಾನ್ ಎಂಬವರ ಮನೆಯೊಳಗೆ ಹೊಕ್ಕ ಕಳ್ಳರು ಸುಮಾರು 58 ಸಾವಿರ ರೂಪಾಯಿ ಹಾಗೂ 2 ಪವನ್ ಚಿನ್ನವನ್ನು ಕಪಾಟು ಹೊಡೆದು ದೋಚಿ ಪರಾರಿಯಾಗಿದ್ದಾರೆ. ಉಸ್ಮಾನ್ ಹಾಗೂ ಮನೆಯವರು ಬೆಳ್ಳಗ್ಗೆ 10:30 ಗಂಟೆ ವೇಳೆಗೆ ಮದುವೆ ಕಾರ್ಯಕ್ರಮ ಹೋಗಿದ್ದು ಸಂಜೆ 3: 30 ಗಂಟೆ ವೇಳೆ ಬರುವಾಗ ಈ ಘಟನೆ ನಡೆದಿದೆ.

ಬಡ ವರ್ಗದ ಕುಟುಂಬ ಉಸ್ಮಾನ್ ಅವರದ್ದಾಗಿದ್ದು ಸಾಲಕ್ಕೆ ಪಡೆದುಕೊಂಡಿರುವ ಮೊತ್ತವನ್ನು ಹಿಂತಿರುಗಿಸಲು ಕಪಾಟಿನಲ್ಲಿ ಇಟ್ಟಿದ್ದರು. ಆದರೆ ಖದೀಮರು ಅದನ್ನೇ ಎಗರಿಸಿ ಮನೆಯ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಐಪಿಎಸ್ ಅಧಿಕಾರಿ ಮನೀಷಾ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಬೆಳ್ತಂಗಡಿ: ಅಚ್ಚಿನಡ್ಕದಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ರುಡ್ ಸೆಟ್ ಸಂಸ್ಥೆಯಲ್ಲಿ ರೆಫ್ರಿಜರೇಷನ್ ಮತ್ತು ಏರ್‌ ಕಂಡೀಷನಿಂಗ್ ತರಬೇತಿ ಸಮಾರೋಪ

Suddi Udaya

ಜ.11ರಂದು ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯಕ್ಕೆ ಹಾಜರಾಗಲು ಕೋರ್ಟ್ ಆದೇಶ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಯುವನಿಧಿ ನೊಂದಣಿ ಶಿಬಿರ

Suddi Udaya

ಬಂದಾರು: ಮುರ್ತಾಜೆ ಎಂಬಲ್ಲಿ ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಮಾ.9: ಬಜಿರೆಯಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಯಂಗ್ ಬಾಯ್ಸ್ ಟ್ರೋಫಿ

Suddi Udaya
error: Content is protected !!