July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾವೂರು: ಮುರ ಮದರಸದಲ್ಲಿ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರ

ನಾವೂರು: ಒಳಿತಿನಲ್ಲಿ ಒಟ್ಟು ಸೇರೋಣ ಮಾದಕ ದ್ರವ್ಯವನ್ನು ಸೋಲಿಸೋಣ ಎಸ್.ಜೆ ಎಮ್ ಮುರ ರೇಂಜ್ ಇದರ ಕೇಂದ್ರ ಮದ್ರಸವಾದ ನೂರುಲ್ ಹುದಾ ಮದರಸ ಮುರ ಎಸ್.ಬಿ.ಎಸ್ ವತಿಯಿಂದ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರವು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ನಿರ್ದೇಶನಂತೆ ಮೇ 25 ಮುರ ಮದರಸ ಹಾಲಿನಲ್ಲಿ ನಡೆಯಿತು.


ಇಸ್ತಿರಾಹ ಎಂಬ ಕಾರ್ಯಕ್ರಮಕ್ಕೆ ಸ್ಥಳೀಯ ಖತೀಬರಾದ ಬಹು: ಬಶೀರ್ ಸಅದಿ ಮುರ ಚಾಲನೆ ನೀಡಿದರು. ಎಸ್.ಬಿ.ಎಸ್ ಉಪಾಧ್ಯಕ್ಷ ಮುಹಮ್ಮದ್ ಜಹ್ ಫರ್ ರವರ ಖಿರಾಅತ್ ಪಾರಾಯಣದೂಂದಿಗೆ ಸದರ್ ಉಸ್ತಾದರಾದ ಅಬ್ದುಲ್ ಹಮೀದ್ ಝಹ್ರಿ ಪವಿತ್ರವಾದ ಅಲ್ಲಾಹನ ನಾಮದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹ ಅಧ್ಯಾಪಕರಾದ ಖಾಲಿದ್ ಮದನಿ ಲಹರಿಯ ದುಷ್ಪರಿಣಾಮದ ಕುರಿತು ತರಗತಿ ನಡೆಸಿದರು. ನಿರಿಂದಿ ಮದರಸ ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಯವರು ಆದರ್ಶ ಸಮ್ಮೇಳನ ಎಂಬ ವಿಷಯದ ಕುರಿತು ಸವಿಸ್ತಾರವಾಗಿ ಬೋಧಿಸಿದರು. ಎಸ್ .ಬಿ.ಎಸ್.ಕಾರ್ಯದರ್ಶಿ ಮುಬಶ್ಶಿರ್ ಶಾಃ ಕಮಾಲ್ ಮಾದಕ ದ್ರವ್ಯ ದ ಕುರಿತು ಭಾಷಣ ಮಾಡಿದರು. ಎತ್ತರಕ್ಕೆ ಹಾರೋಣ ಎಂಬ ಕಾರ್ಯಕ್ರಮಕ್ಕೆ ಸಹ ಅದ್ಯಾಪಕರಾದ ಅಮೀರ್ ಸಅದಿ ಯವರು ನೇತೃತ್ವ ನೀಡಿದರು. ನಂತರ ಕ್ರಾಂತಿ ಗೀತೆಯು ಎಸ್ ಯಸ್.ಬಿ.ಎಸ್ ಅಧ್ಯಕ್ಷ ಮುಹಮ್ಮದ್ ಫೈಝಲ್ ರವರ ನೇತೃತ್ವದಲ್ಲಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಬಶೀರ್ ಸ‌ಅದಿ ಆತ್ಮೀಯ ಮಜ್ಲಿಸ್, ಬುರ್ದಾ ಖುರ್ ಆನ್ ಪಾರಾಯಣ, ಸ್ವಲಾತ್, ದಿಕ್ರ್ ಹಾಗೂ ದುಆ ಮಜ್ಲಿಸ್ ಗೆ ನೇತೃತ್ವ ವಹಿಸಿದರು. .ಎಸ್.ಬಿ.ಎಸ್. ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸ್ವಾಗತಿಸಿ ಜೊ. ಕಾರ್ಯದರ್ಶಿ ಮುಹಮ್ಮದ್ ಶೈಮ್ ಧನ್ಯವಾದ ಸಲ್ಲಿಸಿದರು. ಮುರ ಮದ್ರಸದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಇದರ ಅಧೀನದಲ್ಲಿರುವ ಅಲ್ -ಖಿಲ್ರಿಯಾ ನಿರಿಂದಿ ಮದ್ರಸದ ಎಲ್ಲಾ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಸ್.ಬಿ.ಎಸ್ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಪಹಾರ ನೀಡಲಾಯಿತು. ಎಮ್ ಜೆ ಎಮ್ ಮುರ ನಾವೂರು ಆಡಳಿತ ಸಮಿತಿಯ ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು.

Related posts

ಟೈಲರ್ ಮಹಿಳೆಗೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಬೆಳ್ತಂಗಡಿ ಟೈಲರ್ ಎಸೋಸಿಯೇಶನ್ ವತಿಯಿಂದ ಬೆಳ್ತಂಗಡಿ ಮುಖ್ಯ ಠಾಣಾಧಿಕಾರಿಗೆ ಮನವಿ

Suddi Udaya

ಎಸ್.ಡಿ.ಎಂ ಐಟಿ ಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಮಿನಿ ಪ್ರಾಜೆಕ್ಟ್ ಪ್ರದರ್ಶನ

Suddi Udaya

ಜೆಇಇ, ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ನ ಸುಪ್ರೀತ್ ಎಂ ಬಡಿಗೇರ ಜಿಲ್ಲೆಗೆ ಪ್ರಥಮ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲರ್ಸ್ ವತಿಯಿಂದ ಎಸ್‌ಎಸ್‌ಎಲ್‌ಸಿ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ತನುಶ್ರೀ ರವರಿಗೆ ಸನ್ಮಾನ

Suddi Udaya

ಉಜಿರೆ ಹಳೆಪೇಟೆ ಸ.ಪ್ರೌ. ಶಾಲೆಯ ಹಿಂಬದಿಯಲ್ಲಿ ಮಣ್ಣು ಕುಸಿತ: ಶಾಸಕ ಹರೀಶ್ ಪೂಂಜ ಭೇಟಿ: ತಕ್ಷಣವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ

Suddi Udaya

ಜ.11: ಅರಸಿನಮಕ್ಕಿಯಲ್ಲಿ ಮಲ್ಲ ಚಾವಡಿ ಹಬ್ಬ ಮತ್ತು ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

Suddi Udaya
error: Content is protected !!