September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಕೊಯ್ಯೂರು: ಶ್ರೀಕೃಷ್ಣ ಭಜನಾ ಮಂಡಳಿಗೆ ಇನ್ವರ್ಟರ್ ಕೊಡುಗೆ

ಕೊಯ್ಯೂರು: ಆದೂರುಪೆರಾಲ್ ಶ್ರೀಕೃಷ್ಣ ಭಜನಾ ಮಂಡಳಿಯ ಸದಸ್ಯರು ಇತ್ತೀಚೆಗೆ ಪಾಂಬೇಲು ದೇವರಾಜ ಗೌಡರ ನೂತನ ಮನೆಯ ವಾಸ್ತು ಪೂಜೆಯ ಸಂದರ್ಭದಲ್ಲಿ ಭಜನಾ ಸೇವೆಯನ್ನು ನಡೆಸಿದರು.

ಭಜನಾ ಮಂಡಳಿಯ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಒಗ್ಗಟ್ಟು ಹಾಗೂ ವಹಿಸಿಕೊಂಡಂತಹ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿಗೆ ದೇವರಾಜ ಗೌಡ ಹಾಗೂ ಅವರ ಮನೆಯವರು ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಸುಮಾರು ರೂ.24 ಸಾವಿರ ವೆಚ್ಚದ ಇನ್ವರ್ಟರ್ ಕೊಡುಗೆಯಾಗಿ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಪಾಂಬೇಲು ದೇವರಾಜ ಗೌಡರ ಮಗ ಡಾಕ್ಟರ್ ಕಾರ್ತಿಕ್ ಅವರ ಪತ್ನಿ ಶ್ರೀಮತಿ ನಿರೀಕ್ಷಾ, ಕಾರ್ತಿಕ್ ರವರ ಮಗ ವಿಹಾನ್‌ಕೃಷ್ಣ, ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಕಾಸು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್. ಭಜನಾ ಮಂದಿರದ ಉಪಾಧ್ಯಕ್ಷ ಸುಂದರ ಗೌಡ ಕಜೆಕೋಡಿ, ಕಾರ್ಯದರ್ಶಿ ಓಬಯ್ಯ ನಾಯ್ಕ, ಕೋಶಾಧಿಕಾರಿ ಬಾಲಕೃಷ್ಣ ಸಾಲ್ಯಾನ್, ಲೆಕ್ಕಪರಿಶೋಧಕರುಗಳಾದ ಲಿಂಗಪ್ಪ ಗೌಡ ಬೆರ್ಕೆ, ಹೇಮಂತ ಗೌಡ ದೇಂತ್ಯಾರುಬೊಟ್ಟು, ಭಜನಾ ಮಂಡಳಿಯ ಅರ್ಚಕ ಹೇಮಂತ ಗೌಡ ನಾಗನೊಡಿ, ಮಾಜಿ ಕಾರ್ಯದರ್ಶಿ ಮನೋಜ್ ಕುಮಾರ್ ಕಜೆ, ಮಾಜಿ ಜೊತೆ ಕಾರ್ಯದರ್ಶಿ ಜಿತೇಶ್ ಸಾಂತ್ಯೂಡಿ ಹಾಗೂ ವಸಂತ ನೇಕಾರ ಮುಂಡೆವು, ರಿತೇಶ್ ಬಜ, ಜನಾರ್ದನ ಉಮಿಯ, ಲತೀಶ ಆದೂರು ಪೇರಾಲ್, ನಿತಿನ್ ದೆಲೋಡಿ, ಕಮಲೇಶ್ ಸುರುಳಿ ಮತ್ತು ಭಜನಾ ಮಂಡಳಿಯ ಭಜಕ ಸದಸ್ಯರುಗಳು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ ಗ್ರಾ. ಪಂ. ನೇತೃತ್ವದಲ್ಲಿ ಶ್ರಮದಾನದ ಮೂಲಕ ರಸ್ತೆಯ ಬದಿ ಸ್ವಚ್ಛತೆ

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಜೆಸಿ ಜಯೇಶ್ ಬರೆಟ್ಟೊ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಬೆಳ್ತಂಗಡಿ ಪಶು ಆಸ್ಪತ್ರೆಯ ಅಂಬ್ಯುಲೆನ್ಸ್ ಶೆಡ್‌ನಲ್ಲಿ ವ್ಯಕ್ತಿಯ ಶವ ಪತ್ತೆ

Suddi Udaya

ಬಂದಾರು: ಒಟೆಚ್ಚಾರ್ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

Suddi Udaya

ಬ್ರೈಟ್ ಹೊರೈಝನ್ ಶಾಲೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ

Suddi Udaya

ಮುಂಡಾಜೆ: ಚಾಮುಂಡಿನಗರ ಸ.ಕಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!