September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ನಾರಾಯಣ್ ಶೆಟ್ಟಿ ರವರಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ಆರ್ಥಿಕ ನೆರವು

ಬೆಳ್ತಂಗಡಿ: ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ಬೆಳ್ತಂಗಡಿ ತಾಲೂಕು ಪ್ರಿಂಟರ್ಸ್ ಅಶೋಸಿಯೇಷನ್ ನ ಜತೆಕಾರ್ಯದರ್ಶಿ ನಾರಾಯಣ್ ಶೆಟ್ಟಿ ( ನಿಸರ್ಗ ಪ್ರಿಂಟರ್ಸ್ ಸೋಮಂತಡ್ಕ ) ಇವರಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು ಒದಗಿಲಾಯಿತು.

ಮೂಡಬಿದ್ರೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಎ. ಜೆ. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿ ಪ್ರಸ್ತುತ ಮೂಡಬಿದ್ರೆ ಮಿಜಾರಿನಲ್ಲಿ ಶುಶ್ರೂಷೆ ಪಡೆಯುತ್ತಿರುವ ನಾರಾಯಣ್ ಶೆಟ್ಟಿ (ನಿಸರ್ಗ ಪ್ರಿಂಟರ್ಸ್)ಇವರಲ್ಲಿಗೆ ತೆರಳಿ ಸಹಾಯಧನ ನೀಡಲಾಯಿತು.

ಈ ಸಂಧರ್ಭದಲ್ಲಿ ಅಶೋಸಿಯೇಶನ್ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಕೋಶಾಧಿಕಾರಿ ಬಾಲಕೃಷ್ಣ(ಅನುಪಮ ಪ್ರಿಂಟರ್ಸ್ ), ಉಪಾಧ್ಯಕ್ಷರಾದ ಅನಿಲ್ (ಅಕ್ಷರ ಪ್ರಿಂಟರ್ಸ್ ), ಜೋಬಿನ್ (ಪ್ರಿಂಟ್ ಪ್ಯಾಲೇಸ್ ) ಉಪಸ್ಥಿತರಿದ್ದರು.

ಅಶೋಸಿಯೇಶನ್ ಕಾರ್ಯದರ್ಶಿ ಅರ್ಪಣ್ ( ಪೂಂಜಶ್ರೀ ಪ್ರಿಂಟರ್ಸ್ ), ಉಪಾಧ್ಯಕ್ಷ ಸುದತ್ ಜೈನ್ (ಪಾರ್ಶ್ವನಾಥ್ ಪ್ರಿಂಟರ್ಸ್) ಹಿರಿಯ ಸಲಹೆಗಾರ ಶೇಖರ್ (ಮಂಜುಶ್ರೀ ಪ್ರಿಂಟರ್ಸ್ ), ಹಿರಿಯ ಸದಸ್ಯರಾದ ರತ್ನವರ್ಮ ಜೈನ್ (ರತ್ನಗಿರಿ ಪ್ರಿಂಟರ್ಸ್ ), ಸದಸ್ಯರುಗಳಾದ ರಾಮಕೃಷ್ಣ (ರಂಗೋಲಿ ಪ್ರಿಂಟರ್ಸ್ ), ಆಕಾಶ್ ( ಪೂಂಜಶ್ರೀ ಫ್ಲೆಕ್ಸ್ )ಪ್ರಸಾದ್ )ಮಧುರ ಪ್ರಿಂಟರ್ಸ್) ಸಹಕರಿಸಿದರು.

Related posts

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ ಆಯ್ಕೆ

Suddi Udaya

ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯವೇ ಕಾಂಗ್ರೆಸ್ ಸಂಘಟನೆಯ ಬಲ: ರಕ್ಷಿತ್ ಶಿವರಾಂ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಪಲ್ಕೆ ಹೊಡಿಕಾರ್ ರಸ್ತೆಯ ಇಂಟರ್ಲಾಕ್ ಕಾಮಗಾರಿ ಕಳಪೆ ಆರೋಪ: ನಾವೂರು ಗ್ರಾ.ಪಂ.ಗೆ ಎಸ್.ಡಿ.ಪಿ.ಐ ಮನವಿ

Suddi Udaya

ಕಾಯರ್ತಡ್ಕ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಅಪರಿಚಿತ ಶವ ಪತ್ತೆ: ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂಬ ಶಂಕೆ

Suddi Udaya

ಬೆಳ್ತಂಗಡಿ : ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ವಿದ್ಯುತ್ ಭಾಗ್ಯಕ್ಕೆ ಅನುಮತಿ

Suddi Udaya
error: Content is protected !!