30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೆಂಪುಕಲ್ಲು-ಮರಳು ಸಮಸ್ಯೆ, ಟಿಪ್ಪರ್ ಚಾಲಕ-ಮಾಲಕರು ಕಂಗಾಲು

ಬೆಳ್ತಂಗಡಿ: ಕೆಂಪು ಕಲ್ಲು ಮತ್ತು ಮರಳು ಇವೆರಡನ್ನೂ ಉಪಯೋಗಿಸಿಕೊಂಡು ಮಾಡುವ ಕೆಲಸ ಕಾರ್ಯಗಳಿಗೆ ಸಾವಿರಾರು ಕಾರ್ಮಿಕರು ಅವಲಂಬಿತವಾಗಿದ್ದು ಇದೀಗ ಕೆಲಸವಿಲ್ಲದೆ ಟಿಪ್ಪರ್ ಚಾಲಕ-ಮಾಲಕರಿಗೆ ಸಮಸ್ಯೆಯಾಗಿದೆ ಎಂದು ಯುವ ಉದ್ಯಮಿ ಬಳಂಜ ಪ್ರವೀಣ್ ಪೂಜಾರಿ ಹೇಳಿದ್ದಾರೆ.

ಇವುಗಳ ಸಾಗಾಟದ ವಾಹನದ ಮೇಲೆ ಅದೆಷ್ಟು ಸಾಲ ಇನ್ಸುರೆನ್ಸ್, ಟ್ಯಾಕ್ಸ್, ಕಟ್ಟಿ ತಮ್ಮ ವಾಹನಗಳನ್ನು ಮಾಲಕರು ಮನೆಯಲ್ಲಿಯೇ ನಿಲ್ಲಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿಯೊಬ್ಬರೂ ಉಪಯೋಗಿಸಲ್ಪಡುವ ಇಂತಹ ಅಗತ್ಯ ವಸ್ತುಗಳ ಮೇಲಾಗಿರುವ ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅನುಮತಿ ನೀಡುವಂತೆ ಕಾನೂನು ಮಾಡಬೇಕಾಗಿರುವುದು ಉತ್ತಮ.ಒಂದು ವೇಳೆ ಅನುಮತಿ ನೀಡಲು ವಿಳಂಬವಾಗಿ ಇದೇ ಪರಿಸ್ಥಿತಿ ಮುಂದುವರೆದರೆ ಅದೆಷ್ಟು ಕೂಲಿ ಕಾರ್ಮಿಕರು, ಮೇಸ್ತ್ರಿ ಕೆಲಸ, ವೈರಿಂಗ್ ಕೆಲಸದವರು,ಹಾರ್ಡ್‌ವೇರ್ ಅಂಗಡಿಯವರು,ಪೈಂಟ್ ಕೆಲಸದವರು, ಇನ್ನು ಹಲವಾರು ಕಾರ್ಮಿಕರು ತಮ್ಮ ದುಡಿಮೆಯನ್ನು ನಂಬಿಕೊಂಡು ಸಾಲ ಮಾಡಿ ದುಡಿಮೆಯಿಲ್ಲದೇ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.ಜನಪರ ಕಾಳಜಿಯಿಂದ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಆದಷ್ಟು ಬೇಗ ಅನುಮತಿಯನ್ನು ನೀಡಿ ಕಾರ್ಮಿಕ ವರ್ಗಕ್ಕೆ ಧೈರ್ಯ ತುಂಬಬೇಕಾಗಿದೆ ಎಂದವರು ತಿಳಿಸಿದ್ದಾರೆ.

Related posts

ಇಂದು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ, ವಧು-ವರರಿಗೆ ಸೀರೆ, ಧೋತಿ ವಿತರಣೆ

Suddi Udaya

ನಡ: ಬಸ್ರಾಯ ವೆಂಟೆಡ್ ಡ್ಯಾಮ್ ನಲ್ಲಿ ಸಿಲುಕಿಕೊಂಡಂತಹ ಮರದ ದಿಮ್ಮಿಗಳ ತೆರವು ಕಾರ್ಯ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ರಕ್ಮಿತಾ ಎಂ. ತಾಲೂಕಿಗೆ ತೃತೀಯ ಸ್ಥಾನ

Suddi Udaya

ಎಸ್.ಎಸ್.ಎಲ್.ಸಿ, ಪಿಯುಸಿ ಇದೀಗ ಖಾಸಗಿ ಹಾಗೂ ನೇರ ಪರೀಕ್ಷೆಗೆ ಅನುಗ್ರಹ ಟ್ರೈನಿಂಗ್ ಕಾಲೇಜಿಗೆ ಬಿ.ಐ.ಎಸ್.ಇ ಬೋರ್ಡ್ ಮಾನ್ಯತೆ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಯಂತ್ರೋಪಕರಣ ಖರೀದಿ ಪ್ರಶಸ್ತಿ

Suddi Udaya

ನಾಲ್ಕೂರಿನಲ್ಲಿ ಹುಲ್ಲು ಕತ್ತರಿಸುವಾಗ ನಡೆದ ಆಕಸ್ಮಿಕ ಘಟನೆ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಎರಡು ಕೈಗಳುಒಂದು ಕೈಯ ಅಂಗೈ ತುಂಡು, ಇನ್ನೊಂದು ಕೈಯ ಬೆರಳು ಕಟ್

Suddi Udaya
error: Content is protected !!