July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೆಂಪುಕಲ್ಲು-ಮರಳು ಸಮಸ್ಯೆ, ಟಿಪ್ಪರ್ ಚಾಲಕ-ಮಾಲಕರು ಕಂಗಾಲು

ಬೆಳ್ತಂಗಡಿ: ಕೆಂಪು ಕಲ್ಲು ಮತ್ತು ಮರಳು ಇವೆರಡನ್ನೂ ಉಪಯೋಗಿಸಿಕೊಂಡು ಮಾಡುವ ಕೆಲಸ ಕಾರ್ಯಗಳಿಗೆ ಸಾವಿರಾರು ಕಾರ್ಮಿಕರು ಅವಲಂಬಿತವಾಗಿದ್ದು ಇದೀಗ ಕೆಲಸವಿಲ್ಲದೆ ಟಿಪ್ಪರ್ ಚಾಲಕ-ಮಾಲಕರಿಗೆ ಸಮಸ್ಯೆಯಾಗಿದೆ ಎಂದು ಯುವ ಉದ್ಯಮಿ ಬಳಂಜ ಪ್ರವೀಣ್ ಪೂಜಾರಿ ಹೇಳಿದ್ದಾರೆ.

ಇವುಗಳ ಸಾಗಾಟದ ವಾಹನದ ಮೇಲೆ ಅದೆಷ್ಟು ಸಾಲ ಇನ್ಸುರೆನ್ಸ್, ಟ್ಯಾಕ್ಸ್, ಕಟ್ಟಿ ತಮ್ಮ ವಾಹನಗಳನ್ನು ಮಾಲಕರು ಮನೆಯಲ್ಲಿಯೇ ನಿಲ್ಲಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿಯೊಬ್ಬರೂ ಉಪಯೋಗಿಸಲ್ಪಡುವ ಇಂತಹ ಅಗತ್ಯ ವಸ್ತುಗಳ ಮೇಲಾಗಿರುವ ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅನುಮತಿ ನೀಡುವಂತೆ ಕಾನೂನು ಮಾಡಬೇಕಾಗಿರುವುದು ಉತ್ತಮ.ಒಂದು ವೇಳೆ ಅನುಮತಿ ನೀಡಲು ವಿಳಂಬವಾಗಿ ಇದೇ ಪರಿಸ್ಥಿತಿ ಮುಂದುವರೆದರೆ ಅದೆಷ್ಟು ಕೂಲಿ ಕಾರ್ಮಿಕರು, ಮೇಸ್ತ್ರಿ ಕೆಲಸ, ವೈರಿಂಗ್ ಕೆಲಸದವರು,ಹಾರ್ಡ್‌ವೇರ್ ಅಂಗಡಿಯವರು,ಪೈಂಟ್ ಕೆಲಸದವರು, ಇನ್ನು ಹಲವಾರು ಕಾರ್ಮಿಕರು ತಮ್ಮ ದುಡಿಮೆಯನ್ನು ನಂಬಿಕೊಂಡು ಸಾಲ ಮಾಡಿ ದುಡಿಮೆಯಿಲ್ಲದೇ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.ಜನಪರ ಕಾಳಜಿಯಿಂದ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಆದಷ್ಟು ಬೇಗ ಅನುಮತಿಯನ್ನು ನೀಡಿ ಕಾರ್ಮಿಕ ವರ್ಗಕ್ಕೆ ಧೈರ್ಯ ತುಂಬಬೇಕಾಗಿದೆ ಎಂದವರು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ್ ಹೊಳೆನರಸೀಪುರಕ್ಕೆ ವಗಾ೯ವಣೆ: ಕಡಬ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ರವರಿಗೆ ಅಧಿಕಾರ ಹಸ್ತಾoತರ

Suddi Udaya

ಮೊಗ್ರು ಸರಕಾರಿ ಶಾಲೆಗೆ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ನಿಂದ ರೂ. 7.25 ಲಕ್ಷ ದೇಣಿಗೆ ವಿನಿಯೋಗ

Suddi Udaya

ಬೆಳ್ತಂಗಡಿ: ಹೆದ್ದಾರಿಯ ಅಗಲೀಕರಣ ಪರಿಹಾರಧನ ಪಡೆದಮನೆ, ಕಟ್ಟಡಗಳ ತೆರಿಗೆ ರದ್ದು ಪಡಿಸಲು ಸೂಚನೆ

Suddi Udaya

ನೆರಿಯ ಸೆಂಟ್ ತೋಮಸ್ ಪ್ರೌಢಶಾಲೆ ಶೇ 100 ರ ಸಾಧನೆಗೆ ಸನ್ಮಾನ

Suddi Udaya

ಎಸ್.ಡಿ.ಎಂ. ಪ.ಪೂ. ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ವ್ಯಸನದ ಬಗ್ಗೆ ಅಂತರ್ಜಾಲ ಬಳಸಿ ಪಿಪಿಟಿ ಸ್ಪರ್ಧಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

Suddi Udaya
error: Content is protected !!