September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೋವಿಂದೂರು ಮಿತ್ರ ಬಳಗದ ಸದಸ್ಯರಿಂದ ಪಾರೆಂಕಿ ಅಭಿಲಾಷ್ ರವರಿಗೆ ಆರ್ಥಿಕ ನೆರವು

ಗೋವಿಂದೂರು: ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿರುವ ಅಭಿಲಾಷ್ ರವರ ಕುಟುಂಬಕ್ಕೆ ಮಿತ್ರ ಬಳಗ ಗೋವಿಂದೂರು ಯುವಕರ ತಂಡದಿAದ ಆರ್ಥಿಕ ನೆರವು ನೀಡಿದರು.


ಪಾರೆಂಕಿ ಗ್ರಾಮದ ಬಂಗೇರುಕಟ್ಟೆ ಸಾಲುಮರ ನಿವಾಸಿ ಶ್ರೀಮತಿ ಸುಮಲ ಪುತ್ರ ಅಭಿಲಾಷ್ (28ವ.) ರವರು ಕಳೆದ ೨೦೧೯ ಬೈಕ್ ಅಪಘಾತವಾಗಿ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕ್ರಮೇಣವಾಗಿ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರು. ಕೆಲವು ಸಮಯದ ನಂತರ ಮೂರ್ಛೆ ಕಾಯಿಲೆ ರೋಗದ ಲಕ್ಷಣ ಕಂಡುಬAದಿದ್ದು ವೈದ್ಯರನ್ನು ಭೇಟಿ ನೀಡಿ ಪರೀಕ್ಷಿಸಿದಾಗ ಬ್ರೈನ್ ಟ್ಯೂಮರ್ ಆಗಿದೆ ಎಂದು ವೈದ್ಯರು ತಿಳಿಸಿದರು.
ಮನೆ ಅಧಾರವಾಗಿದ್ದ ಅಭಿಲಾಷ್‌ರವರ ಆರೋಗ್ಯದ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ಸಮಸ್ಯೆ ಉಂಟಾಗಿದ್ದು ವಿಷಯ ತಿಳಿದ ಗೋವಿಂದೂರು ಯುವಕರ ತಂಡದಿಂದ ಆರ್ಥಿಕ ನೆರವು ನೀಡಲಾಯಿತು.


ಈ ಸಂದರ್ಭದಲ್ಲಿ ಮಿತ್ರ ಬಳಗ ಗೋವಿಂದೂರು ಸಂಘದ ಗೌರವಾಧ್ಯಕ್ಷ ಉಮೇಶ್ ಗೋವಿಂದೂರು, ಅಧ್ಯಕ್ಷ ರೋಹಿತ್ ಗೋವಿಂದೂರು, ಉಪಾಧ್ಯಕ್ಷ ಸುರೇಶ್ ಪೆಂರ್ಬುಡ, ಕಾರ್ಯದರ್ಶಿ ರಾಜೇಶ್ ಗೌಡ ಕೆ, ಸಂದೀಪ್ ಗೌಡ ಕೋಜಂಬಲ, ಬಿ.ಜೆ ಪ್ರಶಾಂತ್ ಪಾದೆ ಗುತ್ತು, ಪ್ರಶಾಂತ್ ಕರತ್ತೂರು, ಪುರುಷೋತ್ತಮ ಗೌಡ ಕೈಲಾಜೆ ಉಪಸ್ಥಿತರಿದ್ದರು.

Related posts

ಶ್ರೀರಾಮ ಕ್ರೆಡಿಟ್ ಕೋ ಆಪರೇಟ್ ಸೊಸೈಟಿನಲ್ಲಿ ಗ್ರಾಹಕರ ಹಣ ವಂಚನೆ ಪ್ರಕರಣ: ತನಿಖೆಗಾಗಿ ಬ್ಯಾಂಕಿಗೆ ಎಂಟ್ರಿಯಾದ ಸಿಐಡಿ ತಂಡ

Suddi Udaya

ಪಿಲ್ಯ: ಕೋಳಿ ಅಂಕಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

Suddi Udaya

ಭಾ.ಜ.ಪಾ. ಹಿರಿಯ ನಾಗರೀಕ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ನೇಮಕ

Suddi Udaya

ಕೇಲ್ತಾಜೆ ಸಿರಾಜುಲ್ ಹುದಾ ಮದರಸ ಮತ್ತು ಜುಮಾ ಮಸ್ಜಿದ್ ಇದರ ಅಧ್ಯಕ್ಷರಾಗಿ ಕೆ ಹನೀಫ್ ಪುನರಾಯ್ಕೆ

Suddi Udaya

ಕಳಿಯ: ಪೇರಾಜೆ ನಿವಾಸಿ ನಾಗಮ್ಮ ನಿಧನ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಹರೀಶ್ ಕುಮಾರ್ ಭೇಟಿ

Suddi Udaya
error: Content is protected !!