24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಪದಗ್ರಹಣ ಸಮಾರಂಭ

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ 2025-2026 ನೇ ಸಾಲಿನ ಪದಗ್ರಹಣ ಸಮಾರಂಭವು ಜು. 2ರಂದು ಮಡಂತ್ಯಾರು ಎಸ್‌ಡಿಎಸ್ ಮಿನಿ ಹಾಲ್ ನಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಅನುಸ್ಥಾಪನಾ ಅಧಿಕಾರಿಯಾಗಿ ವಿಕ್ರಮ್ ದತ್ತ, ಕ್ಲಬ್ ಸಲಹೆಗಾರ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಡಾ. ಎ. ಜಯ ಕುಮಾರ್ ಶೆಟ್ಟಿ, ವಲಯ ಲೆಫ್ಟಿನೆಂಟ್ ಪ್ರಮುಖ ದಾನಿ ಪ್ರಕಾಶ್ ಬಾಳಿಗಾ, ಸೇಕ್ರೆಡ್ ಹಾರ್ಟ್ ಚರ್ಚ್ ಪ್ಯಾರಿಷ್ ಪಾದ್ರಿ ರೆವರೆಂಡ್ ಫಾದರ್ ಸ್ಟ್ಯಾನಿ ಗೋವಿಯಸ್ ಉಪಸ್ಥಿತರಿದ್ದರು. 2025- 26 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಮ್ಯಾಕ್ಸಿಮ ಆಲ್ಬಕುಎರ್ಕ್, ಕಾರ್ಯದರ್ಶಿಯಾಗಿ ಜಿ ವಾಸುದೇವ ಗೌಡ, ಐ ಪಿ ಪಿ ನಿತ್ಯಾನಂದ ಡಿ, ಡೈರೆಕ್ಟರ್ ಕಾಂತಪ್ಪ ಗೌಡ ಹಟ್ಟತ್ತೋಡಿ, ಹೆರಾಲ್ಡ್ ಮೋನೀಸ್, ಡಾ. ರಾಧಾಕೃಷ್ಣ ಶೆಟ್ಟಿ , ಉದಯಕುಮಾರ್, ರೊನಾಲ್ಡ್ ಸಿಕ್ವೇರಾ , ಮೋನಪ್ಪ ಪೂಜಾರಿ, ಶ್ರೀಧರ ರಾವ್ ಟಿ ವಿ. , ಜಯಂತ ಬಿ ಶೆಟ್ಟಿ, ದಿನಕರ ನಾರಾಯಣ ಶೆಟ್ಟಿ, ಚಿತ್ತರಂಜನ್, ರಮೇಶ್ ಮೂಲ್ಯ, ಸೆಲೆಸ್ತಿನ ಡಿಸೋಜ, ಸುರೇಶ್ ಸೋಣಂದೂರು , ಹರ್ಷ ನಾರಾಯಣ ಶೆಟ್ಟಿ, ಪ್ರಶಾಂತ್ ಶೆಟ್ಟಿ, ತುಳಸಿ ಪೈ ಇವರು ಆಯ್ಕೆಯಾದರು.

ನೂತನವಾಗಿ ಶ್ರೀಮತಿ ಲಿಲ್ಲಿ ಪಾಯಿಸ್, ಆಶಾ ದಿನಕರ್ ಶೆಟ್ಟಿ, ಡಾ| ಶಮೀಮಾ ಅಳಕ್ಕೆ, ರೋಹಿಣಿ ಚಂದ್ರಹಾಸ ಪಕಳ, ಯೋಗೀಶ್ ಪೂಜಾರಿ ಕಟ್ತಿಲ ಅಶೋಕ್ ಗುಂಡ್ಯಲ್ಕೆ ರೋಟರಿ ಕ್ಲಬ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ರೋಟರಿ ಪ್ರಶಾಂತ್ ಶೆಟ್ಟಿ ಮೂಡಾಯೂರು ಇವರಿಂದ ಸರಕಾರಿ ಪ್ರೌಢ ಶಾಲೆ ಮಚ್ಚಿನ ಇಲ್ಲಿಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ವೇದಾವತಿ ಮಾಲಕರು ಅಕ್ಷಯ ಪುಡ್ಸ್ ಪುಂಜಾಲಕಟ್ಟೆ ಇವರ ವತಿಯಿಂದ ಪುಂಜಾಲಕಟ್ಟೆ ಅಂಗನವಾಡಿ ಶಾಲಾ ಮಕ್ಕಳಿಗೆ ಚೇರ್ ನೀಡಲಾಯಿತು.

ಪಿ ಹೆಚ್., ಮೋನಪ್ಪ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ರೋಟರಿ ಜಿ ವಾಸುದೇವ ಗೌಡ ವಂದಿಸಿದರು.

ವರದಿ: ಹರ್ಷ ಬಳ್ಳಮಂಜ


Related posts

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಕೊಯ್ಯೂರುನಲ್ಲಿ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ: 5 ದಿನವಾದರೂ ದುರಸ್ತಿಯಾಗದ ವಿದ್ಯುತ್ ಕಂಬ

Suddi Udaya

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ,ಸಾಧಕ ರೈತರಿಗೆ,ವಿಧ್ಯಾರ್ಥಿಗಳಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ : 455.79 ಕೋಟಿ ವ್ಯವಹಾರ,ರೂ1.62 ಕೋಟಿ ಲಾಭ,ಸದಸ್ಯರಿಗೆ ಶೇ.15% ಡಿವಿಡೆಂಟ್ ಘೋಷಣೆ: ಸಹಕಾರಿಗಳಿಗೆ ಅನುಕೂಲವಾಗುವಂತೆ ಪಡಿತರವನ್ನು ರಾತ್ರಿಯವರೆಗೆ ವಿತರಣೆ :ಜೋಯೆಲ್ ಮೆಂಡೋನ್ಸ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

Suddi Udaya
error: Content is protected !!