22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಪದಗ್ರಹಣ ಸಮಾರಂಭ

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ 2025-2026 ನೇ ಸಾಲಿನ ಪದಗ್ರಹಣ ಸಮಾರಂಭವು ಜು. 2ರಂದು ಮಡಂತ್ಯಾರು ಎಸ್‌ಡಿಎಸ್ ಮಿನಿ ಹಾಲ್ ನಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಅನುಸ್ಥಾಪನಾ ಅಧಿಕಾರಿಯಾಗಿ ವಿಕ್ರಮ್ ದತ್ತ, ಕ್ಲಬ್ ಸಲಹೆಗಾರ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಡಾ. ಎ. ಜಯ ಕುಮಾರ್ ಶೆಟ್ಟಿ, ವಲಯ ಲೆಫ್ಟಿನೆಂಟ್ ಪ್ರಮುಖ ದಾನಿ ಪ್ರಕಾಶ್ ಬಾಳಿಗಾ, ಸೇಕ್ರೆಡ್ ಹಾರ್ಟ್ ಚರ್ಚ್ ಪ್ಯಾರಿಷ್ ಪಾದ್ರಿ ರೆವರೆಂಡ್ ಫಾದರ್ ಸ್ಟ್ಯಾನಿ ಗೋವಿಯಸ್ ಉಪಸ್ಥಿತರಿದ್ದರು. 2025- 26 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಮ್ಯಾಕ್ಸಿಮ ಆಲ್ಬಕುಎರ್ಕ್, ಕಾರ್ಯದರ್ಶಿಯಾಗಿ ಜಿ ವಾಸುದೇವ ಗೌಡ, ಐ ಪಿ ಪಿ ನಿತ್ಯಾನಂದ ಡಿ, ಡೈರೆಕ್ಟರ್ ಕಾಂತಪ್ಪ ಗೌಡ ಹಟ್ಟತ್ತೋಡಿ, ಹೆರಾಲ್ಡ್ ಮೋನೀಸ್, ಡಾ. ರಾಧಾಕೃಷ್ಣ ಶೆಟ್ಟಿ , ಉದಯಕುಮಾರ್, ರೊನಾಲ್ಡ್ ಸಿಕ್ವೇರಾ , ಮೋನಪ್ಪ ಪೂಜಾರಿ, ಶ್ರೀಧರ ರಾವ್ ಟಿ ವಿ. , ಜಯಂತ ಬಿ ಶೆಟ್ಟಿ, ದಿನಕರ ನಾರಾಯಣ ಶೆಟ್ಟಿ, ಚಿತ್ತರಂಜನ್, ರಮೇಶ್ ಮೂಲ್ಯ, ಸೆಲೆಸ್ತಿನ ಡಿಸೋಜ, ಸುರೇಶ್ ಸೋಣಂದೂರು , ಹರ್ಷ ನಾರಾಯಣ ಶೆಟ್ಟಿ, ಪ್ರಶಾಂತ್ ಶೆಟ್ಟಿ, ತುಳಸಿ ಪೈ ಇವರು ಆಯ್ಕೆಯಾದರು.

ನೂತನವಾಗಿ ಶ್ರೀಮತಿ ಲಿಲ್ಲಿ ಪಾಯಿಸ್, ಆಶಾ ದಿನಕರ್ ಶೆಟ್ಟಿ, ಡಾ| ಶಮೀಮಾ ಅಳಕ್ಕೆ, ರೋಹಿಣಿ ಚಂದ್ರಹಾಸ ಪಕಳ, ಯೋಗೀಶ್ ಪೂಜಾರಿ ಕಟ್ತಿಲ ಅಶೋಕ್ ಗುಂಡ್ಯಲ್ಕೆ ರೋಟರಿ ಕ್ಲಬ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ರೋಟರಿ ಪ್ರಶಾಂತ್ ಶೆಟ್ಟಿ ಮೂಡಾಯೂರು ಇವರಿಂದ ಸರಕಾರಿ ಪ್ರೌಢ ಶಾಲೆ ಮಚ್ಚಿನ ಇಲ್ಲಿಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ವೇದಾವತಿ ಮಾಲಕರು ಅಕ್ಷಯ ಪುಡ್ಸ್ ಪುಂಜಾಲಕಟ್ಟೆ ಇವರ ವತಿಯಿಂದ ಪುಂಜಾಲಕಟ್ಟೆ ಅಂಗನವಾಡಿ ಶಾಲಾ ಮಕ್ಕಳಿಗೆ ಚೇರ್ ನೀಡಲಾಯಿತು.

ಪಿ ಹೆಚ್., ಮೋನಪ್ಪ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ರೋಟರಿ ಜಿ ವಾಸುದೇವ ಗೌಡ ವಂದಿಸಿದರು.

ವರದಿ: ಹರ್ಷ ಬಳ್ಳಮಂಜ


Related posts

ಬೆಳ್ತಂಗಡಿ: ಟ್ರಾವೆಲ್ ಗೇಟ್ ಟೂರ್ಸ್ & ಟ್ರಾವೆಲ್ಸ್ ಶುಭಾರಂಭ

Suddi Udaya

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಧರ್ಮಸ್ಥಳ ವ್ಯಾಪ್ತಿಯಲ್ಲಿ ಮೂರು ಬೈಕ್ ಮತ್ತು ಒಂದು ಕಾರು ಕಳ್ಳತನ ಪ್ರಕರಣ: ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಐದು ಜನ ಆರೋಪಿಗಳ ಬಂಧನ

Suddi Udaya

ತಾಲೂಕು ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀರಕ್ಷ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

Suddi Udaya
error: Content is protected !!