23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಾಮಾನ್ಯ ಸಭೆ: ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ : ಆದಿ ದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ಸಾಮಾನ್ಯ ಸಭೆಯು ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಕೊಕ್ಕಡ ವಹಿಸಿದ್ದರು. ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ರಾಜ್ಯ ಜೊತೆ ಕಾರ್ಯದರ್ಶಿ ಸುರೇಶ್ ಪಿ. ಬಿ., ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಪ್ರಮುಖರಾದ ರಘು ಧರ್ಮಸೇನ್, ಶೇಖರ್ ಕುಕ್ಕೇಡಿ, ಗೋಪಾಲಕೃಷ್ಣ ಕುಕ್ಕಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಸಲಹೆಗಾರರಾದ ಗೋಪಾಲಕೃಷ್ಣ ಕುಕ್ಕಳ ಸಭೆಯ ಉದ್ದೇಶಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸಂಘಟನೆ ಬಲವರ್ಧನೆಗಾಗಿ ಹೊಸ ಪದಾಧಿಕಾರಿಗಳನ್ನು ಸೇರ್ಪಡೆಗೊಳಿಸಲಾಯಿತು.
ಗೌರವಾಧ್ಯಕ್ಷರಾಗಿ ರಾಘವ ಕಲ್ಮಂಜ, ಅಧ್ಯಕ್ಷರಾಗಿ ದಿನೇಶ್ ಕೆ ಕೊಕ್ಕಡ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ್ ವಿ ಧರ್ಮಸ್ಥಳ‌, ಉಪಾಧ್ಯಕ್ಷರಾಗಿ ರಾಮ ಪಡಂಗಡಿ, ಅವಿನಾಶ್ ಕುರ್ಲೋಟ್ಟು, ಶ್ರೀನಿವಾಸ್ ಉಜಿರೆ, ಜಗನ್ನಾಥ್ ಕೊಯ್ಯೂರು, ಶ್ರೀಮತಿ ಯಮುನಾ ನಾರಾವಿ, ಜೊತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಮಡಂತ್ಯಾರ್, ಚಂದ್ರಶೇಖರ್ ಮೂಡುಕೋಡಿ, ಉಮೇಶ್ ಮಡಂತ್ಯಾರು, ಕೋಶಾಧಿಕಾರಿಯಾಗಿ ಜಿನ್ನು ಕರಿಮಣೇಲು, ಸಂಘಟನಾ ಕಾರ್ಯದರ್ಶಿಯಾಗಿ ಕೊರಗಪ್ಪ ಕೊಯ್ಯೂರು, ಶಿವಾನಂದ ಪಡಂಗಡಿ, ಯತೀಶ್ ಧರ್ಮಸ್ಥಳ, ಅವಿನಾಶ್ ಕುರ್ತೋಡಿ, ವಿನಯ ಕುಮಾರ್ ಉಜಿರೆ, ಅಜಯ್ ನಾರಾವಿ, ಕಿರಣ್ ಅಳದಂಗಡಿ, ರಾಮ್ ಕುಮಾರ್ ಕರಂಬಾರು, ಆನಂದ ನೆಲ್ಲಿಂಗೇರಿ, ವಿಜಯ ಬಜಿರೆ, ಕೇಶವ ಅಳಕೆ, ಶ್ರೀನಿವಾಸ್ ಪಿ.ಎಸ್, ರಘು ಧರ್ಮಸ್ಥಳ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕುಮಾರಿ ಗೌರಿ‌ ‌, ಶರತ್ ಕೊಕ್ಕಡ, ಸುರೇಶ ಧರ್ಮಸ್ಥಳ, ಗೌರವ ಸಲಹೆಗಾರರಾಗಿ ಶೇಖರ್ ಕುಕ್ಕೇಡಿ, ಗೋಪಾಲಕೃಷ್ಣ ಕುಕ್ಕಳ, ಶ್ರೀ ಅಮ್ಮ ಕುಮಾರ್, ಚನ್ನಪ್ಪ ಕೊಲ್ಪದಬೈಲು, ಓಬಯ್ಯ ಆರಂಬೋಡಿ, ಬಾಬು ಬೆಳಾಲು, ವೇಣುಗೋಪಾಲ ಕರಂಬಾರ್, ಶಿವಪ್ಪ ಗರ್ಡಾಡಿ, ಬಾಬು ಉಜಿರೆ, ದಿನಕರ ಬಡಕೋಡಿ, ಸುರೇಶ್ ಹೊಕ್ಕಾಡಿ ಅವರು ಆಯ್ಕೆಯಾದರು.

Related posts

ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳವರಿಂದ ತಪ್ತಮುದ್ರಾಧಾರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಜನಮಂಗಲ ಸಲಕರಣೆ ವಿತರಣೆ

Suddi Udaya

ಮುಗೇರಡ್ಕ ಚಂದ್ರಹಾಸ ಪೂಜಾರಿ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಮೈರೋಳ್ತಡ್ಕ: ಗುಂಡಿ ಬಿದ್ದ ರಸ್ತೆಗೆ ಪಂಚಾಯತ್ ವತಿಯಿಂದ ಸುಗಮ ಸಂಚಾರಕ್ಕೆ ವ್ಯವಸ್ಥೆ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ರಾಣೆಬೆನ್ನೂರಿನ ಚೈತ್ರಾರಿಗೆ ಗಾಲಿಕುರ್ಚಿ ವಿತರಣೆ

Suddi Udaya

ನೆರಿಯದಲ್ಲಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ: ಗ್ರಾಮ ಪಂಚಾಯಿತಿ ಎದುರು ರಾತ್ರಿ ತನಕ ಪ್ರತಿಭಟನೆ

Suddi Udaya
error: Content is protected !!