23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸುಳ್ಳು ಸುದ್ದಿ ಪ್ರಸಾರ ಹಾಗೂ ಅವ್ಯಾಚ್ಯ ನಿಂದನೆ ದೂರು : ಸುವರ್ಣ ನ್ಯೂಸ್ ಆ್ಯಂಕರ್ ಹಾಗೂ ವರದಿಗಾರ, ಕ್ಯಾಮೆರಾಮ್ಯಾನ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಸುವರ್ಣ ವಾಹಿನಿಯ ನ್ಯೂಸ್ ಆ್ಯಂಕರ್ ಅಜಿತ್ ಹನುಮಕ್ಕನವರ್, ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ ಎಂದು ಸುಳ್ಳು ಸುದ್ದಿಪ್ರಸಾರ ಮಾಡಿದ್ದಾರೆ ಹಾಗೂ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಅವಾಚ್ಯವಾಗಿ ನಿಂದಿಸಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗಣೇಶ್ ಶೆಟ್ಟಿ ಹಾಗೂ ಗಿರೀಶ್ ಮಟ್ಟಣ್ಣನವರ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.6ರಂದು ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಆ.6 ರಂದು ಧರ್ಮಸ್ಥಳದ ಸಮೀಪ ಪಾಂಗಳದಲ್ಲಿ ಹಲ್ಲೆಗೊಳಗಾದ ಉಜಿರೆಯ ಕುಂಟಿನಿ ನಿವಾಸಿ ಗಣೇಶ್ ಶೆಟ್ಟಿರವರ ಭಾವ ಪ್ರಮೋದ್, ಸಂಚಾರಿ ಸ್ಟುಡಿಯೋ ವರದಿಗಾರ ಸಂತೋಷ್ ಕುಮಾರ್, ಕುಡ್ಲ ರಾಮ್ ಪೇಜ್ ವರದಿಗಾರ ಅಜಯ್ ಅಂಚನ್, ಯುನೈಟೆಡ್ ಮೀಡಿಯಾ ವರದಿಗಾರ ಅಭಿಷೇಕ್ ಹಾಗೂ ಕ್ಯಾಮರಾಮೆನ್ ಆಜಯ್ ರವರನ್ನು ಗಣೇಶ್ ಶೆಟ್ಟಿ ಚಿಕಿತ್ಸೆಯ ಬಗ್ಗೆ, ಉಜಿರೆ ಬೆನಕ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆತಂದಿದ್ದು, ಈ ಸಮಯ ಆಸ್ಪತ್ರೆಗೆ ಬಂದ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ರವರನ್ನು ಸುವರ್ಣ ನ್ಯೂಸ್ ನ ವರದಿಗಾರ ಹಾಗೂ ಕ್ಯಾಮರಾಮೆನ್, ಬೈಟ್ ಕೊಡಿ ಎಂದಾಗ ಗಿರೀಶ್ ಮಟ್ಟಣ್ಣನವರು ಇದು ಆಸ್ಪತ್ರೆಯ ಆವರಣ , ನಿಮ್ಮ ಸುವರ್ಣ ಚಾನಲ್ ನ ಅಜಿತ್ ಜೈನ್ ಸುಳ್ಳು ಪ್ರಸಾರ ಮಾಡಿ ಧರ್ಮಸ್ಥಳದ ರಕ್ಷಣೆ ಮಾಡುತ್ತಿದ್ದಾರೆ ಜನರ ಆಕ್ರೋಶಗೊಳ್ಳುತ್ತಾರೆ, ಇಲ್ಲಿ, ಯಾವುದೇ ಬೈಟ್ ಬೇಡ ಎಂದು ವಿನಂತಿಸಿಕೊಂಡಿದ್ದು.
ಅದನ್ನು ಲೆಕ್ಕಿಸದೇ ವರದಿಗಾರ ಹಾಗೂ ಕ್ಯಾಮರಾಮೆನ್ ಒಳಗೆ ನುಗ್ಗಲು ಯತ್ನಿಸಿದ್ದು, ಆಗ ಅವರ ವರ್ತನೆಯಿಂದ ಅಸಮಾಧಾನಗೊಂಡ ಅಲ್ಲಿದ್ದ ಕೆಲವರು, ಅಜಿತ್ ಜೈನ್ ಅತ್ಯಾಚಾರಿಗಳ ಪರವಾಗಿ ವರದಿ ಮಾಡುವ ಚಾನೆಲ್ ನವರು ಆಸ್ಪತ್ರೆಯ ಒಳಗಡೆ ನುಗ್ಗಿ ಗಾಯಗೊಂಡಿದ್ದ ಮಾದ್ಯಮ ಹಾಗೂ ಗಣೇಶ್ ಶೆಟ್ಟಿ ರವರ ಭಾವನಿಗೆ ತೊಂದರೆ ಕೊಡಬಹುದು ಎಂದು ಪೊಲೀಸರಿಗೆ ಆಗ್ರಹ ಮಾಡಿದ್ದು, ಆಗ ವರದಿಗಾರ ಹಾಗೂ ಕ್ಯಾಮರಾಮನ್ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ಪರ ಹೋರಾಟಗಾರರನ್ನು ತಳ್ಳಲು ಪ್ರಯತ್ನಿಸಿದಾಗ ತಳ್ಳಾಟ ಶುರುವಾಗಿದ್ದು, ಆಗ ಮಹೇಶ್ ಶೆಟ್ಟಿ, ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ರವರು ಚಾನೆಲ್ ರವರನ್ನು ಆಸ್ಪತ್ರೆಯ ಒಳಗೆ ಕರೆದುಕೊಂಡು ಹೋಗಿ ಕೂರಿಸಿದ್ದು, ಈ ಸಮಯ ಸುವರ್ಣ ಚಾನೆಲ್ ನ ವರದಿಗಾರರು ಸುಮ್ಮನಿರದೇ ವರದಿ ಮಾಡುತ್ತೇವೆ ಎಂದು ಆವೇಶದಿಂದ ಕರೆ ಮಾಡುತ್ತಿದ್ದು, ಕೆಲವೇ ಸಮಯದಲ್ಲಿ ಸುವರ್ಣ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಎನ್ನುವ ನ್ಯೂಸ್ ಆ್ಯಂಕರ್ , ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಲು ಪ್ರಾರಂಭಿಸಿದ್ದು, ಘಟನೆಯ ಬಗ್ಗೆ, ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಸುವರ್ಣ ನ್ಯೂಸ್ ಅಂಕರ್ ಹಾಗೂ ಅವಾಚ್ಯವಾಗಿ ನಿಂದಿಸಿದ ವರದಿಗಾರ ಹಾಗೂ ಕ್ಯಾಮರಾಮನ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಲುವಂತೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ

Related posts

ಬೆಳ್ತಂಗಡಿ ತಾಲೂಕಿನ 16 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸರ್ಕಾರ ಆದೇಶ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 11 ನೇ ಗುರುತಿನಲ್ಲಿ ಎಸ್ಐಟಿ ಯಿಂದ ಕಾರ್ಯಾಚರಣೆ ಆರಂಭ

Suddi Udaya

ಎಸ್.ಡಿ.ಎಮ್ ಮಹಿಳಾ ಐ.ಟಿ.ಐ ಯಲ್ಲಿ ಎನ್.ಸಿ.ವಿ.ಟಿ ಮಾನ್ಯತೆ ಪಡೆದ ಫ್ಯಾಶನ್ ಡಿಸೈನ್ ಮತ್ತು ಟೆಕ್ನಾಲಜಿ ವೃತ್ತಿ ಆರಂಭ

Suddi Udaya

ಸೆಂಟ್ ಲಾರೆನ್ಸ್ ಕಥೇಡ್ರಲ್ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ಮಿತ್ತಬಾಗಿಲು: ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ನಡಿಗುತ್ತು ನಿವಾಸಿ ಶ್ರೀಮತಿ ಪುಷ್ಪಾವತಿ ನಿಧನ

Suddi Udaya
error: Content is protected !!