July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆಯಲ್ಲಿ ತಡರಾತ್ರಿ ತ್ಯಾಜ್ಯ ಎಸೆದವನಿಗೆ ಬಿತ್ತು ದಂಡ: ಪಂ.ಸದಸ್ಯರ, ಅಭಿವೃದ್ಧಿ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷರ ತಡರಾತ್ರಿ ಕಾರ್ಯಾಚರಣೆ

ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತ್ ನ ಗೇರುಕಟ್ಟೆ ಪೇಟೆಯ ರಸ್ತೆ ಬದಿಯ ಎಲ್ಲೆಂದರಲ್ಲಿ ರಾತ್ರಿ ತ್ಯಾಜ್ಯ ತಂದು ಹಾಕುತ್ತಿದ್ದರು.

ಗ್ರಾಮಸ್ಥರಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿದ್ದು, ಪಂಚಾಯತ್ ನ ವಾರ್ಡ್ ಸಭೆ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ಹಾಕಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಿ 2 ದಿನಗಳಿಗೆ ಮೊದಲು ಸಿ.ಸಿ.ಟಿ.ವಿ ಅಳವಡಿಸಿ ದಂಡ ಹಾಕುವ ಫಲಕ ಹಾಕಿದ್ದರು.

ನಿನ್ನೆ ತಡರಾತ್ರಿ ಬೇರೆ ಗ್ರಾಮದ ಹೋಟೆಲ್ ಒಂದರಿಂದ ತಾಜ್ಯ ತಂದು ಬಿಸಾಡಲು ಬಂದಾಗ ತಡರಾತ್ರಿ ಪಿ ಡಿ ಓ ಸಿಸಿಟಿವಿ ನೋಡುತ್ತಿದ್ದರು ಅದಾಗಲೇ ನಾಳಕ್ಕೆ ರಸ್ತೆಯಾಗಿ ಹೋಗುತ್ತಿದ್ದ ಪಂ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ನೋಡಿ ತ್ಯಾಜ್ಯ ಹಾಕುತ್ತಿದ್ದವನನ್ನು ದ್ವಿಚಕ್ರ ವಾಹನ ಸಮೇತ ಹಿಡಿದಿಟ್ಟು ಸದಸ್ಯರ ಗಮನಕ್ಕೆ ತಂದರು. ತಡರಾತ್ರಿ ತಕ್ಷಣ ಪಿ ಡಿ ಓ, ಪಂಚಾಯತ್ ಸದಸ್ಯರಾದ ಲತೀಪ್ ಪರಿಮರವರು ಇನ್ನೋರ್ವ ಸದಸ್ಯರಾದ ಅಬ್ದುಲ್ ಕರೀಮ್ ಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಹಾಗೂ ಮಾಜಿ ಪಂ ಅಧ್ಯಕ್ಷರು ಹಿಡಿದು ನಿಲ್ಲಿಸಿ ತಾಜ್ಯ ಬಿಸಾಡಲು ಬಂದವರಿಗೆ ಸ್ಥಳದಲ್ಲಿಯೇ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.

Related posts

ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ: ಮತ್ತೊಬ್ಬನ ಗುರುತು ಪತ್ತೆ ಹಚ್ಚಿದ ಎಸ್.ಐ.ಟಿ

Suddi Udaya

ಜು.5 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಗೆ ಶೇ. 50 ರಷ್ಟು ರಿಯಾಯಿತಿ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ಚಾಲನೆ: ಧ್ವಜಾರೋಹಣ, ಉತ್ಸವ ಬಲಿ, ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಅಳದಂಗಡಿ:ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿಕಟಪಾಡಿ: ಕಿರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

Suddi Udaya

ಬಳಂಜ : ಬೋಂಟ್ರೊಟ್ಟುಗುತ್ತು ದೈವಸ್ಥಾನದಲ್ಲಿ ಮಹಾ ಚಂಡಿಕಾಯಾಗ: ವಿಧಾನಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಸಹಿತ ನೂರಾರು ಭಕ್ತರು ಭಾಗಿ

Suddi Udaya

ಮಾಯಿಲ ಕೋಟೆ ಸೀಮೆ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಹಾಗೂ ಕಲ್ಲುರ್ಟಿ ಅಗೇಲು ಸೇವೆ

Suddi Udaya
error: Content is protected !!