September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ತೆಂಕಕಾರಂದೂರು: ಅಕ್ರಮ ಮರಳು ಸಾಗಟ: ಆರೋಪಿ ಸಹಿತ ಪಿಕಪ್ ವಾಹನ ವಶ

ತೆಂಕಕಾರಂದೂರು : ತೆಂಕಕಾರಂದೂರು ಗ್ರಾಮದ ಗಿಂಡಾಡಿ ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ವೇಣೂರು ಪೊಲೀಸರು ವಶಪಡಿಸಿಕೊಂಡ ಘಟನೆ ಆ. 9 ರಂದು ಬೆಳಿಗ್ಗೆ ನಡೆದಿದೆ.

ಆ. 09 ರಂದು ವೇಣೂರು ಪೊಲೀಸ್ ಠಾಣೆಯ ಕೃಷ್ಣ ಕೆ.ಬಿ , ರವರು ಬೀಟ್‌ ವ್ಯಾಪ್ತಿಯ ಗ್ರಾಮದಲ್ಲಿ ಕರ್ತವ್ಯದಲ್ಲಿರುವ ಸಮಯ ತೆಂಕಕಾರಂದೂರು ಗ್ರಾಮದ ಗಿಂಡಾಡಿ ಎಂಬಲ್ಲಿ ಗಿಂಡಾಡಿ- ಪೆರೊಡಿತ್ತಾಯ ಕಟ್ಟೆ ಸಾರ್ವಜನಿಕ ರಸ್ತೆಯಲ್ಲಿ ಗಿಂಡಾಡಿ ಕಡೆಯಿಂದ ಪೆರೊಡಿತ್ತಾಯಕಟ್ಟೆ ಕಡೆಗೆ ಪಿಕಪ್‌ ವಾಹನ ನಂಬ್ರ KA19 AA 2615 ನೇದರಲ್ಲಿ ಮರಳು ಸಾಗಾಟ ಮಾಡುತ್ತಿರುವುದನ್ನು ಕಂಡು ವಾಹನವನ್ನು ತಡೆದು ನಿಲ್ಲಿಸಿ ಆರೋಪಿ ಪಿಕಪ್‌ ವಾಹನ ಚಾಲಕ ತೆಂಕಕಾರಂದೂರು ಹುಲಿಯಡಿ ಮನೆ ನಿವಾಸಿ ಆರೀಸ್‌ (30) ನಲ್ಲಿ ಯಾವುದೇ ದಾಖಲೆ/ಪರವಾನಿಗೆ ಇರುವುದಿಲ್ಲವಾಗಿಯೂ ಅಲ್ಲದೇ ಸದ್ರಿ ಮರಳನ್ನು ತೆಂಕಕಾರಂದೂರು ಗ್ರಾಮದ ಗಿಂಡಾಡಿ ಡ್ಯಾಂ ಬಳಿ ಹರಿಯುವ ನದಿಯಿಂದ ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿ ತಪ್ಪೊಪ್ಪಿಕೊಂಡಿದ್ದು, ಸದ್ರಿ ವಾಹನವನ್ನು ಪರಿಶೀಲಿಸಲಾಗಿ ಇದರಲ್ಲಿ ಸುಮಾರು 40 ಬುಟ್ಟಿ ಮರಳು ಇದ್ದು ಅದರ ಅಂದಾಜು ಮೌಲ್ಯ ರೂ 2,500/- ಹಾಗೂ ಸಾಗಾಟಕ್ಕೆ ಬಳಸಿದ ವಾಹನದ ಅಂದಾಜು ಮೌಲ್ಯ ರೂ 2 ಲಕ್ಷ ಗಳಾಗಿರಬಹುದು. ಈ ಬಗ್ಗೆ ಪ್ರಕರಣ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ರಾ. ಸೇ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya

ಗುರುವಾಯನಕೆರೆ: ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ ರೂ.1ಕೋಟಿ ವಿಮಾ ಮೊತ್ತದ ಚೆಕ್ ವಿತರಣೆ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಮರಿಯಾಂಬಿಕ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಫೆ.4: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್‌ನಲ್ಲಿ ಅಮೃತ ಮಹೋತ್ಸವ ಸಂಭ್ರಮ, ಗಿಫ್ಟ್ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಹೊಸಪಟ್ಣ: ಶ್ರೀ ಸತ್ಯನಾರಾಯಣ ರಂಗ ಮಂದಿರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya

ಕಲ್ಮಂಜ: ಉಳ್ಳಾಯ ಉಳ್ಳಾಲ್ತಿ ದೈವಸ್ಥಾನ ಪರಾರಿ ಮಜಲ್ ಗುಂಡ ಇದರ ನೂತನ ದೇಗುಲದ ಶಿಲಾನ್ಯಾಸ

Suddi Udaya
error: Content is protected !!