September 6, 2026
ಪ್ರಮುಖ ಸುದ್ದಿವರದಿ

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ರೈತ ಸದಸ್ಯರ ಅವಶ್ಯಕತೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ: ಎನ್ ಸುಧಾಕರ ಭಂಡಾರಿ ರೂ 272.37 ಕೋಟಿ ವ್ಯವಹಾರ,ರೂ. 89 ಲಕ್ಷ ಲಾಭ, ಸದಸ್ಯರಿಗೆ ಶೇ 12 ಡಿವಿಡೆಂಟ್

ನಾರಾವಿ: ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಸಂಘವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ವರ್ಷಾಂತ್ಯದಲ್ಲಿ ಸಂಘವು ರೂ. 28.76 ಕೋಟಿ ಠೇವಣಿ ಹೊಂದಿರುತ್ತದೆ. ವರದಿ ಸಾಲಿನಲ್ಲಿ ರೂ. 272.37 ಕೋಟಿ ಒಟ್ಟು ವ್ಯವಹಾರ ಮಾಡಲಾಗಿದೆ. ನಮ್ಮ 5 ಗ್ರಾಮಗಳ ಸಹೃದಯಿ ಸದಸ್ಯ ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿರುವುದರಿಂದ 2024-25ನೇ ಸಾಲಿನಲ್ಲಿ ಸಂಘವು ರೂ 0.89 ಲಕ್ಷ ಲಾಭ ಗಳಿಸಲು ಸಹಕಾರಿಯಾಯಿತು.ಸದಸ್ಯರಿಗೆ ಶೇ.12 ನೀಡಲಾಗುವುದು ಎಂದು ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಹೇಳಿದರು.

ಅವರು ಸೆ. 14ರಂದು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ನಡೆದ ನಾರಾವಿ ಸಿಎ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘವು ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆದುಕೊಂಡಿರುತ್ತದೆ. ಅದೇ ರೀತಿ ವರದಿ ಸಾಲಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನಿಂದ 100% ಸಾಲ ವಸೂಲಾತಿಗಾಗಿ ಸಾಧನಾ ಪ್ರಶಸ್ತಿಯನ್ನು ಸಂಘವು ಪಡಕೊಂಡಿರುತ್ತದೆ ಎಂದರು.ರೈತ ಸದಸ್ಯರು ಸಂಘದ ಅಭಿವೃದ್ಧಿ ಹಾಗೂ ಅನುಕೂಲಗಳ ಬಗ್ಗೆ ಚರ್ಚಿಸಿದರು.

ವೇದಿಕೆಯಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್,ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಹೆಗ್ಡೆ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ಶಶಿಕಾಂತ್ ಜೈನ್,ನಿರ್ದೇಶಕರಾದ ಸದಾನಂದ ಗೌಡ,ವಿಠಲ ಪೂಜಾರಿ,ರಾಜೇಂದ್ರ ಕುಮಾರ್,ಕೃಷ್ಣಪ್ಪ ಪೂಜಾರಿ,ಉಮೇಶ್ ಎಂ.ಕೆ,ಶೇಖರ,ಶ್ರೀಮತಿ ಯಶೋಧ,ಶ್ರೀಮತಿ ಸುಜಲತಾ,ಶ್ರೀಮತಿ ಪದ್ಮಶ್ರೀ,ಶ್ರೀಮತಿ ಸುಪ್ರಿಯಾ ಉಪಸ್ಥಿತರಿದ್ದರು.ಸಿಬ್ಬಂದಿಗಳಾದ ಶ್ರೀಮತಿ ವನಿತಾ,ಶೇಖರ ಕೆ,ಶ್ರೀಮತಿ ಮಲ್ಲಿಕಾ,ಶ್ರೇಯಾಂಸ ಕುಮಾರ್,ಅಶೋಕ,ಪೂಜಿತ್ ಎನ್,ಶ್ರೀಮತಿ ರೇಷ್ಮಾ ಜಿ ಹಾಗೂ ಸದಸ್ಯರು ಸಹಕರಿಸಿದರು.

Related posts

ರೆಖ್ಯ: ಅಶ್ವಿತ್ ಕುಮಾರ್ ನಾಪತ್ತೆ ಪ್ರಕರಣ: ಮೂರು ದಿನಗಳ ಬಳಿಕ ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪ ಹೊಳೆ ಬದಿಯಲ್ಲಿ ಪತ್ತೆ ಹಚ್ಚಿದ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ

Suddi Udaya

ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಬರೆದ ‘ತ್ಯಾಗಮಯಿ ಮೊಳಹಳ್ಳಿ’ ಕೃತಿ ಬಿಡುಗಡೆ

Suddi Udaya

ಜ.8 ರಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವ ಸಂಭ್ರಮ: ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟಸಿ, ದೇಗುಲದ ಒಳಾಂಗಣಕ್ಕೆ ಇಂಟರ್ ಲಾಕ್ ಕೊಡುಗೆ: ಬರೋಡ ಉದ್ಯಮಿ ಶಶಿಧರ ಶೆಟ್ಟಿ

Suddi Udaya

ಧರ್ಮಸ್ಥಳ: ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಪ್ರಕರಣ ಧರ್ಮಸ್ಥಳ ಪೊಲೀಸರಿಂದ ಓರ್ವನ ಬಂಧನ

Suddi Udaya

ಉಜಿರೆ: ಶ್ರೀ ಧ. ಮಂ. ಪಾಲಿಟೆಕ್ನಿಕ್ ಎನ್ .ಎಸ್. ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಬುರುಡೆ ಚಿನ್ನಯ್ಯ ಮತ್ತೆ ಇಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya
error: Content is protected !!