September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಲೋಬೊ ಟಿವಿಎಸ್ ಮೋಟಾರ್ಸ್ ಮಳಿಗೆಯಲ್ಲಿ ಆಯುಧ ಪೂಜೆ

ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬರುತ್ತಿರುವ ರೋನಾಲ್ಡ್ ಲೋಬೋ ಇವರ ಮಾಲೀಕತ್ವದ ಬೆಳ್ತಂಗಡಿಯ ಪ್ರಸಿದ್ಧ ಟಿವಿಎಸ್ ಮೋಟರ್ಸ್ ನಲ್ಲಿ ಆಯುಧ ಪೂಜೆಯನ್ನು ಅ. 2 ರಂದು ಆಚರಿಸಲಾಯಿತು.

ಬೆಳ್ತಂಗಡಿ ವಿಮುಕ್ತಿ ಚಾರಿಟೇಬಲ್ ಸಂಸ್ಥೆಯ ಪ್ರದಾನ ಗುರುಗಳಾದ ಫಾ.ವಿನೋದ್ ಮಸ್ಕರೇನಸ್ ರವರು ಪ್ರಾರ್ಥನೆ ಮಾಡಿ ಸಂಸ್ಥೆಯ ಮಾಲಕರಿಗೆ, ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನ ಪಾಲನ ಪರಿಷದ್ ನ ಉಪಾಧ್ಯಕ್ಷ ರಾದ ವಾಲ್ಟರ್ ಮೋನಿಸ್, ಆಯೋಗದ ಸಂಚಾಲಕಿ ಪೌಲಿನ್ ರೇಗೋ, ವಾರ್ಡಿನ ಗುರಿಕಾರಾದ ಹಾಗೂ ನಿವೃತ್ತ ಶಿಕ್ಷಕಿ ಜೂಲಿಯಾನ ಡಿಸೋಜಾ, ಸಂಸ್ಥೆಯ ಮಾಲಕರ ಪತ್ನಿ ರೋಶಿನಿ ಲೋಬೊ, ಹಿರಿಯ ವಕೀಲ ಅಲೋಶಿಯಸ್ ಲೋಬೊ, ಅಕ್ಕಂದಿರಾದ ವೇರೋನಿಕಾ ಲೋಬೊ, ಜೆನೆವಿವ್ ಲೋಬೊ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ವರ್ತಕರ ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ, ಭಾರತೀಯ ಜೀವ ವಿಮಾ ವಿನ್ಸೆಂಟ್ ಡಿಸೋಜಾ, ಶಿಕ್ಷಕಿ ಥಿಯೋಫಿಲ್ಲ ಡಿಸೋಜಾ, ಸಿವಿಸಿ ಹಾಲ್ ನ ಮಾಲಕರಾದ ಜೇಮ್ಸ್ ಡಿಸೋಜಾ ,ಸಂಸ್ಥೆಯ ಮ್ಯಾನೇಜರ್ ಅಶೋಕ್ ಮೋನಿಸ್, ಸಿಬ್ಬಂದಿ ವರ್ಗದವರು, ಗ್ರಾಹಕರು ಹಾಗೂ ಇತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ರೊನಾಲ್ಡ್ ಲೋಬೋ ಆಗಮಿಸಿದ ಅತಿಥಿ ಗಣ್ಯರ ಸ್ವಾಗತಿಸಿ, ಸತ್ಕರಿಸಿದರು.

Related posts

ಉಜಿರೆ : ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ‍್ಯಕ್ರಮ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿ ಬಿರುವೆರ್ ಕುಡ್ಲ ಸಂಘದ 49 ಹಾಗೂ 50ನೇ ಸೇವಾ ಯೋಜನೆ ದೇಣಿಗೆ ಹಸ್ತಾಂತರ

Suddi Udaya

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಬಹು ಕೋಟಿ ಹಗರಣ ಪ್ರಕರಣ: ಸೊಸೈಟಿ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ 9 ಮಂದಿಯ ಆಸ್ತಿ ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ

Suddi Udaya

ಯಕ್ಷಯಾನ-2026: ಉಜಿರೆ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರಕ್ಕೆ ಸಮಗ್ರ ದ್ವಿತೀಯ ತಂಡ ಪ್ರಶಸ್ತಿ

Suddi Udaya

ಕಳಿಯ ಗ್ರಾಮ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ

Suddi Udaya
error: Content is protected !!