July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಲೋಬೊ ಟಿವಿಎಸ್ ಮೋಟಾರ್ಸ್ ಮಳಿಗೆಯಲ್ಲಿ ಆಯುಧ ಪೂಜೆ

ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬರುತ್ತಿರುವ ರೋನಾಲ್ಡ್ ಲೋಬೋ ಇವರ ಮಾಲೀಕತ್ವದ ಬೆಳ್ತಂಗಡಿಯ ಪ್ರಸಿದ್ಧ ಟಿವಿಎಸ್ ಮೋಟರ್ಸ್ ನಲ್ಲಿ ಆಯುಧ ಪೂಜೆಯನ್ನು ಅ. 2 ರಂದು ಆಚರಿಸಲಾಯಿತು.

ಬೆಳ್ತಂಗಡಿ ವಿಮುಕ್ತಿ ಚಾರಿಟೇಬಲ್ ಸಂಸ್ಥೆಯ ಪ್ರದಾನ ಗುರುಗಳಾದ ಫಾ.ವಿನೋದ್ ಮಸ್ಕರೇನಸ್ ರವರು ಪ್ರಾರ್ಥನೆ ಮಾಡಿ ಸಂಸ್ಥೆಯ ಮಾಲಕರಿಗೆ, ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನ ಪಾಲನ ಪರಿಷದ್ ನ ಉಪಾಧ್ಯಕ್ಷ ರಾದ ವಾಲ್ಟರ್ ಮೋನಿಸ್, ಆಯೋಗದ ಸಂಚಾಲಕಿ ಪೌಲಿನ್ ರೇಗೋ, ವಾರ್ಡಿನ ಗುರಿಕಾರಾದ ಹಾಗೂ ನಿವೃತ್ತ ಶಿಕ್ಷಕಿ ಜೂಲಿಯಾನ ಡಿಸೋಜಾ, ಸಂಸ್ಥೆಯ ಮಾಲಕರ ಪತ್ನಿ ರೋಶಿನಿ ಲೋಬೊ, ಹಿರಿಯ ವಕೀಲ ಅಲೋಶಿಯಸ್ ಲೋಬೊ, ಅಕ್ಕಂದಿರಾದ ವೇರೋನಿಕಾ ಲೋಬೊ, ಜೆನೆವಿವ್ ಲೋಬೊ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ವರ್ತಕರ ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ, ಭಾರತೀಯ ಜೀವ ವಿಮಾ ವಿನ್ಸೆಂಟ್ ಡಿಸೋಜಾ, ಶಿಕ್ಷಕಿ ಥಿಯೋಫಿಲ್ಲ ಡಿಸೋಜಾ, ಸಿವಿಸಿ ಹಾಲ್ ನ ಮಾಲಕರಾದ ಜೇಮ್ಸ್ ಡಿಸೋಜಾ ,ಸಂಸ್ಥೆಯ ಮ್ಯಾನೇಜರ್ ಅಶೋಕ್ ಮೋನಿಸ್, ಸಿಬ್ಬಂದಿ ವರ್ಗದವರು, ಗ್ರಾಹಕರು ಹಾಗೂ ಇತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ರೊನಾಲ್ಡ್ ಲೋಬೋ ಆಗಮಿಸಿದ ಅತಿಥಿ ಗಣ್ಯರ ಸ್ವಾಗತಿಸಿ, ಸತ್ಕರಿಸಿದರು.

Related posts

ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ನಲ್ಲಿ ಗುರುಜಯಂತಿ ಆಚರಣೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಗೆ ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆಯವರಿಂದ 650 ಊಟದ ಸ್ಟೀಲ್ ತಟ್ಟೆ ಹಸ್ತಾಂತರ

Suddi Udaya

ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಗರ್ಡಾಡಿ ಮಿತ್ತೊಟ್ಟು – ಪಾರ ರಸ್ತೆಯ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

Suddi Udaya

ಪುದುವೆಟ್ಟು: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಶ್ರೀ ರಾಮ ಮಂದಿರದ ಹನುಮ ರಥಕ್ಕೆ ಸ್ವಾಗತ

Suddi Udaya
error: Content is protected !!