23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಳಂತಿಲದಲ್ಲಿ ಕುಣಿತ ಭಜನಾ ತರಬೇತಿ ಆರಂಭೋತ್ಸವ

ಇಳಂತಿಲ : ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ನೇಜಿಕಾರು ಇಳಂತಿಲ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಯೋಗದೊಂದಿಗೆ ಕುಣಿತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ಉದಯ ಕುಮಾರ್ ನೇಜಿಕಾರು ಇವರ ಅಧ್ಯಕ್ಷತೆಯನ್ನು ನೆರವೇರಿತು.

ಚಾರ್ ಧಾಮ್ ಯಾಥ್ರಾ ಸಂಘದ ಪ್ರಮುಖರಾದ ಶ್ರೀಕೃಷ್ಣ ಶೆಣೈ ಉಪ್ಪಿನಂಗಡಿ ದೀಪ ಪ್ರಜ್ವಲನೆ ಗೈದು ಶುಭ ಹಾರೈಸಿದರು.

ಬೆಳ್ತಂಗಡಿ ಭಜನಾ ತರಬೇತುದಾರರ ಸಂಘದ ಅಧ್ಯಕ್ಷ ಸಂದೇಶ್ ಮದ್ದಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಜನಾ ತರಬೇತಿಯ ಉದ್ದೇಶ ರೂಪು-ರೇಷಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಸುರೇಶ್ ಪೈ ನೇಜಿಕಾರು, ಮಂಜುನಾಥೇಶ್ವರ ಭಜನಾ ಪರಿಷತ್ ಸಮನ್ವಯಧಿಕಾರಿಗಳಾದ ಸಂತೋಷ್ ಪಿ ಅಳಿಯೂರು, ಕೇಶವ , ಇಳಂತಿಲ ಶಿಶುಮಂದಿರ ಕಾರ್ಯದರ್ಶಿ ರವಿ ಇಳಂತಿಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಣಿಯೂರು ವಲಯದ ಮೇಲ್ವಿಚಾರಕಿ ಕು. ಶಿಲ್ಪಾ, ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಬಾಬು ಗೌಡ ನೇಜಿಕಾರು, ಭಜನಾ ಪರಿಷತ್ ಗುರುವಾಯನೆಕರೆಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ ಉಪಸ್ಥಿತರಿದ್ರದು.

ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಮತ್ತು ಮಿತ್ರವೃಂದ ನೇಜಿಕಾರು ಸದಸ್ಯರು , ಮಾತೆಯರು ಉಪಸ್ಥಿತರಿದ್ದರು. ನಯನ್ ಕುಮಾರ್ ನೇಜಿಕಾರು ಸ್ವಾಗತಿಸಿ ವಂದಿಸಿದರು. ವಿನಯ್ ಕುಮಾರ್ ನೇಜಿಕಾರು ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯ ಶಿಕ್ಷಕಿ ಕು। ಥಿಯೋಫಿಲಾ ಡಿಸೋಜ ರವರಿಗೆ ವಿದಾಯ ಸಮಾರ೦ಭ

Suddi Udaya

ಸಂಜೀವ ಪೂಜಾರಿ ನಾಲ್ಕೂರು ನಿಧನ

Suddi Udaya

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

Suddi Udaya

ಮೇಲಂತಬೆಟ್ಟು : ಪ್ರೇಮಾ ಅವರಿಗೆ “ವಾತ್ಸಲ್ಯ” ಮನೆ ಹಸ್ತಾಂತರ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆ ದ್ವೀತಿಯ ಸ್ಥಾನ

Suddi Udaya

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ಫಿಲಿಪ್ಸ್ ಅಫಿನಿಟಿ-70 ಅಲ್ಟ್ರಾ ಸೌಂಡ್ ಸೇವೆ ಲೋಕಾರ್ಪಣೆ

Suddi Udaya
error: Content is protected !!