September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಅಯೋದ್ಯೆ ಶ್ರವಣಧಾಮಕ್ಕೆ ಭೇಟಿ

ಬೆಳ್ತಂಗಡಿ: ಉತ್ತರ ಭಾರತದ ಪ್ರವಾಸದಲ್ಲಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅ. 12ರಂದು ಅಯೋದ್ಯೆ ಶ್ರವಣಧಾಮಕ್ಕೆ ಭೇಟಿ ನೀಡಿದರು.

ರಾಮಾಯಣ ಕಾಲದ ಶ್ರವಣ ಕುಮಾರನ ಚರಿತ್ರೆಯಲ್ಲಿ ಕುರುಡರಾದ ವೃದ್ಧ ತಂದೆ ತಾಯಿಯನ್ನು ತಕ್ಕಡಿಯಲ್ಲಿ ಕೂರಿಸಿ ತನ್ನ ಭುಜದ ಮೇಲೆ ಹೊತ್ತುಕೊಂಡು ಅಯೋಧ್ಯೆಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರದ ಒಂದು ಜಾಗದಲ್ಲಿ ಕುಳ್ಳಿರಿಸಿ ಅವರಿಗೆ ಬಾಯಾರಿಕೆಗಾಗಿ ನೀರು ತರಲು ಹೋದ ಸಂದರ್ಭದಲ್ಲಿ ನೀರು ಬಿಂದಿಗೆಗೆ ತುಂಬಿಸುವ ಶಬ್ದ ಬಂದಾಗ ಜಿಂಕೆ ಒಂದು ನೀರು ಕುಡಿಯಲು ಬಂದಿದೆ ಎಂದು ತಿಳಿದ ಚಕ್ರವರ್ತಿ ಮಹಾರಾಜ ದಶರಥನು ಶಬ್ದವೇದಿ ಬಾಣ ಪ್ರಯೋಗಿಸಿದಾಗ ಶ್ರವಣ ಕುಮಾರನ ಹತ್ಯೆಯಾಗುತ್ತದೆ. ಶ್ರವಣಕುಮಾರನ ತಂದೆ ತಾಯಿಗಳು ದಶರಥ ಮಹಾರಾಜರಿಗೆ ಶಾಪ ಕೊಟ್ಟಂತ ಸ್ಥಳ ಇಂದು ಶ್ರವಣಧಾಮ ಎಂಬ ಹೆಸರಿನಿಂದ ಬಹುದೊಡ್ಡ ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ತಮ್ಮ ಶಿಷ್ಯ ಪರಿವಾರದೊಂದಿಗೆ ಹೋಗಿ, ಕ್ಷೇತ್ರ ದರ್ಶನ ಮಾಡಿದರು.

Related posts

ಬೆಳಾಲು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಪಿಎಂ ಶ್ರೀ ಸರ್ಕಾರಿ ಮಾದರಿ ಬೆಳ್ತಂಗಡಿ ಶಾಲೆಗೆ ಧರ್ಮಸ್ಥಳದ ‘ಜ್ಞಾನ ವಿಕಾಸ’ ತಂಡ ಭೇಟಿ: ಸ್ಮಾರ್ಟ್ ಕ್ಲಾಸ್ ವೀಕ್ಷಣೆ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಪ್ರಶಸ್ತಿ

Suddi Udaya

ವಿ. ಹಿಂ. ಪ, ಬಜರಂಗದಳ ಪದ್ಮುಂಜ ಘಟಕದಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಆಂದೋಲನ

Suddi Udaya

ಪ್ರಧಾನಿ ನರೇಂದ್ರ ಮೋದಿ ಯವರ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಿರುದ್ಧ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು

Suddi Udaya

ವಲಯ ಮಟ್ಟದ ಥ್ರೋಬಾಲ್ ಪಂದ್ಯಾಟ : ಅಂಡೆತ್ತಡ್ಕ ಶಾಲೆಯ ಬಾಲಕ ಬಾಲಕಿಯರ ತಂಡ ಪ್ರಥಮ

Suddi Udaya
error: Content is protected !!