22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆರ್ಕಿಡ್‌ ಪ್ರದರ್ಶನ:  ಧರ್ಮಸ್ಥಳದ  ಸುಪ್ರಿಯಾ ಹರ್ಷೇಂದ್ರ ಕುಮಾರ್‌ರವರಿಗೆ ಬಹುಮಾನ

ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ಮತ್ತು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಆಯೋಜಿಸಿದ ಆರ್ಕಿಡ್ ಪ್ರದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಪ್ಯಾಫಿಯೋಪೆಡಿಲಮ್ ಆರ್ಕಿಡ್  ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.

ಕಳೆದ 5,6 ವರ್ಷಗಳಿಂದ ಆರ್ಕಿಡ್‌ ಗಿಡಗಳನ್ನು ಸಂಗ್ರಹಿಸಿಸುವ ಹವ್ಯಾಸ ಹೊಂದಿರುವ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ 
ಕುಮಾರ್ ಇದೇ ಮೊದಲ ಬಾರಿಗೆ  ಬೆಂಗಳೂರಿನಲ್ಲಿ ನಡೆದ ಆರ್ಕಿಡ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಬಹುಮಾನ ಪಡೆದ ಸಂಭ್ರಮದಲ್ಲಿ ಮಾತನಾಡಿದ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ “ನಾನು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ಸಾಮಾನ್ಯವಾಗಿ ಸ್ಲಿಪರ್‌ ಆರ್ಕಿಡ್ಸ್‌ ಎಂದು ಕರೆಯಲ್ಪಡುವ, ಲೇಡೀಸ್‌ ಶೂಸ್‌ನಂತೆ ಕಾಣುವ ವಿಶೇಷ ತಳಿ ಪ್ರಥಮ  ಸ್ಥಾನ ಪಡೆದುಕೊಂಡಿದೆ.  ಇದು ಆರ್ಕಿಡ್‌ಗಳಲ್ಲೇ ಪ್ರಮುಖವಾದುದಾಗಿದೆ. ನನ್ನ ಸಂಗ್ರಹದ ಕೆಲವು ಆರ್ಕಿಡ್‌ಗಳನ್ನು ಪ್ರದರ್ಶನ ಮಾಡಿ, ಇಲ್ಲಿನ ಶೋವನ್ನು ವೀಕ್ಷಿಸುವ ಆಸಕ್ತಿ ಹೊಂದಿದ್ದೆ. ಬಹುಮಾನ ದೊರೆತಿದ್ದು, ಅತೀವ ಸಂತೋಷವಾಗಿದೆ. ಮನೆಯವರನ್ನೂ ಕೂಡ ಈ ಆರ್ಕಿಡ್ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದೇನೆ” ಎಂದರು.

ಬೇರೆ ಬೇರೆ ಜಾತಿಯ 2500 ಹೆಚ್ಚು ಗಿಡಗಳ ಸಂಗ್ರಹ ಹೊಂದಿರುವ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಎಲ್ಲೇ 
ಹೋದರೂ ಗಿಡಗಳ ಬಗ್ಗೆ ಬಹಳ ಆಸಕ್ತಿ ತೋರುತ್ತಾರೆ. 

ಬೇರೆ -ಬೇರೆ ಕಡೆಗಳಿಗೆ ಭೇಟಿ ನೀಡಿದಾಗ ಹೊಸ ಹೊಸ ತಳಿಗಳನ್ನು ಗಿಡಗಳನ್ನು ಸಂಗ್ರಹಿಸುವುದು ಅವರ ಇಷ್ಟದ ಹವ್ಯಾಸ.

Related posts

ಎ.14 ರವರೆಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಹಬ್ಬ

Suddi Udaya

ಧರ್ಮಸ್ಥಳ ವಸ್ತು ಸಂಗ್ರಹಾಲಯಕ್ಕೆ ಬರಲಿದೆ ಹಾಯಿದೋಣಿ: ಜೂ.9ರಂದು ಕುಂದಾಪುರದಿಂದ ಮೆರವಣಿಗೆಯ ಮೂಲಕ ಧಮ೯ಸ್ಥಳಕ್ಕೆ

Suddi Udaya

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

Suddi Udaya

ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ ನಿಧನ

Suddi Udaya

ದ.ಕ ಜಿಲ್ಲಾ ಕಸಾಪ ವತಿಯಿಂದ ನಾಲ್ವರು ಹಿರಿಯ ಸಾಹಿತಿಗಳ ಭೇಟಿ, ಯೋಗಕ್ಷೇಮ ವಿಚಾರಣೆ

Suddi Udaya

ನಾಳೆ ಎ.21 ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟ

Suddi Udaya
error: Content is protected !!