25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿ

ಕನ್ಯಾಡಿ ಸೇವಾಭಾರತಿಯ ನೂತನ ಕಾರ್ಯಾಲಯದ ವಾಸ್ತುಪೂಜೆ ಹಾಗೂ ಪ್ರವೇಶ:

ಕನ್ಯಾಡಿ: ಸೇವಾಭಾರತಿ ಕಾರ್ಯಾಲಯದ ಸೇವಾನಿಕೇತನ ಹೊಸ ಕಟ್ಟಡದ ವಾಸ್ತುಪೂಜೆಯು ನವೆಂಬರ್ 27 ರಂದು ಭಕ್ತಿಭಾವದಿಂದ ನೆರವೇರಿತು. ಅದರ ಮುಂದುವರೆದ ಕಾರ್ಯಕ್ರಮವಾಗಿ ನವೆಂಬರ್ 28 ರಂದು ನವೀನ ಕಟ್ಟಡದಲ್ಲಿ ಕಾರ್ಯಾಲಯ ಪ್ರವೇಶ ಹಾಗೂ ಆಶ್ಲೇಷ ಬಲಿ ಪ್ರಧಾನವಾಗಿ ನಡೆಯಿತು. ಸಾಯಂಕಾಲ 6.00 ಗಂಟೆಗೆ ದುರ್ಗಾಪೂಜೆ ಜರುಗಿತು

ಈ ವಿಶೇಷ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್, ಅನೇಕ ಗಣ್ಯರು, ಸಮಾಜಸೇವಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಭಜನೆಯ ಮೂಲಕ ದೇವರ ಸ್ತುತಿ ಕಾರ್ಯಕ್ರಮಕ್ಕೆ ಭಕ್ತಿಪರ ವಾತಾವರಣದ ಸೊಬಗು ಹೆಚ್ಚಿಸಿತು.

ಹೊಸ ಕಟ್ಟಡದ ಆರಂಭದೊಂದಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಪುನಶ್ಚೇತನವನ್ನು ಪಡೆದುಕೊಂಡು ಸ್ವಾವಲಂಬನೆಯತ್ತ ಸಾಗುವಂತೆ ಹಾಗೂ ಸೇವಾಭಾರತಿಯ ವಿವಿಧ ಸೇವಾಚಟುವಟಿಕೆಗಳು ಈ ಹೊಸ ಕಟ್ಟಡದ ಮೂಲಕ ಮತ್ತಷ್ಟು ಸಕ್ರಿಯವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

Related posts

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ಶಿರ್ಲಾಲು ಸ. ಉ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ

Suddi Udaya

ಮಲವಂತಿಗೆ: ತೋಟಕ್ಕೆ ನುಗ್ಗಿದ ಕಾಡಾನೆ; ಅಪಾರ ಕೃಷಿ ಹಾನಿ

Suddi Udaya

ವಾಲಿಬಾಲ್ ಪಂದ್ಯಾಟ: ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ

Suddi Udaya
error: Content is protected !!