ಪಡಂಗಡಿ ಗ್ರಾಮದ ಕೊಡಿಯೇಲು ಎಂಬಲ್ಲಿ ಕರುವನ್ನು ಕೊಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪಡಂಗಡಿ ಪರಿಸರದಲ್ಲಿ ಚಿರತೆ ಸಂಚಾರದ ಮಾಹಿತಿಯನ್ನು ಕಲೆಹಾಕಿ ಚಿರತೆ ಸೆರೆಗೆ ಗೂಡು ಇರಿಸಲಾಗಿದೆ.


ದೇಜಪ್ಪ ಮೂಲ್ಯ ಎಂಬುವವರ ಕರುವನ್ನು ಚಿರತೆ ಕೊಂದ ಬಗ್ಗೆ ಆರ್ ಎಫ್ ಒ ತ್ಯಾಗರಾಜ್ ಟಿ.ಎನ್ ರವರ ಮಾರ್ಗದರ್ಶನದಂತೆ ಇಲಾಖೆಯಿಂದ ದೊರಕುವ ಸೂಕ್ತ ಪರಿಹಾರವನ್ನು ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಡಿವೈಆರ್ ಎಫ್ ಒ ಕಿರಣ್ ಪಾಟೀಲ್, ಗಸ್ತು ಅರಣ್ಯಪಾಲಕ ಪರಶುರಾಮ್, ಪ್ರತಾಪ್ ಕುಮಾರ್, ರವಿಕುಮಾರ್, ಅರಣ್ಯ ವೀಕ್ಷಕ ದಿವಾಕರ್ ಸಾರ್ವಜನಿಕರ ಸಹಕಾರದೊಂದಿಗೆ ಚಿರತೆಯ ಸೆರೆಗೆ ಗೂಡು ಇರಿಸಲಾಗಿದೆ.













