22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಏಕತೆ, ಸಾಂಸ್ಕೃತಿಕ ಜಾಗೃತಿಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ಹಿಂದೂ ಸಂಗಮ ಆಯೋಜನ ಸಮಿತಿ ವೇಣೂರು ತಾಲೂಕು, ವೇಣೂರು ಮಂಡಲದ ಸಂಯೋಜನೆಯಲ್ಲಿ ಜ.31 ರಂದು ಸಂಜೆ 3 ಗಂಟೆಗೆ ವೇಣೂರು ಶ್ರೀರಾಮ ಭಜನಾ ಮಂದಿರದಿಂದ ಶ್ರೀಮಹಾಲಿಂಗೇಶ್ವರ ದೇವಸ್ಥಾನದವರೆಗೆ ಬೃಹತ್ ಶೋಭಾಯಾತ್ರೆಯೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಿಂದೂ ಸಂಗಮದ ಸಭಾ ಕಾರ್ಯಕ್ರಮ ನಡೆಯಲಿದೆ.


ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಿ ವೇಣೂರು ಹಿಂದೂ ಸಂಗಮದ ಸಂಚಾಲಕ ಪುರುಷೋತ್ತಮ ರಾವ್ ಬಿಡುಗಡೆ ಮಾಡಿದರು. ಹಿಂದೂ ಸಂಗಮ ಕಾರ್ಯಕ್ರಮದ ಅಧ್ಯಕ್ಷ ಶ್ರವಣ್ ಕೆ. ಮಿತ್ತೋಟ್ಟು ಕರಿಮಣೇಲು, ವೇಣೂರು ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಗೌಡ ವೇಣೂರು, ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ನೇಮಯ್ಯ ಕುಲಾಲ್, ಪಂಚಾಯತ್ ಸದಸ್ಯ ಉಮೇಶ ನಡ್ತಿಕಲ್ಲು, ಶ್ರೀನಿಧಿ ಶಾಮಿಯಾನದ ಮಾಲಕರಾದ ಜಗದೀಶ ಭಟ್, ಉದ್ಯಮಿ ರಾಜೇಶ ಕೊಪ್ಪದಬಾಕಿಮಾರು, ಕಾಶೀನಾಥ ಹೆಗ್ಡೆ ಬಜಿರೆ, ಪ್ರವೀಣ ಕುಮಾರ್ LIC, ರಾಮದಾಸ ನಾಯಕ್ ಕರಿಮಣೇಲು, ನಿರ್ಮಲ್ ಪೈ ವೇಣೂರು, ದಯಾನಂದ ಭಂಡಾರಿ ಕರಿಮಣೇಲು, ಜಯರಾಮ ಆಚಾರ್ಯ ಕಾಂಜರಕಟ್ಟೆ, ಹರೀಶ ಕಾಂಜರಕಟ್ಟೆ, ಸೋಮನಾಥ ಕೆ.ವಿ, ಉಮೇಶ ವೇಣೂರು, ದಿನೇಶ ವೇಣೂರು, ಸಂಯೋಜಕ ಪ್ರಕಾಶ ಪುರೋಹಿತ್ ವೇಣೂರು ಮೊದಲಾದವರು ಉಪಸ್ಥಿತರಿದ್ದರು.

Related posts

ಬೆಳಾಲಿನಲ್ಲಿ, ಹದಿನೆಂಟು ದಿನಗಳ ಭಗವದ್ಗೀತೆ ತರಗತಿಯ ಸಮಾರೋಪ

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ಬೃಹದಾಕಾರದ ಮರ: ವಾಸ್ತವ್ಯದ ಮನೆಗೆ ಭಾಗಶಃ ಹಾನಿ, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು

Suddi Udaya

ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಹಲ್ಲೆ: ಪಂಚಾಯತ್ ಮೊಬೈಲ್ ಗೆ ಹಾನಿ, ದರೋಡೆ ಆರೋಪ: ಪಿಡಿಒ ದೂರಿನಂತೆ ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya

ಬಿಜೆಪಿ ಬಡಗಕಾರಂದೂರು ಬೂತ್ ಸಂಖ್ಯೆ 40 ರ ಅಧ್ಯಕ್ಷರಾಗಿ ಶ್ರೇಯಸ್ ಶೆಟ್ಟಿ, ಕಾರ್ಯದರ್ಶಿಯಾಗಿ ಓಂಕಾರ್ ಜೈನ್ ಆಯ್ಕೆ

Suddi Udaya

ಸುನ್ನಿ ಕೋರ್ಡಿನೇಷನ್ ವತಿಯಿಂದ ಎಸ್‌ಐಆರ್ ಮಾಹಿತಿ ಕಾರ್ಯಾಗಾರ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ನಾರಾವಿ ಮಹಾಶಕ್ತಿಕೇಂದ್ರದ ಸಭೆ

Suddi Udaya
error: Content is protected !!