July 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುನ್ನಿ ಕೋರ್ಡಿನೇಷನ್ ವತಿಯಿಂದ ಎಸ್‌ಐಆರ್ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಸುನ್ನೀ ಕೋಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ಆಶ್ರಯದಲ್ಲಿ ಕುಪ್ಪೆಟ್ಟಿ ಶಾದಿ ಮಹಲ್ ಮತ್ತು ಗುರುವಾಯನಕೆರೆ ಶಾದಿಮಹಲ್ ಸಭಾಂಗಣದಲ್ಲಿ ಭಾರತ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ (ಎಸ್‌ಐಆರ್) ಕುರಿತ ಮಾಹಿತಿ ಕಾರ್ಯಗಾರ ಜೂ.30 ರಂದು ನಡೆಯಿತು.

ಕುಪ್ಪೆಟ್ಟಿಯಲ್ಲಿ ಅಬ್ಬಾಸ್ ಬಟ್ಲಡ್ಕ ಹಾಗೂ ಗುರುವಾಯನಕೆರೆಯಲ್ಲಿ ಸಲೀಂ ಕನ್ಯಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಗುರುವಾಯನಕೆರೆಯಲ್ಲಿ ಸಯ್ಯಿದ್ ಫಝಲ್ ಜಮಲುಲ್ಲೈಲಿ ತಂಙಳ್ ವಾದಿ‌ಇರ್ಫಾನ್ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿದರು.
ಎರಡೂ ಕೇಂದ್ರಗಳಲ್ಲಿ ಕಂದಾಯ ಇಲಾಖೆ ಮೂಲಕ ಬಿಎಲ್‌ಒ ಗಳ ತರಬೇತುದಾರರಾದ ಧರಣೇಂದ್ರ ಕೆ ಜೈನ್ ಹಾಗೂ ಜಗನ್ನಾಥ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನಡೆಸಿಕೊಟ್ಟರು. ಎರಡೂ ಕೇಂದ್ರಗಳಲ್ಲಿ
ಆದಂ ಅಲ್ ಮದೀನಾ, ಜಿ ಎಂ ಕುಂಞಿ ಜೋಗಿ ಬೆಟ್ಟು, ಉಮರ್ ಜಿ.ಕೆ ಗುರುವಾಯನಕೆರೆ, ಬಿ.ಎಮ್ ಹಮೀದ್ ಉಜಿರೆ, ಮುಹಮ್ಮದ್ ರಫಿ, ಉಮರ್‌ಕುಂಞಿ ನಾಡ್ಜೆ, ಅಬ್ಬೋನು ಮದ್ದಡ್ಕ, ಕೆ ಎಮ್ ಕರೀಂ ಗೇರುಕಟ್ಟೆ, ಎಂ.ಬಿ ಸಾದಿಕ್ ಮಲೆಬೆಟ್ಟು, ರಶೀದ್ ಮಡಂತ್ಯಾರು, ಅಬ್ದುಲ್ ರಝಾಕ್ ಸಖಾಫಿ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಸಹಿತ
ವಿವಿಧ ಮೊಹಲ್ಲಾಗಳ ಖತೀಬ್, ಮುದರ್ರಿಸ್, ಹಾಗೂ ಇತರ ಧರ್ಮಗುರುಗಳು, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್, ಎಸ್‌ಜೆಯು, ಎಸ್.ಎಮ್.ಎ, ಎಸ್‌ಜೆಎಮ್ ಸಹಿತ ಇರುವ ಸಂಘ ಕುಟುಂಬದ ವಿವಿಧ ಮಟ್ಟದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಕುಪ್ಪೆಟ್ಟಿ‌ ಕಾರ್ಯಕ್ರಮದಲ್ಲಿ ಅಲೀ ತುರ್ಕಳಿಕೆ ಕಾರ್ಯಕ್ರಮ‌ ನಿರೂಪಿಸಿ, ಮುಹಮ್ಮದ್ ರಫಿ ವಂದಿಸಿದರು.

Related posts

ನಾರಾವಿ ಭಾರತೀಯ ಜೈನ್ ಮಿಲನ್ ವತಿಯಿಂದ ವಿಶೇಷ ಆಟಿದ ಕೂಟ, ಜಿನ ಭಜನಾ ಪುಸ್ತಕ ಬಿಡುಗಡೆ ಮತ್ತು ಪರಮ ಪೂಜ್ಯ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರ ವಿನಯಾಂಜಲಿ ಸಭೆ,

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಯದುಪತಿ ಗೌಡರಿಗೆ ಗೌರವಾರ್ಪಣೆ

Suddi Udaya

ಮರೋಡಿ: ಅರುಣೋದಯ ಯುವಕ ಮಂಡಲದಿಂದ ‘ಆಟಿದ ತಿನಸ್ ಬಂಜರ ವನಸ್’ ಕಾರ್ಯಕ್ರಮ

Suddi Udaya

ಮರುಮೌಲ್ಯಮಾಪನ ಫಲಿತಾಂಶ: ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜು ತಾಲೂಕಿನಲ್ಲಿ ಪ್ರಥಮ

Suddi Udaya

ಆಟೋ ಚಾಲಕ ಯಶೋಧರ ಗೌಡ ಅಸೌಖ್ಯದಿಂದ ನಿಧನ

Suddi Udaya

ನಿವೃತ್ತ ಯೋಧ ಡಾ.ಕೆ.ಎಸ್ ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

Suddi Udaya
error: Content is protected !!