August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುನ್ನಿ ಕೋರ್ಡಿನೇಷನ್ ವತಿಯಿಂದ ಎಸ್‌ಐಆರ್ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಸುನ್ನೀ ಕೋಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ಆಶ್ರಯದಲ್ಲಿ ಕುಪ್ಪೆಟ್ಟಿ ಶಾದಿ ಮಹಲ್ ಮತ್ತು ಗುರುವಾಯನಕೆರೆ ಶಾದಿಮಹಲ್ ಸಭಾಂಗಣದಲ್ಲಿ ಭಾರತ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ (ಎಸ್‌ಐಆರ್) ಕುರಿತ ಮಾಹಿತಿ ಕಾರ್ಯಗಾರ ಜೂ.30 ರಂದು ನಡೆಯಿತು.

ಕುಪ್ಪೆಟ್ಟಿಯಲ್ಲಿ ಅಬ್ಬಾಸ್ ಬಟ್ಲಡ್ಕ ಹಾಗೂ ಗುರುವಾಯನಕೆರೆಯಲ್ಲಿ ಸಲೀಂ ಕನ್ಯಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಗುರುವಾಯನಕೆರೆಯಲ್ಲಿ ಸಯ್ಯಿದ್ ಫಝಲ್ ಜಮಲುಲ್ಲೈಲಿ ತಂಙಳ್ ವಾದಿ‌ಇರ್ಫಾನ್ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿದರು.
ಎರಡೂ ಕೇಂದ್ರಗಳಲ್ಲಿ ಕಂದಾಯ ಇಲಾಖೆ ಮೂಲಕ ಬಿಎಲ್‌ಒ ಗಳ ತರಬೇತುದಾರರಾದ ಧರಣೇಂದ್ರ ಕೆ ಜೈನ್ ಹಾಗೂ ಜಗನ್ನಾಥ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನಡೆಸಿಕೊಟ್ಟರು. ಎರಡೂ ಕೇಂದ್ರಗಳಲ್ಲಿ
ಆದಂ ಅಲ್ ಮದೀನಾ, ಜಿ ಎಂ ಕುಂಞಿ ಜೋಗಿ ಬೆಟ್ಟು, ಉಮರ್ ಜಿ.ಕೆ ಗುರುವಾಯನಕೆರೆ, ಬಿ.ಎಮ್ ಹಮೀದ್ ಉಜಿರೆ, ಮುಹಮ್ಮದ್ ರಫಿ, ಉಮರ್‌ಕುಂಞಿ ನಾಡ್ಜೆ, ಅಬ್ಬೋನು ಮದ್ದಡ್ಕ, ಕೆ ಎಮ್ ಕರೀಂ ಗೇರುಕಟ್ಟೆ, ಎಂ.ಬಿ ಸಾದಿಕ್ ಮಲೆಬೆಟ್ಟು, ರಶೀದ್ ಮಡಂತ್ಯಾರು, ಅಬ್ದುಲ್ ರಝಾಕ್ ಸಖಾಫಿ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಸಹಿತ
ವಿವಿಧ ಮೊಹಲ್ಲಾಗಳ ಖತೀಬ್, ಮುದರ್ರಿಸ್, ಹಾಗೂ ಇತರ ಧರ್ಮಗುರುಗಳು, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್, ಎಸ್‌ಜೆಯು, ಎಸ್.ಎಮ್.ಎ, ಎಸ್‌ಜೆಎಮ್ ಸಹಿತ ಇರುವ ಸಂಘ ಕುಟುಂಬದ ವಿವಿಧ ಮಟ್ಟದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಕುಪ್ಪೆಟ್ಟಿ‌ ಕಾರ್ಯಕ್ರಮದಲ್ಲಿ ಅಲೀ ತುರ್ಕಳಿಕೆ ಕಾರ್ಯಕ್ರಮ‌ ನಿರೂಪಿಸಿ, ಮುಹಮ್ಮದ್ ರಫಿ ವಂದಿಸಿದರು.

Related posts

ದಿ| ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಧ್ಯಂತರ ಸಮ್ಮೇಳನದಲ್ಲಿ ಸಮಗ್ರ ಪ್ರಶಸ್ತಿ

Suddi Udaya

ನೈತಿಕ ಮೌಲ್ಯಾಧಾರಿತ ಸ್ಪರ್ಧೆ: ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಮರೋಡಿ: ನ್ಯುಮೋನಿಯದಿಂದ 7ವರ್ಷದ ಬಾಲಕಿ ನಿಧನ

Suddi Udaya

ಮೊಗ್ರು: ಅಲೆಕ್ಕಿ ಜೈರಾಮ ಸೇವಾ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ, ತುಳಸಿಪೂಜೆ, ಭಜನೆ, ಹಣತೆಗಳ ದೀಪ ಪ್ರಜ್ವಲನೆ

Suddi Udaya

ಧರ್ಮಸ್ಥಳ : ನಡುಗುಡ್ಡೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಉರಗ ರಕ್ಷಕ ಸ್ನೇಕ್ ಪ್ರಕಾಶ್

Suddi Udaya
error: Content is protected !!