ವೇಣೂರು: ಪಡ್ಡಂದಡ್ಕ ಮುನವಿರುಲ್ ಇಸ್ಲಾಂ ಮದರಸ ಪ್ರಾರಂಭೋತ್ಸವ ಮಾ 29 ರಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ನಡೆಯಿತು.

ಖತೀಬ್ ಸಮೀರ್ ದಾರಿಮಿ ದುವಾ ಮಾಡಿ ಉದ್ಘಾಟಿಸಿದರು.ಮದರಸ ಅಧ್ಯಾಪಕರುಗಳಾದ ನಝೀರ್ ಹನಿಫಿ, ಹಕೀಮ್ ಜಲಾಲಿ, ಪ್ರಮುಖರಾದ ಎಚ್ ಮಹಮ್ಮದ್ ವೇಣೂರು, ರಫೀಕ್ ಪಡ್ಡ,ಖಾಲಿದ್ ಪುಲಬೆ, ಪಿಜೆ ಮಹಮೂದ್, ಅಬ್ದು ಸಲಾಂ ಶಾಂತಿನಗರ, ಅಶ್ರಫ್ ಕಿರೋಡಿ, ಮೊಹಮದ್ ಶಾಫಿ ಕಿಯೋಡಿ, ಇಸ್ಮಾಯಿಲ್ ಎಚ್ ಗಾಂಧಿ ನಗರ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪೋಷಕರು ಮತ್ತು ಜಮಾತ್ ಸದಸ್ಯರು ಉಪಸ್ಥಿತರಿದ್ದರು. ಸದರ್ ಮೊಹಲ್ಲಿಂ ಅಬ್ದುರಹಿಮಾನ್ ಯಮಾನಿ ಸ್ವಾಗತಿಸಿದರು.












