ವೇಣೂರು: ಇಲ್ಲಿಯ ಮಹಾವೀರ ನಗರ ನಿವಾಸಿ ದಯಾನಂದ ಪ್ರಭು (70ವ) ರವರು ಅಲ್ಪಕಾಲದ ಅಸೌಖ್ಯದಿಂದ ಎ.2ರಂದು ಮೂಡಬಿದ್ರೆಯ ಸ್ವಗೃಹದಲ್ಲಿ ನಿಧನರಾದರು.
ಇವರು ಕೃಷಿಕರಾಗಿದ್ದು, ಹಲವು ದಶಕದ ಕಾಲ ಪಡ್ಡಂದಡ್ಕದಲ್ಲಿ ದಿನಸಿ ವ್ಯಾಪಾರ ನಡೆಸಿಕೊಂಡು ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.












