September 6, 2026
ಶುಭಾರಂಭಸಂಘ-ಸಂಸ್ಥೆಗಳು

ಧರ್ಮಸ್ಥಳದಲ್ಲಿ ಸೀರೆಗಳ ವಿಶೇಷ ಮಳಿಗೆ “ಸುನೀಲ್ ಸಿಲ್ಕ್ ಸಾರೀಸ್” ಶುಭಾರಂಭ-ಭಾರತೀಯ ಪರಂಪರೆಯಲ್ಲಿ ಸೀರೆಗೆ ವಿಶೇಷ ಸ್ಥಾನಮಾನವಿದೆ: ಶ್ರದ್ದಾ ಅಮಿತ್-ವಿನೂತನ ಶೈಲಿಯ, ಹತ್ತಾರು ಬಗೆಯ, ಉತ್ತಮ ಕಲೆಕ್ಷನ್ ನೊಂದಿಗೆ ಸೀರೆಗಳು ಲಭ್ಯ

ಧರ್ಮಸ್ಥಳ: ಇಲ್ಲಿನ ಕಲ್ಲೇರಿ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಸುನೀಲ್ ಸಿಲ್ಕ್ ಸಾರೀಸ್ ಇದರ ಶುಭಾರಂಭವು ಎ.5ರಂದು ನಡೆಯಿತು.

ನೂತನ ಸಂಸ್ಥೆಯ ದೀಪ ಪ್ರಜ್ವಲನೆಯನ್ನು ಬೆಂಗಳೂರು ಕ್ಷೇಮವನದ ಸಿಇಓ ಶ್ರದ್ದಾ ಅಮಿತ್ ನೇರವೇರಿಸಿ ಭಾರತೀಯ ಪರಂಪರೆಯಲ್ಲಿ ಸೀರೆಗೆ ವಿಶೇಷ ಸ್ಥಾನಮಾನವಿದೆ. ಈ ಸಂಸ್ಥೆಯು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭಕೋರಿದರು.

ಸೋನಿಯಾವರ್ಮ ನಿನಾದ ಉಜಿರೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಹಾಸ್ಟೆಲ್ ಮತ್ತು ಐಟಿ ವಿಭಾಗದ ಸಿಇಓ ಪೂರನ್ ವರ್ಮ, ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷ್ಣಸಿಂಗ್, ಧರ್ಮಸ್ಥಳ ಪಂಚಾಯತ್ ಪಿಡಿಓ ಗಾಯತ್ರಿ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

ಸಂಪತ್ ರೈ ಸ್ವಾಗತಿಸಿದರು. ಕಿರಣ್ ದೊಂಡೊಲೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಸುನಿಲ್ ಬೇಕಲ್ ಮತ್ತು ಪವಿತ್ರರವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Related posts

ಪಡ್ಡಂದಡ್ಕ ಮಂಜುಶ್ರಿ ಭಜನಾ ಮಂಡಳಿಯಲ್ಲಿ ಮಹಿಳಾ ದಿನಾಚರಣೆ

Suddi Udaya

ಪಡಂಗಡಿ ಸೊಸೈಟಿಯ ಎಸ್ ಮಾರ್ಟ್, ಭದ್ರತಾ ಕೊಠಡಿ ಉದ್ಘಾಟನೆ

Suddi Udaya

ಉಜಿರೆ ಪ್ರಗತಿ ಮಹಿಳಾ ಮಂಡಲದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

Suddi Udaya

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ತೋಳ್ಪಾಡಿತ್ತಾಯರಿಗೆ ಅಭಿನಂದನೆ: ಪ್ರಶಸ್ತಿಯಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ : ಹರ್ಷೇಂದ್ರ ಕುಮಾರ್

Suddi Udaya

ಕರಂಬಾರು: ಬೂಟ್ಟೆಲ್ಮಾರ್ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್ ಅಭಿವೃದ್ಧಿಗೆ ರೂ.1 ಲಕ್ಷ ಡಿ.ಡಿ. ವಿತರಣೆ

Suddi Udaya

ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ‘ಓಶಿಯನ್ ಎಂಪೈರ್ ಮಲ್ಟಿಕ್ಯೂಸಿನ್ ರೆಸ್ಟೊರೆಂಟ್’ ಉದ್ಘಾಟನೆ

Suddi Udaya
error: Content is protected !!