ಬೆಳ್ತಂಗಡಿ: ವಿಶ್ವದದ್ಯಾಂತ ಕ್ರೈಸ್ತರು ಆಚರಿಸುವ ತಪಸ್ಸು ಕಾಲದ 40 ದಿನಗಳಲ್ಲಿ ಕೊನೆಯ ದಿನವಾದ ಯೇಸುವಿನ ಪುನರುತ್ಥಾನದ ದಿನ ” ಈಸ್ಟರ್ ” ಹಬ್ಬವನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಯಿತು.
ಪವಿತ್ರ ಗರಿಗಳ ಭಾನುವಾರ : ಮಾ.29ರಂದು ಯೇಸು ಕ್ರಿಸ್ತರು ಜೆರುಸಲೇಮ್ ನಗರವನ್ನು ವಿಜಯೋತ್ಸವದೊಂದಿಗೆ ಪ್ರವೇಶಿಸದ ಸ್ಮರಣರ್ಥ ಆಚರಿಸಲಾಗುವ ” ಗರಿಗಳ ಭಾನುವಾರ ” ( Palm Sunday) ವನ್ನು ಆಚರಿಸಲಾಯಿತು. ಕ್ರೈಸ್ತ ಭಾಂದವರ ಅತ್ಯoತ ಪವಿತ್ರವಾದ ‘ ಪವಿತ್ರ ವಾರಕ್ಕೆ ‘ ಚಾಲನೆ ದೊರೆಯಿತು.
ಪವಿತ್ರ ಗುರುವಾರ : ಏ.3ರಂದು ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದು ವಿನಯತೆಯನ್ನು ಮೆರೆದ ನೆನಪಿಗಾಗಿ ಧರ್ಮಗುರುಗಳು 12 ಮಂದಿ ಪ್ರತಿನಿಧಿಗಳ ಪಾದಗಳನ್ನು ತೊಳೆದರು.
ಶುಭ ಶುಕ್ರವಾರ ( ಗುಡ್ ಫ್ರೈಡೆ ) : ಏ.3, ಕ್ರೈಸ್ತ ವಿಶ್ವಾಸಿಗಳ ಪಾಲಿನ ಅತ್ಯoತ ಪವಿತ್ರ ಹಾಗು ಶೋಕದ ದಿನವಾದ ” ಶುಭ ಶುಕ್ರವಾರ ” ವನ್ನು ಆಚರಿಸಲಾಯಿತು.
ಬೆಳಿಗ್ಗೆ ಮಕ್ಕಳಿಂದ ಶಿಲುಬೆಯ ಹಾದಿ ಹಾಗೂ ಸಂಜೆ ಶಿಲುಬೆಯ ಆರಾಧನೆ, ಪವಿತ್ರ ಪ್ರಸಾದ ಸ್ವೀಕಾರ ಹಾಗು ಕಷ್ಟಾನುಭವದ
ವಾಚನ ನಡೆಯಿತು.












