September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶುಭಾರಂಭ

ಬೆಳ್ತಂಗಡಿ ಸುವರ್ಣ ಆರ್ಕೆಡ್ ಕಟ್ಟಡದಲ್ಲಿ “ಹೊಟೇಲ್ ಸಮಡೈನ್” ಉದ್ಘಾಟನೆ

ಬೆಳ್ತಂಗಡಿ: ಕಳೆದ 35 ವರ್ಷಗಳಿಂದ ಬೆಳ್ತಂಗಡಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ “ಸಮಡೈನ್” ಸಂಸ್ಥೆಯ ನೂತನ ಹೊಟೇಲ್ ಏ.9 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

ಪೂರ್ವಾಹ್ನ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಯ್ಯಿದ್ ಎಸ್.ಎಂ ಕೋಯ ತಂಙಳ್ ಶುಭಾಶೀರ್ವಾದ ನೀಡಿದರು.
ಈ ವೇಳೆ ಹನೀಫ್ ಮುಸ್ಲಿಯಾರ್ ನಿಡಿಗಲ್, ಮುಹ್ಯುದ್ದೀನ್‌ ಉಜಿರೆ, ಯು. ಹೈದರ್ ಮದನಿ ಉಜಿರೆ, ಇಸ್ಮಾಯಿಲ್ ಸಖಾಫಿ ಡಿ.ಹೆಚ್ ಮಾಚಾರ್, ಹನೀಫ್ ಫೈಝಿ ಬೆಳ್ತಂಗಡಿ, ಮುಹಮ್ಮದ್ ನೌಶಾದ್ ಸಖಾಫಿ‌ ಮಲೆಬೆಟ್ಟು, ಸಿದ್ದೀಕ್‌ ಮದನಿ, ಫಾರೂಕ್‌ ಮದನಿ‌ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಬಳಿಕ‌ ಸುವರ್ಣ ಆರ್ಕೆಡ್ ಮಾಲಕ ನಾಣ್ಯಪ್ಪ ಪೂಜಾರಿ ರಿಬ್ಬನ್‌ ಕತ್ತರಿಸಿ ನೂತನ ಹೊಟೇಲ್ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ, ಇಬ್ರಾಹಿಂ ಸಖಾಫಿ‌ ಕಬಕ, ಸಾದಿಕ್‌ ಮಾಸ್ಡರ್ ಮಲೆಬೆಟ್ಟು, ಅನ್ವರ್ ಅಲಿ ಬೆಳ್ತಂಗಡಿ, ಸಿರಾಜ್ ಜೈಭಾರತ್ ಪುತ್ರಬೈಲು, ಅಶ್ರಫ್ ಆಲಿಕುಂಞಿ ಮುಂಡಾಜೆ, ಎನ್ ಉಸ್ಮಾನ್ ಪಣಕಜೆ, ಹೈದರ್ ಇಸ್ಮಾಯಿಲ್ ಮಲೆಬೆಟ್ಟು, ಪ್ರವೀಣ್ ಭಂಡಾರಿ ಬೆಳ್ತಂಗಡಿ, ಅನ್ಸಾರ್ ಮಲೆಬೆಟ್ಟು, ಹರೀಶ್ ಲಾಯಿಲ ಆದರ್ಶನಗರ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಿಕ ಅಬೂಬಕ್ಕರ್, ಅವರ ತಂದೆ ಹಮೀದ್ ಮಲೆಬೆಟ್ಟು, ಮಕ್ಕಳಾದ ಫಝಲ್, ಮುಝಮ್ಮಿಲ್, ರಸಿಲ್ ಇವರು ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.

Related posts

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಕಾಂಬೋಡಿಯ ತಂಡದಿಂದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

Suddi Udaya

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ವಿಶೇಷ ಪೂಜೆ

Suddi Udaya

ತುಳುವ ಮಹಾಸಭೆ ಬೆಳ್ತಂಗಡಿ ತಾಲೂಕು ಸಂಚಾಲಕರಾಗಿ ಡಾ. ದಿವ ಕೊಕ್ಕಡ ಆಯ್ಕೆ

Suddi Udaya

ಉಜಿರೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಗೆ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಕಾಂಗ್ರೆಸ್ ಸರಕಾರದ ವಿರುದ್ಧ ಹಾಲಿನ ದರ ಏರಿಕೆ, ಪ್ರೋತ್ಸಾಹ ಧನ ಬಿಡುಗಡೆ ಮಾಡದಿರುವ ಬಗ್ಗೆ ಬೆಳ್ತಂಗಡಿ ಮಹಿಳಾ ಮೋರ್ಚಾದ ವತಿಯಿಂದ ಬ್ಲ್ಯಾಕ್ ಟೀ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

Suddi Udaya
error: Content is protected !!