September 6, 2026
ಅಭಿನಂದನೆಗ್ರಾಮಾಂತರ ಸುದ್ದಿವರದಿ

ಎ.28 – ಮೇ1: ಮರೋಡಿ ಪೊಸರಡ್ಕ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಸಂಭ್ರಮ,ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರಿಂದ ಆಮಂತ್ರಣ ಪತ್ರಿಕೆ ಬಿಡುಗಡೆಶ್ರೀ ದೈವ,ಶ್ರೀ ಕೊಡಮಣಿತ್ತಾಯ ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ

ಮರೋಡಿ: ದೈವ,ಶ್ರೀ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಮರೋಡಿ ಪೊಸರಡ್ಕ ಇಲ್ಲಿನ ಬ್ರಹ್ಮಕುಂಭಾಭಿಷೇಕ ಸಂಭ್ರಮವು ಎ 28ರಿಂದ ಮೇ 1ರವರೆಗೆ ನಡೆಯಲಿದ್ದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪೊಸರಡ್ಕ ಕ್ಷೇತ್ರದ ಗತವೈಭವ ಪುನರ್ ನಡೆಯಲಿದೆ. ಈ ಕ್ಷೇತ್ರ ಅತ್ಯಂತ ಕಾರಣೀಕ ಕ್ಷೇತ್ರಗಳೊಂದು.ಕಾರ್ಯಕ್ರಮ ಅತ್ಯಂತ ವೈಭವವಾಗಿ ನಡೆಯಲಿ ಎಂದರು.

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ ಪೊಸರಡ್ಕ ಕ್ಷೇತ್ರದ ಬ್ರಹ್ಮಕುಂಭಾಭಿಷೇಕ ಅತ್ಯಂತ ವೈಭವೋಪೇತವಾಗಿ ನಡೆಯಲಿದೆ.‌ಊರ ಪರವೂರ ಭಕ್ತರ ಸಹಕಾರ ಅದ್ಬುತವಾಗಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು,ಗೌರವಾಧ್ಯಕ್ಷರಾದ ರಾಜೇಂದ್ರ ಬಳ್ಳಾಳ್,ಹೇಮರಾಜ್ ಕೆ,ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷರಾದ ಎಂ.ಎಸ್ ಪೂಜಾರಿ,ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್,ಆಡಳಿತ ಮಂಡಳಿ ಸಮಿತಿ ಸದಸ್ಯರಾದ ರಮೇಶ್ ಬಲಂತ್ಯರೊಟ್ಟು,ಪ್ರಮುಖರಾದ ನಿಖಿಲ್ ಬುಣ್ಣು,ಜಿತೇಶ್ ಜೈನ್ ಹರಂಬೆಟ್ಟು ಗುತ್ತು, ಸುಫಲಾ ಟೀಚರ್,ವಿಶು ಕುಮಾರ್ ಜೈನ್ ಪಾರೊಟ್ಟು,ಸುಂದರ ಕೋಟ್ಯಾನ್,ಆನಂದ ಶೆಟ್ಟಿ, ರವಿರಾಜ್ ಬಳ್ಳಾಲ್,ದಿವಾಕರ ಹೆಗ್ಡೆ,ರಾಮಣ್ಣ ಪೂಜಾರಿ,ಸುರೇಂದ್ರ ಬಳ್ಳಾಲ್,ಪ್ರಶಾಂತ್ ಮಚ್ಚಿನ ಮೊದಲಾದವರು,ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಆಡಳಿತಿ ಸಮಿತಿ ಕಾರ್ಯದರ್ಶಿ ಆದಿತ್ಯ ಪಿ.ಕೆ ಸ್ವಾಗತಿಸಿ,ವಂದಿಸಿದರು.

Related posts

ಕಳಿಯ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ 6ನೇ ವಷ೯ದ ವಾರ್ಷಿಕೋತ್ಸವ

Suddi Udaya

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಪ್ರಸಾದ್ ಅಜಿಲ, ಪ್ರಧಾನ ಸಂಚಾಲಕರಾಗಿ ಡಾ. ನಿರಂಜನ್ ರೈ ನೇಮಕ

Suddi Udaya

ಮೇ 7ರಂದು ಮೇಲಂತಬೆಟ್ಟು ಜೇಸಿಂತ ಮೋನಿಸ್ ರವರ ಅಂತ್ಯಕ್ರಿಯೆ

Suddi Udaya

ಅಂಡಿಂಜೆ: ನಿಸರ್ಗ ಸಂಜೀವಿನಿ ಮಹಿಳಾ ಒಕ್ಕೂಟದಿಂದ ತರಬೇತಿ ಕಾರ್ಯಾಗಾರ

Suddi Udaya

ಕೃಷಿಕ ಕಲಾಯ ದಾಮೋದರ ಬಂಗೇರ ನಿಧನ

Suddi Udaya

ವೇಣೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮ; 2 ಸಾವಿರ ಗಿಡಗಳ ನಾಟಿ

Suddi Udaya
error: Content is protected !!