24 C
ಪುತ್ತೂರು, ಬೆಳ್ತಂಗಡಿ
June 8, 2026
ಅಭಿನಂದನೆಗ್ರಾಮಾಂತರ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 53ನೇ ವಿಶೇಷ ಸೇವಾ ಯೋಜನೆ: ಉರಗ ಮಿತ್ರ ಸ್ನೇಕ್ ಅಶೋಕ್ ಗೆ ಗೌರವ

ಬೆಳ್ತಂಗಡಿ: ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಇದೆ. ಅದನ್ನು ಯಾವ ರೀತಿಯಾಗಿ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಆತನ ಜೀವನ ಶೈಲಿ ನಿಂತಿರುತ್ತದೆ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 53ನೇ ವಿಶೇಷ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಆಧುನಿಕ ಜಗತ್ತಿನಲ್ಲಿ ಯಾವುದೇ ಪ್ರತಿಫಲದ ಜೊತೆಗೆ ಸಂಭಾವನೆಯನ್ನು ಬಯಸದೆ ಸದಾ ಜನಸೇವೆಯ ಮೂಲಕ ಪ್ರತಿ ಮನೆಯಲ್ಲಿಯೂ ಮನೆಮಾತಾಗಿರುವ ಸ್ನೇಕ್ ಅಶೋಕ್ ಇವರ ಈ ಅದ್ಭುತ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ವತಿಯಿಂದ ಕೊಡಲ್ಪಟ್ಟ ರಕ್ಷಣಾ ಕವಚಗಳನ್ನು ಒಳಗೊಂಡ ಕಿಟ್ ನ್ನು ಅವರು ವಿತರಿಸಿದರು.

‘ಉರಗ ಮಿತ್ರ’ ಸನ್ಮಾನವನ್ನು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ನ್ಯಾಯವಾದಿ ಧನಂಜಯ್ ರಾವ್, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾಕಿರಣ್ ಕಾರಂತ್ ನೀಡಿ ಗೌರವಿಸಿದರು.

ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷ ರಾಜೇಶ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಅರುಣ್ ಕುಕ್ಕಾವು, ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಸಚಿನ್ ವರ್ಧನ್ ದಿನೇಶ್ ಕೋಟ್ಯಾನ್, ವಿನಯ್ ಗುರಿಪಲ್ಲ ವಿನೋದ್ ಶೆಣೈ, ಸುರೇಶ್ ಕುಲಾಲ್, ಸುರೇಂದ್ರ ಕೋಟ್ಯಾನ್, ಅನಿಲ್ ಉಜಿರೆಉಪಸ್ಥಿತರಿದ್ದರು.

Related posts

ಉಡುಪಿ-ಉಜಿರೆ ರಸ್ತೆಯುದ್ದಕ್ಕೂ ಮಹೇಶ್ ಶೆಟ್ಟಿ ತಿಮರೋಡಿಗೆ ಅಭಿಮಾನಿಗಳಿಂದ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ,ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ 16ನೇ ವರ್ಷದ ಸಾಂಸ್ಕೃತಿಕ ವೈಭವ , ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ-2026 ಪ್ರದಾನ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್ ಯಂತ್ರ ಕೆಟ್ಟು ಹೋದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ವಸಂತ ಬಂಗೇರ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ: ದೇವರ ದರ್ಶನ ಬಲಿ, ಪಲ್ಲ ಪೂಜೆ

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್ನಲ್ಲಿ ಮಳೆಗಾಲದ ವಿಶೇಷ ಮಾನ್ಸೂನ್ ಆಫರ್

Suddi Udaya

ಉಜಿರೆ ಕುಂಟಿನಿಯಲ್ಲಿ ಸಲಫೀ ಸಮಾವೇಶ

Suddi Udaya
error: Content is protected !!