23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಚ್ಚಿನ: ಕುದ್ರಡ್ಕ ಭಜನೋತ್ಸವ-2026 ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ ಟ್ರಸ್ಟ್ ಗುರುವಾಯನಕೆರೆ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಕುದ್ರಡ್ಕ ಮಚ್ಚಿನ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇವರ ಸಹಯೋಗದೊಂದಿಗೆ ಕುದ್ರಡ್ಕ ಭಜನೋತ್ಸವ-2026 ಎ.11 ಮತ್ತು 12ರಂದು ಏಕಾಹ ಭಜನೆ, 48 ನಾರೀಕೇಳ ಗಣಹೋಮ ಹಾಗೂ ಭಜನೋತ್ಸವ ಕಾರ್ಯಕ್ರಮ ನಡೆಯಿತು.

ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶಂಕರಾನಂದ ಶರಸ್ವತಿ ಸ್ವಾಮಿ ಕಾಶಿ ಮಠ ವಾರಾಣಸಿ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲೆಯ ಪ್ರಸಿದ್ಧ ಆಹ್ವಾನಿತ ಭಜನಾ ತಂಡಗಳ ಕೂಡುವಿಕೆಯಲ್ಲಿ ಭಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ರವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ ಎಸ್.ಎಸ್. ಮಾತನಾಡಿ ಸಂಗೀತಮಯವಾಗಿ ದೇವರನ್ನು ಸ್ಮರಿಸುವ ಭಜನೆ ಯು ಕೇವಲ ಧಾರ್ಮಿಕ ಕ್ರಿಯೆ ಯಲ್ಲ ಅದು ಮಾನಸಿಕ ಮತ್ತು ದೈಹಿಕ ಅರೋಗ್ಯ ಕ್ಕೆ ಪೂರಕ ವಾದ ಒಂದು ಅಮೃತ ಮಾರ್ಗವಾಗಿದೆ ಭಜನೆಯಿಂದ ಸಿಗುವ ಪ್ರಮುಖ ಪ್ರಯೋಜನ ಗಳು ಅನೇಕ ಲಯ ಭದ್ದವಾದ ಭಜನೆ ಮನಸ್ಸನ್ನು ಶಾಂತ ಗೊಳಿಸುತ್ತದೆ ಮತ್ತು ದಿನ ವಿಡಿ ಇರುವ ಕೆಲಸ ಒತ್ತಡ ಆತಂಕ ವನ್ನು ಕಡಿಮೆ ಮಾಡುತ್ತದೆ ದೇವರ ನಾಮಸ್ಮರಣೆ ಯಲ್ಲಿ ತೊಡಗಿದಾಗ ಮನಸ್ಸಿನ ಚಂಚಲತೆ ಕಡಿಮೆ ಯಾಗಿ ಏಕಾಗ್ರತೆ ಮತ್ತು ಸ್ಮರಣಶಕ್ತಿ ವೃದ್ಧಿಯಾಗುತ್ತದೆ ಗುಂಪಾಗಿ ಭಜನೆ ಮಾಡಿದಾಗ ಉಂಟಾಗುವ ಕಂಪನಗಳು ಮನೆಯಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದರು.

ಭಜನೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಆಯ್ದ ಭಜನಾ ಮಂಡಳಿಗಳ ಸಹಸ್ರಾರು ಭಜಕರಿಂದ ಭಜನಾ ಸೇವೆಯು ನಡೆಯಿತು. ಊರಪರವೂರ ಭಗವದ್ಭಕ್ತರು ಭಾಗವಹಿಸಿದ್ದರು.

ವಸಂತ ಮರಕಡ ನ್ಯಾಯವಾದಿಗಳು ಬೆಳ್ತಂಗಡಿ, ಹರ್ಷವರ್ದನ್ ಹೆಗ್ಡೆ, ವೇಣೂರು, ಡಾ|| ಹೆಗ್ಗಡೆಯವರ ಆಪ್ತ ಕಾರ್ಯದರ್ಶಿಗಳಾದ ಎ.ವೀರು ಶೆಟ್ಟಿ ಧರ್ಮಸ್ಥಳ, ಧರ್ಮಸ್ಥಳ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ರಮಾನಂದ ಬಂಗೇರ, ಪದ್ಮನಾಭ, ದುಗ್ಗಪ್ಪ ಗೌಡ, ವಸಂತ ಮಡಕಿಲ, ರಮಾನಂದ ಬಂಗೇರ ರಾಜೀವ್, ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ, ಜಗದೀಶ್, ಕುಮಾರ ನಾಯ್ಕ್, ನಾರಾಯಣ ಪೂಜಾರಿ, ಅವಿನಾಶ್ ಮಾಲಕರು ನಿತಿನ್ ಕುಲಾಲ್, ಅವಿನಾಶ ಕುಲಾಲ್, ಮೋಹನದ ಮಾನ್ಯ, ಶಿವರಾಮ್ ಆಚಾರ್ಯ, ಮೋಹನ್ ಕುಮಾರ, ಜಗದೀಶ್ ಶೆಟ್ಟಿ, ಕಲ್ಪನಾ ಉಜಿರೆ, ಸುರೇಶ ಮಡಡ್ಕ, ಸದಾನಂದ ಶೆಟ್ಟಿ, ಯೋಜನಾಧಿಕಾರಿ ಅಶೋಕ್ ಬಿ, ಸಂದೇಶ್ ಮಾದ್ದಡ್ಕ, ಕೇಶವ, ಶಶಿಧರ್ ಗೌಡ, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು, ಹಾಗೂ ಊರಿನ ಗಣ್ಯರು ಭಕ್ತಾದಿಗಳು ಉಪಸ್ಥಿತರಿದ್ದರು

Related posts

ಲಯನ್ಸ್ ಜಿಲ್ಲೆ 317ಡಿ ಕೃತಜ್ಞಾ ಪ್ರಶಸ್ತಿ ಪ್ರಧಾನ ಸಮಾರಂಭ: ವಸಂತ್ ಶೆಟ್ಟಿ ಶ್ರದ್ದಾರವರಿಗೆ ಅತ್ಯುತ್ತಮ ಪ್ರಾಂತೀಯ ಅಧ್ಯಕ್ಷ ಪ್ರಶಸ್ತಿ

Suddi Udaya

ಬೆಳ್ತಂಗಡಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

Suddi Udaya

ಕನ್ಯಾಡಿ-1: 25 ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಪ್ರಭಾರ ಮುಖ್ಯೋಪಾಧ್ಯಾಯ ಹನುಮಂತರಾಯ ರವರಿಗೆ ರಜತ ಸಂಭ್ರಮ

Suddi Udaya

ಎಸ್.ಐ.ಟಿ ಕಚೇರಿಗೆ ಆಗಮಿಸಿದ ಆಸ್ಪತ್ರೆಯ ವೈದ್ಯರು: ಅಸ್ಥಿಪಂಜರಗಳನ್ನು ಹೊರತೆಗೆಯುವ ಕಾರ್ಯಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಸವಣಾಲು: ಹೇರಾಜೆ ನಿವಾಸಿ ರಘು ಶೆಟ್ಟಿ ನಿಧನ

Suddi Udaya
error: Content is protected !!