ಬೆಳ್ತಂಗಡಿ: ಗುರುವಾಯನಕೆರೆ-ಅಳದಂಗಡಿ- ಕಾರ್ಕಳ ರಾಜ್ಯ ಹೆದ್ದಾರಿಯ ಸುಲ್ಕೇರಿ ಸಮೀಪ ಕಬ್ಬಿಣದ ಸರಳುಗಳನ್ನು ಕಾರ್ಕಳ ಕಡೆ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದರೆಗೆ ಗುದ್ದಿದ ಘಟನೆ ಶನಿವಾರ ನಡೆದಿದೆ. ಲಾರಿಗೆ ಹಾನಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.







