August 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಕಟ್ಟೂರು ಕಾಂಕ್ರೀಟ್ ಉತ್ಪನ್ನಗಳ ತಯಾರಿಕ ಘಟಕ ಶುಭಾರಂಭ:ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್-ಕಾಂಕ್ರೀಟ್ ಕಂಪೌಂಡ್ ವಾಲ್‌, ಕಾಳುಮೆಣಸು ಬೇಲಿ ಕಂಬ ಲಭ್ಯ

ಅಳದಂಗಡಿ: ಇಲ್ಲಿಯ ಶ್ರೀ ಗೌರೀಶ್ವರ ಆವರಣದಲ್ಲಿ ‘ಕಟ್ಟೂರು ಕಾಂಕ್ರೀಟ್ ಪ್ರಾಡಕ್ಟ್ ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್‌ಗಳು, ಕಂಪೌಂಡ್ ವಾಲ್‌ಗಳು, ಕಾಂಕ್ರೀಟ್ ಕಂಬಗಳು, ಮತ್ತು ಇತರ ಕಾಂಕ್ರೀಟ್ ಉತ್ಪನ್ನಗಳ ತಯಾರಿಕಾ ಕಾರ್ಖಾನೆಯ ಉದ್ಘಾಟನಾ ಸಮಾರಂಭವು ಎ.26ರಂದು ನಡೆಯಿತು.

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುಂಶೀಯ ಆಡಳಿತ ಮೊಕ್ತಸರರಾದ ಶರತ್‌ ಕೃಷ್ಣ ಪಡುವೆಟ್ನಾಯರವರು ದೀಪ ಪ್ರಜ್ವಲಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್,ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ,ದೈಗೋಳಿ ಸೇವಾಶ್ರಮದ ಡಾ.ಉದಯ ಕುಮಾರ್ ನೂಚಿ, ಪ್ರಗತಿಪರ ಕೃಷಿಕರಾದ ಜಯರಾಮ್ ಪೊಳ್ನಾಯ ಉಪಸ್ಥಿತರಿದ್ದರು.

ಸಾಧಕರಗೆ ಸನ್ಮಾನ: ಪ್ರಗತಿಪರ ಕೃಷಿಕ ರಾಜಪ್ರಸಾದ ಪೊಳ್ನಾಯ,ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ,ಪ್ರಗತಿ ಪರ ಕೃಷಿಕ ರಾಕೇಶ್ ಹೆಗ್ಡೆ ಬಳಂಜ,ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವೀಣಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಉದ್ದಿಮೆಯ ವಿಶೇಷತೆಗಳು:ಕಾಂಕ್ರೀಟ್ ಸಾಲಿಡ್ ಬ್ಲಾಕ್ಸ್ 4″, 6″ 8″, 0 ವಾಲ್, ಕಾಳುಮೆಣಸು ಕಂಬ, ಬೇಲಿ ಕಂಬ ಮತ್ತು ಇತರ ಕಾಂಕ್ರೀಟ್ ಉತ್ಪನ್ನಗಳನ್ನು ಲೋಡೀಂಗ್ ಮತ್ತು ಅನ್ನೋಡಿಂಗ್ ಸೌಲಭ್ಯ ಇರುವ ಕ್ರೇನ್ ಮೂಲಕ ಡೆಲಿವರಿ ಮಾಡಲಾಗುತ್ತದೆ.ಕಾಂಕ್ರೀಟ್ ಸಾಲಿಡ್ ಬ್ಲಾಕುಗಳನ್ನು ಮೊದಲನೇ ಮಹಡಿಗೆ ಲಾರಿಯಿಂದ ನೇರವಾಗಿ ಸ್ವಯಂಚಾಲಿತ ಯಂತ್ರದ ಮೂಲಕ ಇಡುವುದು. ಅತ್ಯಾಧುನಿಕ ರೀತಿಯಲ್ಲಿ ತಯಾರಿಸಿ ಕ್ಯೂರಿಂಗ್ ಮಾಡಲಾದ ಕಂಪೌಂಡ್ ವಾಲ್ಗಳನ್ನು ಅಳವಡಿಸಿಕೊಡುವುದು. ವೈಜ್ಞಾನಿಕ ರೀತಿಯಲ್ಲಿ ಕಾಳುಮೆಣಸು ಬೆಳೆಯಲು ಕಾಂಕ್ರೀಟ್ ಕಂಬಗಳನ್ನು ಅಳವಡಿಸಿಕೊಡುವುದು.ಬೇಲಿ ಕಂಬಗಳು, “ವೈ” ಕಂಬಗಳು, ಟಾಯ್ಲೆಟ್ ಪಿಟ್‌ಗಳು, ಲಿಂಟಲ್‌ಗಳು, ವಾಸ್ತು ರೀತಿಯಲ್ಲಿ ತುಳಸಿಕಟ್ಟೆ ಮತ್ತು ಇತರೇ ಕಾಂಕ್ರೀಟ್ ಉತ್ಪನ್ನಗಳನ್ನು ತಯಾರಿಸಿ ಕೊಡುವುದು.

ಕಟ್ಟೂರು ಕಾಂಕ್ರೀಟ್ ಪ್ರಾಡಕ್ಟ್ಉತ್ತಮ ಗುಣಮಟ್ಟದ ಕಾಂಕ್ರೀಟ್ ಉತ್ಪನ್ನಗಳನ್ನು ತಯಾರಿಸಿ ಸರಬರಾಜು ಮಾಡಲಾಗುತ್ತದೆ ಎಂದುಸಂಸ್ಥೆಯ ಪಾಲುದಾರರಾದ ಅವನೀಶ ಕಟ್ಟೂರು, ಬಿ.ಇ. ಮತ್ತು ಅನುರುದ್ದ ಕಟ್ಟೂರು, ಬಿ.ಇ. (ಸಿವಿಲ್) ತಿಳಿಸಿದರು.ಸಂದ್ಯಾ ಕಟ್ಟೂರು, ವಿದ್ಯಾ ಕಟ್ಟೂರು, ಅನುಷಾ ಭಟ್ ಲಾಡೆ ಪ್ರಾರ್ಥನೆಗೈದರು.ಕೃಷಿಕ ಶಂಕರ್ ಭಟ್ ಕಟ್ಟೂರು ಸ್ವಾಗತಿಸಿದರು.ರಾಜ್ ಪ್ರಸಾದ ಪೊಳ್ನಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅವನೀಶ್ ಕಟ್ಟೂರು ವಂದಿಸಿದರು.

Related posts

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಡಾ. ಹೆಗ್ಗಡೆ ಸಂತಾಪ

Suddi Udaya

ರಾಷ್ಟ್ರೀಯ ಸಬ್ ಜ್ಯೂನಿಯರ್ ವಾಲಿಬಾಲ್ ಪಂದ್ಯಾಟಕ್ಕೆ ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿ ಶ್ರೇಯಸ್ ಎಸ್ ಆಯ್ಕೆ

Suddi Udaya

ಮುಂಡಾಜೆ ವಲಯದ ಚಾರ್ಮಾಡಿ-ಬಿ ಕಾರ್ಯಕ್ಷೇತ್ರದಲ್ಲಿ ನೂತನ ಸರಸ್ವತಿ ಸ್ವಸಹಾಯ ಸಂಘ ಉದ್ಘಾಟನೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗಣೇಶ್ ಗೌಡ ನೆಲ್ಲಿಪಲ್ಕೆ ಬೆಂಬಲ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ವಿತರಣೆ

Suddi Udaya

ಪದ್ಮುಂಜ : ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

Suddi Udaya
error: Content is protected !!