ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವತಿಯಿಂದ ಸಂಘದ ಸದಸ್ಯ ರೈತರಿಗೆ ಸಬ್ಸಿಡಿ ದರದಲ್ಲಿ ಮೈಲುತುತ್ತು (Copper Sulphate) ವಿತರಣಾ ಕಾರ್ಯಕ್ರಮವನ್ನು ಇಂದು (ಜೂನ್ 2) ಫ್ಯಾಕ್ಸ್ ರೆಷನ್ ಮಾರಾಟ ವಿಭಾಗದ ಹಳೆಯ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸದಸ್ಯ ರೈತರಿಗೆ ಮೈಲುತುತ್ತು ವಿತರಿಸಿದರು. ಸಂಘದಲ್ಲಿ ಬೆಳೆಸಾಲ ಪಡೆದಿರುವ ಸದಸ್ಯ ರೈತರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ರೈತರ ಜಮೀನಿನ ಏಕರೆ ವಿಸ್ತೀರ್ಣದ ಆಧಾರದ ಮೇಲೆ ಮೈಲುತುತ್ತು ವಿತರಿಸಲಾಗುವುದು ಎಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ,ನಿರ್ದೇಶಕರಾದ ಶ್ರೀನಾಥ್ ಬಡೆಕೈಲು, ಪದ್ಮನಾಭ ಕಾಯಿಲ, ಪ್ರಮುಖರಾದ ಯೋಗೀಶ್ ಆಳಂಬಿಲ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕಾಯಿಲ, ಸಿಬ್ಬಂದಿಗಳಾದ ಸುಂದರ್ ಕೆಂಗುಡೇಲು, ಬಾಲಕೃಷ್ಣ ಉಪಸ್ಥಿತರಿದ್ದರು.












