ಗೇರುಕಟ್ಟೆ: ಇಲ್ಲಿಯ ನಾಳ ಗೋವಿಂದೂರು ಬಳಿ ವಿಎಂ ನರ್ಸರಿಯ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.

ನರ್ಸರಿಯನ್ನು ಅಜಿತ್ ಪ್ರಸಾದ್ ರೈ ಪುತ್ತೂರು ಉದ್ಘಾಟಿಸಿ ಶುಭಹಾರೈಸಿದರು. ವಂದನೀಯ ಬರ್ನಾಡ್ ರೋಡ್ರಿಗಸ್ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ ತಾಳ್ತಾಜೆ ಪ್ರಗತಿಪರ ಕೃಷಿಕರು ಉಪ್ಪಿನಂಗಡಿ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಾಲ್, ಕಳಿಯ ಸಿಎ ಬ್ಯಾಂಕಿನ ಮ್ಯಾನೇಜರ್ ಕವಿತಾ, ತಣ್ಣೀರುಪಂಥ ಸಿಎ ಬ್ಯಾಂಕ್ ಅಧ್ಯಕ್ಷ ದಯಾನಂದ ಕಲ್ಲಾಪು, ತಣ್ಣೀರುಪಂತ ಸಿಎ ಬ್ಯಾಂಕ್ ಮ್ಯಾನೇಜರ್ ಸುರೇಂದ್ರ ಪ್ರಸಾದ್, ಎಡ್ವಾರ್ಡ್ ರೆಬೆಲೋ ತಾಕೋಡೆ ಪರಿಸರ ಪ್ರೇಮಿ,
ತೆಕ್ಕಾರು ಸಿ ಎ ಬ್ಯಾಂಕ್ ಅಬ್ದುಲ್ ರಝಾಕ್ ಬಿ , ತೆಕ್ಕಾರು ಸಿಎ ಬ್ಯಾಂಕ್ ಮ್ಯಾನೇಜರ್ ರಾಘವೇಂದ್ರ , ಉಜಿರೆ ಅನುಗ್ರಹ ಬ್ಯಾಂಕ್ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್, ಉಪ್ಪಿನಂಗಡಿ ಕಥೋಲಿಕ್ ಬ್ಯಾಂಕ್ ಅಧ್ಯಕ್ಷ ಜೋಶ್ ಹಿಮಾಲಾಯ್ ,
ಶಶಿ ಪಡಾರ್ ವಿಟ್ಲ ಪ್ರಗತಿಪರ ಕೃಷಿಕ , ನಾಳ ಚರ್ಚಿನ ಉಪಾಧ್ಯಕ್ಷ ಅಲೆಕ್ಸ್ , ವಾಳೆಯ ಗುರಿಕಾರರಾದ ಲಿಗೋರಿ ಡಯಸ್ ಉಪಸ್ಥಿತರಿದ್ದರು.
ನರ್ಸರಿಯಲ್ಲಿ ಎಲ್ಲಾ ತರಹದ ಕಾಳುಮೆಣಸು & ಹಣ್ಣಿನ ಗಿಡಗಳು ಹಾಗೂ ರೋಗ ರಹಿತ, ಉತ್ತಮ ಗುಣಮಟ್ಟದ ಸಸ್ಯಗಳು ಲಭ್ಯವಿದೆ. ಡೆಲಿವರಿ ವ್ಯವಸ್ಥೆಯು ಇದೆ.












