ತೆಂಕಕಾರದೂರು: ನಮ ಮಾತೆರ್ಲ ಒಂಜೇ ಕಲಾತಂಡ ಅರುವ ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಹಿತೇಶ್ ಬೇಕಲ್ ತೆಂಕಕಾರಂದೂರು ಇವರಿಗೆ ಅಳದಂಗಡಿಯ ಸತ್ಯದೇವತೆಯ ಸನ್ನಿಧಾನದಲ್ಲಿ ಜೂ.4ರಂದು ಆರ್ಥಿಕ ಸಹಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ಗೌರವ ಅಧ್ಯಕ್ಷ ಅಳದಂಗಡಿಯ ಡಾ| ಎನ್.ಎಂ. ತುಳುಪುಳೆ, ದರ್ಶನ್ ಶೆಟ್ಟಿ ಅರುವ, ಕಿರಣ್ ಕುಮಾರ್, ಜ್ಯೋತಿಕಾ ಸ್ಟುಡೀಯೊ ಅಳದಂಗಡಿ, ಜನಾರ್ಧನ ಕೊಡಂಗೆ ಅರುವ, ಗಿರೀಶ್ ಕುಲಾಲ್ ನಾವರ, ರವಿ ಪೂಜಾರಿ ಕದಿರಾಜ ಸುಲ್ಕೇರಿಮೊಗ್ರು, ಬಾಲಕೃಷ್ಣ ಮೂಲ್ಯ ಸುಲ್ಕೇರಿ, ರಮೇಶ್ ಸುವರ್ಣ ಅರುವ ಉಪಸ್ಥಿತರಿದ್ದರು.












