ಗೇರುಕಟ್ಟೆ: ಕಳಿಯ ನ್ಯಾಯತರ್ಪು ಶಕ್ತಿ ಕೇಂದ್ರದ ವತಿಯಿಂದ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನರೇಂದ್ರ ಮೋದಿಜಿ ಅವರು 12 ವರ್ಷ ದೀರ್ಘವಾಗಿ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸಿದ್ದು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ರಿಂದ ನಾಳ ದುರ್ಗಾಪರಮೇಶ್ವರಿ ತಾಯಿಗೆ ಹೂವಿನ ಪೂಜೆ ನೆರವೇರಿತು.


ಈ ಸಂದರ್ಭದಲ್ಲಿ ಕಳಿಯ ಕೃಷಿ ಪತ್ತಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ,ಕ ಳಿಯ ನ್ಯಾಯತರ್ಪು ಹಾಲು ಸೊಸೈಟಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಕಳಿಯ ಪಂಚಾಯಿತಿನ ಮಾಜಿ ಅಧ್ಯಕ್ಷರುಗಳು, ಪಂಚಾಯಿತಿ ಸದಸ್ಯರುಗಳು, ,ಕಳಿಯ ನ್ಯಾಯತರ್ಪು ಬೂತಿನ ಎಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು , ಪದಾಧಿಕಾರಿಗಳು ಹಾಗೂ ಹಿರಿಯರು ಹಾಗೂ ಎಲ್ಲಾ ಕಾರ್ಯಕರ್ತರು ಭಾಗವಹಿಸಿದರು.













