ನಾರಾವಿ : ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ನಾರಾವಿ ಹಾಗೂ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ನಾರಾವಿ ಬಿಲ್ಲವ ಸಮಾಜದ ಒಂದನೇ ತರಗತಿಯಿಂದ ಪದವಿ ರವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ್ ಪೂಜಾರಿ ವಹಿಸಿದರು. ಕಾರ್ಯಕ್ರಮಕ್ಕೆ ನಾರಾವಿ ಸೂರ್ಯನಾರಾಯಣ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಚಾಲನೆ ನೀಡಿ ಮಾತನಾಡಿ ರಕ್ಷಿತ್ ಶಿವರಾಂ ಇವರ ಇಂತಹ ಒಂದು ಸಹಾಯಕ್ಕೆ ಅವರಿಗೆ ಧನ್ಯವಾದಗಳು ಇತ್ತರು. ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಮಾತನಾಡಿ ಬೆಸ್ಟ್ ಫೌಂಡೇಶನ್ ಇದರಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲು ಇಂತಹ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಮಾದರಿ ಎಂದು ತಿಳಿಸಿದರು.
ಜಯ ಪೂಜಾರಿ ಸ್ವಾಗತಿಸಿ , ಧನ್ಯವಾದವಿತ್ತರು. ಸುಮಾರು 159 ಮಕ್ಕಳಿಗೆ ಪುಸ್ತಕ ವಿತರಣೆ ನಡೆಸಲಾಯಿತು













