28 C
ಪುತ್ತೂರು, ಬೆಳ್ತಂಗಡಿ
August 5, 2026
ಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಯಕ್ಷ ಭಾರತಿಯಿಂದ ಯಕ್ಷಗಾನ ತಾಳಮದ್ದಳೆ

ಧರ್ಮಸ್ಥಳ: ಜೂ.18ರಂದು ಕನ್ಯಾಡಿಯ “ಆಧೀಶ್ ವಸತಿ ಗ್ರಹ”ದ ಸಭಾಮಂಟಪದಲ್ಲಿ ಪ್ರೇಮಲತಾ ಜೈನ್ ಅವರ 70ನೇ ಜನ್ಮದಿನೋತ್ಸವದ ಅಂಗವಾಗಿ ಯಕ್ಷ ಭಾರತಿ ತಂಡದಿಂದ ಯಕ್ಷಗಾನ ತಾಳಮದ್ದಳೆ “ಹೊಂಬುಜ ಕ್ಷೇತ್ರ ಮಹಾತ್ಮೆ” ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ , ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಪುರಂದರ ಬಜಿಲ, ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಸಾಕಾರ ರಾಜನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಮಾರಿದತ್ತನಾಗಿ ಚಂದ್ರಶೇಖರ ಧರ್ಮಸ್ಥಳ, ಪದ್ಮಿನಿಯಾಗಿ ಈಶ್ವರ ಪ್ರಸಾದ ಪಿವಿ, ಜಿನದತ್ತನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಪಾಚಕನಾಗಿ ಶಶಿಧರ ಕನ್ಯಾಡಿ, ಶ್ರೀಯಲೆಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಸಿದ್ದಾಂತ ಕೀರ್ತಿ ಮುನಿಗಳಾಗಿ ಮಹಾವೀರ ಪಾಂಡಿ ಕಾಂತಾವರ ಪಾತ್ರ ನಿರ್ವಹಿಸಿದರು.
ತಾಳಮದ್ದಲೆಯನ್ನು ಪ್ರಾಯೋಜಿಸಿದ ಪದ್ಮಪ್ರಸಾದ್ ಜೈನ್ ಮತ್ತು ಅವರ ಶ್ರೀಮತಿ ಅವರನ್ನು ಯಕ್ಷಭಾರತಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಯಕ್ಷಭಾರತಿಯ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.

Related posts

ಲೋಕಸಭಾ ಚುನಾವಣೆ : ನಾಳೆ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

Suddi Udaya

ಗೇರುಕಟ್ಟೆಯಲ್ಲಿ ತಡರಾತ್ರಿ ತ್ಯಾಜ್ಯ ಎಸೆದವನಿಗೆ ಬಿತ್ತು ದಂಡ: ಪಂ.ಸದಸ್ಯರ, ಅಭಿವೃದ್ಧಿ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷರ ತಡರಾತ್ರಿ ಕಾರ್ಯಾಚರಣೆ

Suddi Udaya

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಹೂಡಿಕೆದಾರರ ಅರಿವು ಜಾಗೃತಿ ಕಾರ್ಯಾಗಾರ

Suddi Udaya

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಉಪ ತಹಶೀಲ್ದಾರ್ ರವರ ಮೂಲಕ ರಾಜ್ಯಪಾಲರಿಗೆ ಮನವಿ

Suddi Udaya

ರಜತ ಮಹೋತ್ಸವದ ಸಂಭ್ರಮದಲ್ಲಿ ವಾಮಂಜೂರಿನ ಎಸ್ ಡಿ ಎಂ ಸಮಗ್ರ ಶಾಲೆ: ಕಲೋತ್ಸವದ ವೇದಿಕೆಯಲ್ಲಿ ಮಿಂಚಿದ ವಿಶೇಷ ಮಕ್ಕಳು

Suddi Udaya

ಉಜಿರೆಯಲ್ಲಿ ಹಲಸು ಮತ್ತು ಹಣ್ಣಿನ ಮೇಳದ ಉದ್ಘಾಟನೆ

Suddi Udaya
error: Content is protected !!