ಬೆಳ್ತಂಗಡಿ ತಾಲ್ಲೂಕಿನ ಬಳಂಜ ಗ್ರಾಮದ ತಕ್ವ ಜುಮ್ಮಾ ಮಸೀದಿ ಬಳಂಜ ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯ ಕ್ರಮ ಮಸೀದಿ ವಠಾರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ದೇಶದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷರಾದ ಜನಾಬ್ ಉಸ್ಮಾನ್ ರವರು ನೆರವೇರಿಸಿದರು. ಜಮಾಅತಿನ ಹಿರಿಯರು ಯುವಕರು, ಮದರಸ ವಿದ್ಯಾರ್ಥಿಗಳು, ಆಡಳಿತ ಕಮಿಟಿಯ ಸದಸ್ಯರು ಪರಿಸರದ ನೂರಾರು ಜನರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಸ್ವಾತಂತ್ರ್ಯೋತ್ಸವ ಸಂಭ್ರಮದ ಬಗೆಯಾಗಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ವಿಜಯಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ಇದರ ಪ್ರಾಯೋಜಕತ್ವವನ್ನು ರಿಯಾಝ್ ಕಾಪಿನಡ್ಕ ವಹಿಸಿದ್ದರು. ಮಸೀದಿಯ ಖತೀಬರಾದ ಝಮೀರ್ ಸಅದಿ ವಲ್ ಫಾಝಿಲ್ ದುಆ, ಸ್ವಾತಂತ್ರ್ಯೋತ್ಸವದ ಆಶಂಸ ಭಾಷಣ ನೆರವೇರಿಸಿದರು. ನೆರೆದ ಸಭಿಕರಿಗೆ , ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ , ಸಿಹಿತಿಂಡಿ ಹಂಚಲಾಯಿತು. ಪ್ರಯೋಜಕತ್ವವನ್ನು ಸ್ವಾದೀಕ್ ಬಳಂಜ ವಹಿಸಿದ್ದರು.












