22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಎಕೆಎಮ್ಎಸ್ಎಸ್ ಬೆಳ್ತಂಗಡಿ ‌ಘಟಕದ ಪ್ರಥಮ ವರ್ಷದ ಕುಟುಂಬ ಮಿಲನ ಕಾರ್ಯಕ್ರಮ

ಬೆಳ್ತಂಗಡಿ: ಎಕೆಎಮ್ಎಸ್ಎಸ್ (ರಿ) ದ.ಕ ಜಿಲ್ಲಾ ಬೆಳ್ತಂಗಡಿ ‌ಘಟಕದ ಪ್ರಥಮ ವರ್ಷದ ಕುಟುಂಬ ಮಿಲನ ಕಾರ್ಯಕ್ರಮ ಏ.14ರಂದು ಬಲಿಪ ರೆಸಾರ್ಟ್ ನಲ್ಲಿ ನಡೆಯಿತು.

ಎಕೆಎಮ್ಎಸ್ಎಸ್ ತಾಲೂಕು ಘಟಕದ ಅಧ್ಯಕ್ಷ ಎನ್.ಪಿ ತಂಗಚ್ಚನ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವು ಬಲಿಪ ರೆಸಾರ್ಟ್‌ ಮಾಲಕರು ಬೆಳ್ತಂಗಡಿ ತಾಲೂಕಿನ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಲಯನ್ ಮುರಳಿ ಬಲಿಪ ಎಮ್.ಜೆ.ಎಫ್ ದಂಪತಿಗಳಿಂದ ದೀಪ ಬೆಳಗಿಸುವ ಮೂಲಕ ಚಾಲನೆಗೊಂಡಿತು.

ವೇದಿಕೆಯಲ್ಲಿ ಇತ್ತೀಚಿಗೆ ರಾಷ್ಟ್ರ ಪ್ರಶಸ್ತಿ ಪಡೆದ ದ.ಕ ಜಿಲ್ಲಾ ಎಕೆಎಮ್ಎಸ್ಎಸ್ ಗೌರವಾಧ್ಯಕ್ಷರು ಲಯನ್ ಡಾ. ಗೋಪಾಲಕೃಷ್ಣ ಕಾಂಚೋಡು ದಂಪತಿಗಳನ್ನು ಮತ್ತು ಲಯನ್ ಮುರಳ ಬಲಿಪ ದಂಪತಿಗಳನ್ನು ಸನ್ಮಾನಿಸಲಾಯಿತು.

‌ತಾಲೂಕು ಘಟಕದ ಗೌರವಾಧ್ಯಕ್ಷರಾದ ಎಮ್.ಕೆ ಮಣಿ ಕಾರ್ಯದರ್ಶಿ ಸುರೇಶ್ ಗೌಡ ಅಧ್ಯಕ್ಷ ತಂಗಚ್ಚನ್ ದಂಪತಿಗಳು ಉಪಸ್ಥಿತರಿದ್ದರು.ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಸದಸ್ಯರು ಕುಟುಂಬದ ಸದಸ್ಯರು ಭಾಗವಹಿಸಿದರು. ಮಹಿಳೆಯರಿಗೆ, ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆದವು. ಮಧ್ಯಾಹ್ನದ ಭೋಜನದ ನಂತರ ಮಕ್ಕಳು ಈಜು ಕೊಳದಲ್ಲಿ ಈಜಾಡಿ ಪೂರ್ಣ ಪ್ರಮಾಣದ ರಜೆಯ ಮಜಾ ಅನುಭವಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ವಿಕ್ರಂ ಗೌಡ ನಿರೂಪಿಸಿ, ಸುರೇಶ್ ಗೌಡ ಸ್ವಾಗತಿಸಿ, ಹರೀಶ್ ಶೆಟ್ಟಿ ವಂದಿಸಿದರು.

Related posts

ಸುಯ೯ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ: ವಿಶೇಷ ಪೂಜೆ ಸಲ್ಲಿಸಿದ ಸಚಿವ ದಂಪತಿ

Suddi Udaya

ಕರ್ನಾಟಕ ರಾಜ್ಯ ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿಗೆ ಈಶ್ವರಿ ಪದ್ಮುಂಜ ಆಯ್ಕೆ

Suddi Udaya

ಅಳದಂಗಡಿ ಶ್ರೀ‌ ಸತ್ಯಸಾರಮುಪ್ಪಣ್ಯ ದೈವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ

Suddi Udaya

ಪುಂಜಾಲಕಟ್ಟೆ -ಚಾರ್ಮಾಡಿ ಅವೈಜ್ಞಾನಿಕ ಕಾಮಗಾರಿಯಿಂದ ಬೇಸತ್ತ ನಾಗರಿಕರು

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿ ಹಬ್ಬದ ಸಂಭ್ರಮಾಚಾರಣೆ ಆಚರಣೆ

Suddi Udaya

ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ ಅಮಾನವೀಯ : ಭಯೋತ್ಪಾದಕರನ್ನು ಈ ದೇಶದಿಂದ ಬೇರು ಸಮೇತ ಕಿತ್ತು ಹಾಕಬೇಕಿದೆ, ಕಿರಣ್ ಚಂದ್ರ ಪುಷ್ಪಗಿರಿ ಖಂಡನೆ

Suddi Udaya
error: Content is protected !!