23.5 C
ಪುತ್ತೂರು, ಬೆಳ್ತಂಗಡಿ
June 8, 2026
ಅಪರಾಧ ಸುದ್ದಿ

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ನಿಡ್ಲೆ
ಪಿಲಿಕಜೆ ನಿವಾಸಿ ದಿನೇಶ ನೇಣು ಬಿಗಿದು ಆತ್ಮಹತ್ಯೆ

ನಿಡ್ಲೆ : ಇಲ್ಲಿಯ ಪಿಲಿಕಜೆ ನಿವಾಸಿ ದಿನೇಶ ( 36 ವ) ಎಂಬವರು ಸುಮಾರು ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 11 ರಂದು ನಡೆದಿದೆ.
ಮಾ.10 ರಂದು ಮಧ್ಯಾಹ್ನ ಊಟ ಮಾಡಿ ಸಂಜೆ ಸುಮಾರು 3 ಗಂಟೆಯವರೆಗೆ ಮನೆಯಲ್ಲಿ ಇದ್ದವರು ಬಳಿಕ ನಾಪತ್ತೆ ಯಾಗಿದ್ದರು. ರಾತ್ರಿಯಾದರೂ ಮನೆಗೆ ವಾಪಾಸು ಬರಲಿಲ್ಲ .ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಲಿಲ್ಲ. ಮೂರು ದಿನ ಮಾ.11 ರಂದು ಬೆಳಿಗ್ಗೆ ಮನೆಯವರು ಸೇರಿ ಹುಡುಕಿದಾಗ ಗುಡ್ಡ ಜಾಗದಲ್ಲಿ ಒಂದು ಮರದ ಕೊಂಬೆಗೆ ಸೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ದಿನೇಶರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿ ದ್ದವರು ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿ
ರಬಹುದೆಂದು ಸಂಶಯಿಸಲಾಗಿದೆ. ಈ ಬಗ್ಗೆ ಮೃತರ ತಾಯಿ ಲಕ್ಷ್ಮಿ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ ಮತ್ತು ಕಾನೂನಿನ ಕಲಂ 21/2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ದಕ್ಷಿಣ ಕನ್ನಡ: ಬೆಳ್ತಂಗಡಿ ಸೇರಿದಂತೆ 5 ತಾಲೂಕುಗಳಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ

Suddi Udaya

ಮಂಗಳೂರು ಮಾಂಡೋವಿ ಮೋಟಾರ್ಸ್ ಉದ್ಯೋಗಿ, ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ ಬೈಕ್ ಅಪಘಾತದಲ್ಲಿ ಮೃತ್ಯು

Suddi Udaya

ಬಾರ್ಯ: ಬನ್ನೆoಗಳ ಸೇತುವೆ ಮೇಲೆ ಪ್ರಾಣಿ ತ್ಯಾಜ್ಯ ಎಸೆದು ವಿಕೃತಿ ಮೆರೆದ ಕಿಡಿಗೇಡಿಗಳು

Suddi Udaya

ಕೊಕ್ಕಡ: ಅಕ್ರಮ ಗೋಮಾಂಸ ಮಾಡುತ್ತಿದ್ದ ಅಡ್ಡೆಗೆ ಪೊಲೀಸ್ ದಾಳಿ: ಆರೋಪಿ ಪರಾರಿ

Suddi Udaya

ಪಟ್ರಮೆ ಪಟ್ಟೂರಿನ ನೆರೆಕರೆಯ ಇಬ್ಬರು ಯುವತಿಯರು ಒಂದೇ ದಿನ ಮೃತ್ಯು: ಹೊಟ್ಟೆನೋವಿನಿಂದ ಅಸ್ವಸ್ಥಗೊಂಡಿದ್ದ ರಕ್ಷಿತಾ ಹಾಗೂ ಲಾವಣ್ಯ

Suddi Udaya

ಧರ್ಮಸ್ಥಳ ಆನೆ ಮಾವುತ ನಾರಾಯಣ ಮತ್ತು ಯಮುನಾ ಕೊಲೆ ಪ್ರಕರಣ ಎಸ್‌ಐಟಿ ಗೆ ದೂರು ನೀಡಲು ಬಂದ ಆನೆ ಮಾವುತನ ಮಕ್ಕಳು

Suddi Udaya
error: Content is protected !!