23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

ಶಿಶಿಲ : ಕರ್ಮ ಭೂಮಿ, ಜ್ಞಾನ ಭೂಮಿಯಲ್ಲಿ ಭಗವಂತನ ಅವತಾರವಾಯಿತು. ಭಗವಂತ ಭಕ್ತರ ನಂಬಿಕೆಯಲ್ಲಿ ವಾಸಿಸುತ್ತಾನೆ. ಅಂತಹ ಭಗವಂತ ಶ್ರೀರಾಮ ಸೇವಕ ಹನುಮಂತ. ಎಲ್ಲಿ‌ ರಾಮನೊ ಅಲ್ಲಿ ಹನುಮ .ಎಲ್ಲಿ ಹನುಮನೊ ಅಲ್ಲಿ ರಾಮ. ಕಪಿಗಳು ರಾಮ ನಾಮದಿಂದ ಉದ್ದಾರವಾದವು. ಸ್ವಾಮಿ ಭಕ್ತಿಗೆ ಹನುಮಂತ ಉತ್ತಮ ಉದಾಹರಣೆ. ಜೀವನ ಸಾಗರವನ್ನು ದಾಟಲು ಹನೂಮ ಸ್ಮರಣೆ ಪೂರಕ . ಅಂತಹ ಶಕ್ತಿಯನ್ನು ನಾವೆಲ್ಲಾ ಈದಿನ ಭಕ್ತಿಯಿಂದ ಸ್ಮರಿಸುತ್ತಿದ್ದೆವೆ ಎಂದು ಹಿರಿಯ ವಿದ್ವಾಂಸರೂ, ಜ್ಯೋಷಿಗಳು ದಾವಣಗೆರೆಯ ವೆ. ಬ್ರಹ್ಮ ಶ್ರೀ ರಾಘವೇಂದ್ರ ಆಚಾರ್ಯ ಶುಭಾಶಯ ನುಡಿದರು.

ಶಿಶಿಲ ಶಿವಕೀರ್ತಿನಿಲಯದಲ್ಲಿ ನಡೆದ ಹನೂಮ ಜಯಂತಿ ಆಚರಣೆಯಲ್ಲಿ ಅವರು ಅಶೀರ್ವಚನ ನೀಡಿದ್ದರು.

ಕಾರ್ಯಕ್ರಮ ಉದ್ಘಾಟನೆಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆಡಳಿತ‌ ಮಂಡಳಿ ಸದಸ್ಯ ಶೇಖರ ನಾರಾವಿ ಉದ್ಘಾಟಿಸಿ ಮಕ್ಕಳಲ್ಲಿ ಧಾರ್ಮಿಕ ಭಾವನೆ ಮಾಡುವಲ್ಲಿ ಭಜನೆ ಪೂರಕ ಎಂದು ನುಡಿದರು.
ಮಖ್ಯ ಅಥಿತಿಗಳಾಗಿ ವಿಪ್ರ ಸಮೂಹ ಸಂಸ್ಥೆ ಬೆಂಗಳೂರಿನ ನಿರ್ದೆಶಕ ರಾಘವೇಂದ್ರ ಇವರು ಆಶಯ ನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ರಾಘವೇಂದ್ರ ಕಿಗ್ಗ, ಶ್ರೀನಿವಾಸ ಮೂಡೆತ್ತಾಯ. ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಭಜನಾ ತರಬೇತಿದಾರರಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ದಂಪತಿಗಳನ್ನು ಶ್ರೀ ಜಯರಾಮ ನೆಲ್ಲಿತ್ತಾಯರ ಮನೆ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಬಿಳಿನೆಲೆ ಗೋಪಾಲ ಕೃಷ್ಣ ಮಹಿಳಾ ಮತ್ತು ಪುರುಷ ಭಜನಾ ಮಂಡಳಿ ಮತ್ತು ಅರಸಿನಮಕ್ಕಿ ಮಕ್ಕಳ ಭಜನಾ ಮಂಡಳಿಯ ಸದಸ್ಯರು ಆಕರ್ಷಕ ಕುಣಿತ ಭಜನೆ ನೆರವೇರಿಸಿದ್ದರು.

ಬಿ.ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿದರು. ಶ್ರೀಮತಿ ಅಮಿತಾ ಧನಂಜಯ ಪ್ರಾರ್ಥನೆ ಮಾಡಿದ್ದರು. ಸೊಮಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು , ಶ್ರೀಮತಿ ಪ್ರೀತಿಕಾ ಯಶಸ್ ಧನ್ಯವಾದವಿತ್ತರು. ಭಜನೆ, ಹನುಮ ಪೂಜೆ, ರಾಮಾಯಣ ಗ್ರಂಥ ಪೂಜೆ, ಕುಣಿತ ಭಜನೆಯಲ್ಲಿ ಕಾರ್ಯಕ್ರಮ ಅತ್ಯಂತ ಭಕ್ತಿ ಪೂರಕವಾಗಿ ನೆರವೇರಿತ್ತು.

Related posts

ಅಳದಂಗಡಿ: ಸೂಳಬೆಟ್ಟು ನಿವಾಸಿ ವಾಣಿ ಜೋಶಿ ನಿಧನ

Suddi Udaya

ನಾಪತ್ತೆಯಾಗಿದ್ದ ಕೊಯ್ಯೂರು ನಿವಾಸಿ ಮುಹಮ್ಮದ್ ಯಾಸಿರ್ ಬೆಂಗಳೂರಿನಲ್ಲಿ ಪತ್ತೆ

Suddi Udaya

ಬೆಳ್ತಂಗಡಿ : ವಾಣಿ ಶಿಕ್ಷಣ ಸಂಸ್ಥೆಯಲ್ಲಿ ‘ವಾಣಿ ವಿದ್ಯಾ ಸಮ್ಮಾನ್’ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಂ ಭೇಟಿ

Suddi Udaya

ಉಜಿರೆ : ಪ್ರಗತಿ ಮಹಿಳಾ ಮಂಡಲ ನೇತೃತ್ವದಲ್ಲಿ ಚಿಲಿಪಿಲಿ 2024 ಬೇಸಿಗೆ ಶಿಬಿರದ ಸಮಾರೋಪ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!